ಲಾಕ್ ಡೌನ್ ನಡುವೆಯೇ ನಡುರಾತ್ರಿ ಹಾರನಹಳ್ಳಿಯಲ್ಲಿ ಗಲಭೆ
ಶಿವಮೊಗ್ಗ, ಏಪ್ರಿಲ್ 29: ಶಿವಮೊಗ್ಗದ ಹಾರನಹಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆದಿದೆ.
Recommended Video
ತಮ್ಮ
ಕ್ಷೇತ್ರದ
ಜನರ
ಕಷ್ಟಕ್ಕೆ
ದಾವಿಸಿ
ಬಂದ
ಕುಮಾರ್
ಬಂಗಾರಪ್ಪ
|
Kumar
Bangarappa
|
oneindia
Kannada
ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಹಾರನಹಳ್ಳಿ ಭಾಗದಲ್ಲಿ ಗೋವುಗಳ ಕಳ್ಳ ಸಾಗಣೆ ಪ್ರಕರಣಗಳು ಹೆಚ್ಚಿದ್ದು, ಇದೇ ಘರ್ಷಣೆಗೆ ಕಾರಣ ಎನ್ನಲಾಗಿದೆ. ಪೊಲೀಸರು ಲಾಕ್ ಡೌನ್ ಭದ್ರತೆಯಲ್ಲಿರುವುದರಿಂದ ಗೋವುಗಳ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ.
ಚಿತ್ರಗಳು : ಗಲಭೆ ಬಳಿಕ ಪಾದರಾಯನಪುರ ಕಂಡಿದ್ದು ಹೀಗೆ
ಎರಡು ದಿನಗಳ ಹಿಂದೆ ಕರು ಕಳ್ಳಸಾಗಣೆ ಮಾಡುತ್ತಿರುವಾಗ ಕರುವನ್ನು ರಕ್ಷಿಸಿ ರಾಮಚಂದ್ರಾಪುರ ಮಠಕ್ಕೆ ಭಜರಂಗದಳದ ಕಾರ್ಯಕರ್ತರು ಬಿಟ್ಟಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ಘರ್ಷಣೆ ನಡೆದಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪರಸ್ಪರ ಕಲ್ಲು ತೂರಾಟವೂ ನಡೆದಿದೆ.
ಸ್ಥಳಕ್ಕೆ ಕುಂಸಿ ಠಾಣೆ ಪೊಲೀಸರು ತೆರಳಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
Comments
English summary
Quarrel at midnight in haranahalli of shivamogga in relation to cow theft
Story first published: Wednesday, April 29, 2020, 18:35 [IST]