ಸಾಗರ ಮಾರಿಕಾಂಬಾಗೆ ಬಾಗೀನ ಅರ್ಪಿಸಿದ ಪ್ರಮೋದಾದೇವಿ
ಶಿವಮೊಗ್ಗ, ಫೆಬ್ರವರಿ 25: ಸಾಗರ ಮಾರಿಕಾಂಬಾ ದೇವಿಗೆ ಮೈಸೂರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಇಂದು ಬಾಗೀನ ಸಮರ್ಪಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಕಳೆದ ಒಂದು ವಾರಗಳಿಂದ ಅದ್ಧೂರಿಯಾಗಿ ನಡೆಯುತ್ತಿದ್ದು, ಸಾಗರ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಈ ಬಾರಿಯೂ ಮೈಸೂರು ಸಂಸ್ಥಾನ ರಾಜಾಮಾತೆ ಪ್ರಮೋದಾ ದೇವಿ ಅವರು ಆಗಮಿಸಿ ದೇವಿಯ ದರ್ಶನವನ್ನು ಪಡೆದುಕೊಂಡರು.
ರಾಜ್ಯದ ಪ್ರಸಿದ್ದ ಸಾಗರ ಮಾರಿಕಾಂಬಾ ಜಾತ್ರೆಗೆ ಇಂದು ಚಾಲನೆ
ಜಾತ್ರಾ ಮಹೋತ್ಸವ ಆಗಮಿಸಿ ಮಾರಿಕಾಂಬಾ ದೇವಿಗೆ ಬಾಗೀನ ಸಮರ್ಪಿಸಿದರು. ರಾಜಮಾತೆ ಪ್ರಮೋದದೇವಿ ಒಡೆಯರ್ ಬಳಿಕ ಕಾರ್ಗಲ್ ನ ಚಾಂಮುಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.
ಶಿವಮೊಗ್ಗದಲ್ಲಿ ಉದ್ಯೋಗ ಮೇಳ; ನಿಮ್ಮ ಹೆಸರು ನೋಂದಾಯಿಸಿ
ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಸಾಗರ ಮಾರಿಕಾಂಬಾ ಜಾತ್ರೆಗೆ ಮೈಸೂರು ಸಂಸ್ಥಾನದ ರಾಜಮನೆತನದಿಂದ ಬಾಗೀನ ನೀಡುವ ಸಂಪ್ರದಾಯ ಇದೆ. ಅದೇ ರೀತಿ ರಾಜಮಾತೆ ಪ್ರಮೋದಾದೇವಿ ಇಂದು ಆಗಮಿಸಿ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.