ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೆಲುವು ಬಿಜೆಪಿಗೇ ಎಂದು ಸಾಕ್ಷಿ ಕೊಟ್ಟ ಯಡಿಯೂರಪ್ಪ!

|
Google Oneindia Kannada News

Recommended Video

ಬಿಜೆಪಿಗೆ ಈ ಬಾರಿ ಗೆಲುವು ನಿಶ್ಚಿತ ಎಂದ ಬಿ ಎಸ್ ಯಡಿಯೂರಪ್ಪ | Lok Sabha Elections 2019 | Oneindia Kananda

ಶಿವಮೊಗ್ಗ, ಏಪ್ರಿಲ್ 20: "ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಅಪವಿತ್ರ ಮೈತ್ರಿ ಸರ್ಕಾರವನ್ನು ಧಿಕ್ಕರಿಸಿದ್ದಾರೆ. ಅವರಿಗೆ ಬಿಜೆಪಿಯನ್ನು ಅಧಿಕಾರದಲ್ಲಿ ನೋಡುವಾಸೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶಿವಮೊಗ್ಗದಲ್ಲಿ ನಡೆದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದ ಸಮಾವೇಶದಲ್ಲಿ ನೆರೆದಿದ್ದ ಜನಸ್ತೋಮದ ಚಿತ್ರವೇ ಅದಕ್ಕೆ ಸಾಕ್ಷಿ ಎಂದು ಆ ಚಿತ್ರಗಳನ್ನು ಯಡಿಯೂರಪ್ಪ ಟ್ವೀಟಿಸಿದ್ದಾರೆ.

ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ಶಿವಮೊಗ್ಗದಲ್ಲಿ ಶನಿವಾರ ಅಮಿತ್ ಶಾ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಕೇವಲ ಮೂರೇ ಮೂರು ನಿಮಿಷ ಮಾತನಾಡಿದ ಅಮಿತ್ ಶಾ, 'ಉರಿ ಬಿಸಿಲಿನಲ್ಲಿ ನೀವು ಬಂದಿರುವುದು ಸಂತಸ ತಂದಿದೆ, ಈ ಬಾರಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕಿದೆ, ರಾಘವೇಂದ್ರ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಗೆಲ್ಲಿಸಬೇಕಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿಯವರನ್ನು ಗೆಲ್ಲಿಸಲೇಬೇಕಿದೆ' ಎಂದರು.

ಶಿವಮೊಗ್ಗದಲ್ಲಿ ಮೂರೇ ನಿಮಿಷಕ್ಕೆ ಭಾಷಣ ಮುಗಿಸಿದ ಅಮಿತ್ ಶಾಶಿವಮೊಗ್ಗದಲ್ಲಿ ಮೂರೇ ನಿಮಿಷಕ್ಕೆ ಭಾಷಣ ಮುಗಿಸಿದ ಅಮಿತ್ ಶಾ

People of Karnataka decided to root out JDS-Congress alliance: BSY

ಈ ಸಮಾವೇಶವನ್ನು ಯಶಸ್ವಿ ಎಂದು ಕರೆದ ಯಡಿಯೂರಪ್ಪ, "ಕಾಂಗ್ರೆಸ್ -ಜೆಡಿಎಸ್ ನ ಅಪವಿತ್ರ ಮೈತ್ರಿಯನ್ನು ಬುಡಸಮೇತ ಕಿತ್ತೆಸೆಯಲು ಜನ ಮನಸ್ಸು ಮಾಡಿದ್ದಾರೆ ಎಂಬುದಕ್ಕೆ ಜನರು ಈ ಪರಿ ನೆರೆದಿರುವುದೇ ಸಾಕ್ಷಿ ಎಂದಿದ್ದಾರೆ."

English summary
BJP state president BS Yeddyurappa told, People of Karnataka have clearly decided to root out the unholy and corrupt alliance of JDS-Congress. They want BJP .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X