ಗೆಲುವು ಬಿಜೆಪಿಗೇ ಎಂದು ಸಾಕ್ಷಿ ಕೊಟ್ಟ ಯಡಿಯೂರಪ್ಪ!
Recommended Video
ಶಿವಮೊಗ್ಗ, ಏಪ್ರಿಲ್ 20: "ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಅಪವಿತ್ರ ಮೈತ್ರಿ ಸರ್ಕಾರವನ್ನು ಧಿಕ್ಕರಿಸಿದ್ದಾರೆ. ಅವರಿಗೆ ಬಿಜೆಪಿಯನ್ನು ಅಧಿಕಾರದಲ್ಲಿ ನೋಡುವಾಸೆ. ಅದಕ್ಕೆ ಸಾಕ್ಷಿ ಇಲ್ಲಿದೆ ನೋಡಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಶಿವಮೊಗ್ಗದಲ್ಲಿ ನಡೆದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೇತೃತ್ವದ ಸಮಾವೇಶದಲ್ಲಿ ನೆರೆದಿದ್ದ ಜನಸ್ತೋಮದ ಚಿತ್ರವೇ ಅದಕ್ಕೆ ಸಾಕ್ಷಿ ಎಂದು ಆ ಚಿತ್ರಗಳನ್ನು ಯಡಿಯೂರಪ್ಪ ಟ್ವೀಟಿಸಿದ್ದಾರೆ.
People of Karnataka have clearly decided to root out the unholy and corrupt alliance of JDS-Congress. They want BJP.
— Chowkidar B.S. Yeddyurappa (@BSYBJP) April 20, 2019
Here are the glimpses from BJP National President Shri @AmitShah's roadshow in Shimoga, Karnataka. #IndiaWantsModiAgain pic.twitter.com/6IkRITKyDP
ಲೋಕಸಭಾ ಚುನಾವಣೆಯ ಪ್ರಚಾರಕ್ಕೆಂದು ಶಿವಮೊಗ್ಗದಲ್ಲಿ ಶನಿವಾರ ಅಮಿತ್ ಶಾ ರೋಡ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಕೇವಲ ಮೂರೇ ಮೂರು ನಿಮಿಷ ಮಾತನಾಡಿದ ಅಮಿತ್ ಶಾ, 'ಉರಿ ಬಿಸಿಲಿನಲ್ಲಿ ನೀವು ಬಂದಿರುವುದು ಸಂತಸ ತಂದಿದೆ, ಈ ಬಾರಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕಿದೆ, ರಾಘವೇಂದ್ರ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಗೆಲ್ಲಿಸಬೇಕಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ಮೋದಿಯವರನ್ನು ಗೆಲ್ಲಿಸಲೇಬೇಕಿದೆ' ಎಂದರು.
ಶಿವಮೊಗ್ಗದಲ್ಲಿ ಮೂರೇ ನಿಮಿಷಕ್ಕೆ ಭಾಷಣ ಮುಗಿಸಿದ ಅಮಿತ್ ಶಾ
ಈ ಸಮಾವೇಶವನ್ನು ಯಶಸ್ವಿ ಎಂದು ಕರೆದ ಯಡಿಯೂರಪ್ಪ, "ಕಾಂಗ್ರೆಸ್ -ಜೆಡಿಎಸ್ ನ ಅಪವಿತ್ರ ಮೈತ್ರಿಯನ್ನು ಬುಡಸಮೇತ ಕಿತ್ತೆಸೆಯಲು ಜನ ಮನಸ್ಸು ಮಾಡಿದ್ದಾರೆ ಎಂಬುದಕ್ಕೆ ಜನರು ಈ ಪರಿ ನೆರೆದಿರುವುದೇ ಸಾಕ್ಷಿ ಎಂದಿದ್ದಾರೆ."