ಶಿವಮೊಗ್ಗದಲ್ಲಿ ಎನ್ಐಎ ತಂಡದಿಂದ ದಾಳಿ; ಪಿಎಫ್ಐ ಮುಖಂಡ ವಶಕ್ಕೆ
ಶಿವಮೊಗ್ಗ, ಸೆಪ್ಟೆಂಬರ್, 22: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಬೆಳಂಬೆಳಗ್ಗೆ ದೇಶದ 10 ರಾಜಗಳಲ್ಲಿ ದಾಳಿ ಮಾಡಿದ್ದು,100ಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಅದೇ ರೀತಿ ಶಿವಮೊಗ್ಗದ ಲಷ್ಕರ್ ಮೊಹಲ್ಲಾದ ಬಡಾವಣೆಯ ಮನೆಯೊಂದರ ಮೇಲೆ ಎನ್ಐಎ ದಾಳಿ ನಡೆಸಿದೆ. ದಾಳಿ ವೇಳೆ ಪಿಎಫ್ಐ ಸಂಘಟನೆ ಮುಖಂಡ ಶಾಹಿದ್ ಖಾನ್ ನನ್ನು ವಶಕ್ಕೆ ಪಡೆದಿದ್ದಾರೆ.
ಎರಡು ತಂಡವಾಗಿ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಶಾಹಿದ್ ಖಾನ್ ಮನೆಯಲ್ಲಿ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ರಾತ್ರಿ 2 ಗಂಟೆ ವೇಳೆಗೆ ಬಂದಿದ್ದ ಎನ್ಐಎ ಅಧಿಕಾರಿಗಳು ಬೆಳಗ್ಗೆ 5 ಗಂಟೆವರೆಗೆ ವಿಚಾರಣೆ ನಡೆಸಿದ್ದಾರೆ. ಅಲ್ಲದೆ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ ಎನ್ನುವ ಮಾಹಿತಿಯೊಂದು ಬಹಿರಂಗವಾಗಿದೆ.
ಶಿರಸಿ ತಾಲೂಕಿನ ಟಿಪ್ಪು ನಗರದಲ್ಲಿ ಎನ್ಐಎ ದಾಳಿ: ಓರ್ವ ಎಸ್ಡಿಪಿಐ ಮುಖಂಡ ವಶಕ್ಕೆ
10
ರಾಜ್ಯಗಳಲ್ಲಿ
ಎನ್ಐಎ
ದಾಳಿ
ಭಯೋತ್ಪಾದಕ
ನಿಧಿಗೆ
ಸಂಬಂಧಿಸಿದಂತೆ
12
ರಾಜ್ಯಗಳಲ್ಲಿ
ಎನ್ಐಎ
ದಾಳಿ
ನಡೆಸಿದ್ದು,
ದಾಳಿಯ
ವೇಳೆ
ಎನ್ಐಎಗೆ
ಇಡಿ
ತಂಡವೂ
ಸಾಥ್
ನೀಡಿದೆ.
ಮೂಲಗಳ
ಪ್ರಕಾರ
ರಾಷ್ಟ್ರೀಯ
ತನಿಖಾ
ಸಂಸ್ಥೆ
ಇದುವರೆಗೆ
ಪಾಪ್ಯುಲರ್
ಫ್ರಂಟ್
ಆಫ್
ಇಂಡಿಯಾ
(ಪಿಎಫ್ಐ)ನ
106ಕ್ಕೂ
ಹೆಚ್ಚು
ಮುಖಂಡರನ್ನು
ಬಂಧಿಸಿದೆ.
ಎನ್ಐಎ ತಂಡ ದೇಶಾದ್ಯಂತ ಭಯೋತ್ಪಾದನೆ ನಿಧಿಗೆ ಸಂಬಂಧಿಸಿದಂತೆ ದಾಳಿ ನಡೆಸುತ್ತಿದೆ. ಇಂದು ಉತ್ತರ ಪ್ರದೇಶ, ಕೇರಳ ಮತ್ತು ಕರ್ನಾಟಕ ಸೇರಿದಂತೆ 10 ರಾಜ್ಯಗಳಲ್ಲಿ ಎನ್ಐಎ ದಾಳಿ ನಡೆಸುತ್ತಿದೆ. ಇದರೊಂದಿಗೆ ಇತರ ರಾಜ್ಯಗಳಲ್ಲೂ ದಾಳಿ ನಡೆಸಿದೆ. ಸಿಕ್ಕಿರುವ ಮಾಹಿತಿಯ ಪ್ರಕಾರ ಭಯೋತ್ಪಾದಕ ನಿಧಿಗೆ ಸಂಬಂಧಿಸಿದಂತೆ ಕೇರಳದ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದ್ದು, ಎನ್ಐಎ ಜೊತೆಗೆ ಜಾರಿ ನಿರ್ದೇಶನಾಲಯದ (ಇಡಿ) ತಂಡವೂ ಇರುವುದು ವಿಶೇಷವಾಗಿದೆ.
ಮಂಗಳೂರಿನಲ್ಲಿ
ಎನ್ಐಎ
ದಾಳಿ:
ಅದೇ
ರೀತಿಯಾಗಿ
ಮಂಗಳೂರು
ನಗರದ
ನೆಲ್ಲಿಕಾಯಿ
ರಸ್ತೆಯಲ್ಲಿರುವ
ಎಸ್ಡಿಪಿಐ,
ಪಿಎಫ್ಐ
ಕಚೇರಿಯಲ್ಲಿ
ಎನ್ಐಎ
ದಾಳಿ
ಅಂತ್ಯಗೊಂಡಿದೆ.
ಹಲವು
ಮಹತ್ವದ
ದಾಖಲೆಗಳು,
ಕಡತಗಳು,
ಲ್ಯಾಪ್ಟಾಪ್ಗಳೊಂದಿಗೆ
ಎನ್ಐಎ
ಅಧಿಕಾರಿಗಳು
ಮರಳಿದ್ದರು.
ದಾಳಿಯ
ಬಗ್ಗೆ
ಎಸ್ಡಿಪಿಐ
ಜಿಲ್ಲಾಧ್ಯಕ್ಷ
ಅಬೂಬಕರ್
ಕುಳಾಯಿ
ಪ್ರತಿಕ್ರಿಯಿಸಿ,
"ಎನ್ಐಎ
ತಂಡ
ಪಿಎಫ್ಐ
ಕಚೇರಿ
ಮೇಲೆ
ದಾಳಿ
ನಡೆಸಿದೆ.
ಆದರೆ,
ಅವರಿಗೆ
ತಿಳಿಸದೆ
ಎಸ್ಡಿಪಿಐ
ಕಚೇರಿಗೆ
ದಾಳಿ
ನಡೆಸಿದ್ದಾರೆ.
ನೆಲ್ಲಿಕಾಯಿ
ರಸ್ತೆಯಲ್ಲಿರುವ
ಎಸ್ಡಿಪಿಐ
ಕಚೇರಿ
ಕಟ್ಟಡ,
ಪಿಎಫ್ಐ
ಕಚೇರಿಗಳ
ಮೇಲೆ
ದಾಳಿ
ಮಾಡಿದೆ.
ಬಳಿಕ
ಎರಡೂ
ಕಚೇರಿಗಳನ್ನು
ಪರಿಶೀಲನೆ
ಮಾಡಿದ್ದಾರೆ.
ದಾಳಿ
ವೇಳೆ
ನಮ್ಮ
ಲ್ಯಾಪ್ಟಾಪ್,
ಕೆಲವೊಂದು
ದಾಖಲೆಗಳನ್ನು
ಎನ್ಐಎ
ವಶಕ್ಕೆ
ತೆಗೆದುಕೊಂಡಿದೆ.
ನಮ್ಮನ್ನು
ಯಾವುದೇ
ರೀತಿಯಲ್ಲಿ
ವಿಚಾರಣೆ
ಮಾಡಿಲ್ಲ.
ನಮ್ಮ
ಕಪಾಟುಗಳನ್ನು
ಸಂಪೂರ್ಣ
ಪರಿಶೀಲನೆ
ಮಾಡಿದ್ದಾರೆ.
ಯಾವ
ಕಾರಣಕ್ಕೆ
ಈ
ದಾಳಿ
ನಡೆಸಿದೆ
ಎಂದು
ಎನ್ಐಎ
ತಂಡ
ಇನ್ನು
ತಿಳಿಸಿಲ್ಲ.
ಆದರೆ
ನಾವು
ರಾಜಕೀಯವಾಗಿ
ಬೆಳವಣಿಗೆ
ಆಗುತ್ತಿದ್ದೇವೆ
ಎಂಬ
ಕುತಂತ್ರದಿಂದ
ಬಿಜೆಪಿ
ಈ
ದಾಳಿಯನ್ನು
ನಡೆಸಿದೆ,"
ಎಂದು
ಆರೋಪಿಸಿದರು
ಇದಕ್ಕೂ ಮೊದಲು ಎನ್ಐಎ ದಾಳಿಯ ವೇಳೆ ಪ್ರತಿಭಟನೆ ನಡೆಸಿದ ಪಿಎಫ್ಐ, ಎಸ್ಡಿಪಿಐನ 50ಕ್ಕೂ ಅಧಿಕ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ಐ, ಎಸ್ಡಿಪಿಐ ಕಚೇರಿಗೆ ಎನ್ಐಎ ಬೆಳ್ಳಂಬೆಳಗ್ಗೆ ದಾಳಿ ನಡೆಸಿತ್ತು. ಈ ವೇಳೆ 200ಕ್ಕೂ ಅಧಿಕ ಜನ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ನಂತರ ಪೊಲೀಸರು 50ಕ್ಕೂ ಅಧಿಕ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡಿದೆ. ಸದ್ಯ ಸ್ಥಳದಲ್ಲಿ ಅರೆಮೀಸಲು ಪಡೆ, ಪೊಲೀಸರು ಬೀಡು ಬಿಟ್ಟಿದ್ದು ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಪಿಎಫ್ಐ, ಎಸ್ಡಿಪಿಐ ಕಚೇರಿ ಇರುವ ಮಂಗಳೂರಿನ ನೆಲ್ಲಿಕಾಯಿ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿದ್ದು, ಎಸ್ಐಎ ದಾಳಿ ಅಂತ್ಯವಾದ ಬಳಿಕ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.