ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಸೇರಿದಂತೆ ದಕ್ಷಿಣ ಭಾರತದ 20 ಕಡೆ ಎನ್ಐಎ ದಾಳಿ
ಶಿವಮೊಗ್ಗ, ಅಕ್ಟೋಬರ್ 13: ಪಶ್ಚಿಮ ಘಟ್ಟದ ಶಿವಮೊಗ್ಗ ಸೇರಿದಂತೆ ದಕ್ಷಿಣ ಭಾರತದ ಮೂರು ರಾಜ್ಯಗಳ 20ಕ್ಕೂ ಹೆಚ್ಚು ಕಡೆ ನಿನ್ನೆ (ಮಂಗಳವಾರ) ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಹೊಂದಿಕೊಂಡಂತೆ ಇರುವ ಶಿವಮೊಗ್ಗದ ಕೆಲವು ಕಡೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಕ್ಸಲ್ ಚಳವಳಿ ಸಂಬಂಧ ತನಿಖೆ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ; ಗಾಂಜಾ ದಂಧೆಗೆ ಕಡಿವಾಣ, ಪೊಲೀಸರಿಂದ ತನಿಖಾ ಸ್ವರೂಪ ಬದಲು
ರಾಜ್ಯದ
ಮೂರು
ಜಿಲ್ಲೆಗಳಲ್ಲಿ
ಪರಿಶೀಲನೆ
ಕೇರಳ,
ತಮಿಳುನಾಡು
ಮತ್ತು
ಕರ್ನಾಟಕದಲ್ಲಿ
ರಾಷ್ಟ್ರೀಯ
ತನಿಖಾ
ಸಂಸ್ಥೆ
ಅಧಿಕಾರಿಗಳು
ಪರಿಶೀಲನೆ
ನಡೆಸಿದ್ದಾರೆ.
ಕರ್ನಾಟಕದ
ಶಿವಮೊಗ್ಗ,
ಚಿಕ್ಕಮಗಳೂರು,
ಉಡುಪಿ
ಜಿಲ್ಲೆಗಳ
ಐದು
ಕಡೆಯಲ್ಲಿ
ಪರಿಶೀಲನೆ
ನಡೆಸಿದ್ದಾರೆ
ಎಂದು
ಮೂಲಗಳು
ತಿಳಿಸಿವೆ.
ಸೈಲೆಂಟ್
ದಾಳಿ,
ಪರಿಶೀಲನೆ
ಕೇಂದ್ರ
ತನಿಖಾ
ದಳದ
(ಎನ್ಐಎ)
ಅಧಿಕಾರಿಗಳು
ಸ್ಥಳೀಯ
ಪೊಲೀಸರಿಗೆ
ಮಾಹಿತಿ
ನೀಡದೆ
ದಾಳಿ
ಮಾಡಿದ್ದಾರೆ.
ತಮಿಳುನಾಡಿನ
ಕೊಯಮತ್ತೂರು,
ಥೇಣಿ,
ರಾಮನಾಥಪುರಂ,
ಸೇಲಂ,
ಕನ್ಯಾಕುಮಾರಿ,
ಕೃಷ್ಣಗಿರಿ
ಜಿಲ್ಲೆಗಳಲ್ಲಿ
ಪರಿಶೀಲನೆ
ನಡೆಸಿದ್ದಾರೆ.
ಇನ್ನು,
ಕೇರಳದ
ವಯನಾಡ್,
ತ್ರಿಶೂರ್
ಮತ್ತು
ಕಣ್ಣೂರು
ಜಿಲ್ಲೆಗಳಲ್ಲೂ
ಪರಿಶೀಲಿಸಿದ್ದಾರೆ.
ಏನಿದು
ಪ್ರಕರಣ?
ಪರಿಶೀಲನೆಗೇನು
ಕಾರಣ?
ನಕ್ಸಲ್
(ಸಿಪಿಐ
ಮಾವೋವಾದಿ)
ಚಳವಳಿಗೆ
ಶಕ್ತಿ
ತುಂಬಲು
2016ರ
ಸೆಪ್ಟೆಂಬರ್
ಕೊನೆಯ
ವಾರದಲ್ಲಿ
ತರಬೇತಿ
ಕ್ಯಾಂಪ್
ನಡೆಸಲು
ನಿರ್ಧರಿಸಲಾಗಿತ್ತು.
ಕೇರಳ
ರಾಜ್ಯದ
ಮಲಪುರಂ
ಜಿಲ್ಲೆಯ
ಎಡಕ್ಕರ
ಪೊಲೀಸ್
ಠಾಣೆಯ
ವ್ಯಾಪ್ತಿಯಲ್ಲಿ
ತರಬೇತಿ
ಶಿಬಿರ
ಸ್ಥಳ
ಗುರುತಿಸಲಾಗಿತ್ತು.
ಶಿಬಿರದಲ್ಲಿ
ಧ್ವಜಾರೋಹಣ
ನೆರವೇರಿಸಿ,
ಶಸ್ತ್ರಾಸ್ತ್ರ
ಬಳಕೆಯ
ತರಬೇತಿ
ನೀಡಲು
ಚಿಂತಿಸಲಾಗಿತ್ತು.
ಈ
ಸಂಬಂಧ
2017ರಲ್ಲಿ
ಕೇರಳದ
ಎಡಕ್ಕರ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲು
ಮಾಡಿ,
ಐವರನ್ನು
ಬಂಧಿಸಲಾಗಿತ್ತು.
ಮರು
ಎಫ್ಐಆರ್
ದಾಖಲಿಸಿದ
ಎನ್ಐಎ
ಪ್ರಕರಣದ
ತನಿಖೆಯನ್ನು
ವಹಿಸಿಕೊಂಡ
ಎನ್ಐಎ
ಅಧಿಕಾರಿಗಳು,
ಮರು
ಎಫ್ಐಆರ್
ದಾಖಲು
ಮಾಡಿಕೊಂಡರು.
ಪ್ರಕರಣದಲ್ಲಿ
ಇನ್ನೂ
20
ಮಂದಿ
ಇರುವುದು
ಬೆಳಕಿಗೆ
ಬಂದಿತ್ತು.
ಕರ್ನಾಟಕ
ನಕ್ಸಲ್
ಚಳವಳಿಯ
ಮುಂಚೂಣಿ
ನಾಯಕರಾದ
ಬಿ.ಜಿ.
ಕೃಷ್ಣಮೂರ್ತಿ,
ವಿಕ್ರಂ
ಗೌಡ
ಹೆಸರುಗಳು
ಈ
ಪಟ್ಟಿಯಲ್ಲಿತ್ತು.
ಹಾಗಾಗಿ
ಶಿವಮೊಗ್ಗ,
ಚಿಕ್ಕಮಗಳೂರು,
ಉಡುಪಿ
ಜಿಲ್ಲೆಯಲ್ಲಿ
ಪರಿಶೀಲನೆ
ನಡೆಸಲಾಗಿದೆ
ಎಂದು
ತಿಳಿದು
ಬಂದಿದೆ.
ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ್ದ ಎನ್ಐಎ ಅಧಿಕಾರಿಗಳು ತೀರ್ಥಹಳ್ಳಿ, ಹೊಸನಗರದ ಕೆಲವು ಕಡೆ ಭೇಟಿ ನೀಡಿದ್ದರು ಎಂದು ಗುಪ್ತ ಮೂಲಗಳು ತಿಳಿಸಿವೆ.