ಸಿದ್ದರಾಮಯ್ಯ ನಾಲಿಗೆ ಹದ್ದುಬಸ್ತಿನಲ್ಲಿರಲಿ, ಯಾರೂ ನನ್ನನ್ನು ಸೈಡ್ಲೈನ್ ಮಾಡಿಲ್ಲ; ಬಿಎಸ್ವೈ
ಶಿವಮೊಗ್ಗ, ಅಕ್ಟೋಬರ್ 19: ಬಿಜೆಪಿಯಲ್ಲಿ ತಮ್ಮನ್ನು ಸೈಡ್ಲೈನ್ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಇದೇ ಮೊದಲ ಬಾರಿ ಬಹಿರಂಗವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. "ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿ ಮುಖಂಡರಾರೂ ನನ್ನನ್ನು ಸೈಡ್ಲೈನ್ ಮಾಡಿಲ್ಲ," ಎಂದು ಬಿಎಸ್ವೈ ಸ್ಪಷ್ಟಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, "ಪಕ್ಷದಲ್ಲಿ ತಮ್ಮನ್ನು ಸೈಡ್ಲೈನ್ ಮಾಡಲಾಗಿದೆ ಎಂಬುದು ಸುಳ್ಳು. ಮುಖ್ಯಮಂತ್ರಿ ಸ್ಥಾನಕ್ಕೆ ಸ್ವಯಂ ರಾಜೀನಾಮೆ ನೀಡಿದ್ದೇನೆ ಹೊರತು ಯಾರ ಒತ್ತಡಕ್ಕೂ ಮಣಿದಿಲ್ಲ," ಎಂದು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ
ನಾಲಿಗೆ
ಹದ್ದುಬಸ್ತಿನಲ್ಲಿಟ್ಟುಕೊಳ್ಳಲಿ
ಇತ್ತೀಚೆಗೆ
ಆರ್ಎಸ್ಎಸ್
ಹಾಗೂ
ಪ್ರಧಾನಿ
ನರೇಂದ್ರ
ಮೋದಿ
ವಿರುದ್ಧ
ಮಾಜಿ
ಮುಖ್ಯಮಂತ್ರಿ,
ವಿಪಕ್ಷ
ನಾಯಕ
ಸಿದ್ದರಾಮಯ್ಯ
ಹೇಳಿಕೆಗಳ
ಕುರಿತು
ಯಡಿಯೂರಪ್ಪ
ತೀಕ್ಷ್ಣವಾಗಿ
ಪ್ರತಿಕ್ರಿಯೆ
ನೀಡಿದ್ದಾರೆ.
"ಸಿದ್ದರಾಮಯ್ಯನವರು ವಿರೋಧ ಪಕ್ಷದ ನಾಯಕರಾಗಿದ್ದಾರೆ. ಅವರ ಸ್ಥಾನಕ್ಕೆ ಈ ಹೇಳಿಕೆಗಳು ಶೋಭೆ ತರುವುದಿಲ್ಲ. ಇನ್ನಾದರೂ ಅವರ ನಾಲಿಗೆ ಹದ್ದುಬಸ್ತಿನಲ್ಲಿ ಇಟ್ಟುಕೊಂಡು ಗೌರವದಿಂದ ಮಾತನಾಡಲಿ. ಇಲ್ಲವಾದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ," ಎಂದು ಎಚ್ಚರಿಕೆ ನೀಡಿದರು.
'ನಾನೊಂದು
ಕಡೆ,
ಸಿಎಂ
ಒಂದು
ಕಡೆ'
"ಸಿಂದಗಿ
ಮತ್ತು
ಹಾನಗಲ್
ಉಪ
ಚುನಾವಣಾ
ಕಣದಲ್ಲಿ
ಪ್ರಚಾರ
ನಡೆಸಲು
ಸಿದ್ಧತೆ
ಮಾಡಿಕೊಳ್ಳಲಾಗಿದೆ.
ಅ.20
ಮತ್ತು
21ರಂದು
ಸಿಂದಗಿ,
ಅ.22
ಮತ್ತು
23ರಂದು
ಹಾನಗಲ್ನಲ್ಲಿ
ಚುನಾವಣಾ
ಪ್ರಚಾರ
ಕಾರ್ಯ
ನಡೆಸಲಾಗುತ್ತದೆ.
ಅಗತ್ಯ
ಬಿದ್ದರೆ
ಹಾನಗಲ್ನಲ್ಲಿ
ಹೆಚ್ಚುವರಿಯಾಗಿ
ಇನ್ನೊಂದು
ದಿನ
ಪ್ರಚಾರ
ಮಾಡುತ್ತೇನೆ.
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಒಂದು
ಕಡೆ,
ನಾನು
ಒಂದು
ಕಡೆಯಿಂದ
ಪ್ರಚಾರ
ನಡೆಸುತ್ತೇನೆ,"
ಎಂದು
ಮಾಜಿ
ಸಿಎಂ
ಬಿ.ಎಸ್.
ಯಡಿಯೂರಪ್ಪ
ತಿಳಿಸಿದರು.
ಅಲ್ಪಸಂಖ್ಯಾತರಿಗೆ
ವಂಚಿಸಿದ
ಉದಾಹರಣೆ
ತೋರಿಸಿ
"ಪ್ರಧಾನಿ
ಮೋದಿ
ಸರ್ಕಾರ,
ನನ್ನ
ಸರ್ಕಾರ
ಹಾಗೂ
ಈಗಿನ
ಸರ್ಕಾರ
ಯಾರಿಗೂ
ಅನ್ಯಾಯ
ಮಾಡಿಲ್ಲ.
ಅಲ್ಪಸಂಖ್ಯಾತರಿಗೆ
ವಂಚನೆ
ಮಾಡಿದ
ಒಂದು
ಉದಾಹರಣೆ
ಇದ್ದರೆ
ನನಗೆ
ಕೊಡಿ.
ಅವರಿಗೊಂದು,
ಇವರಿಗೊಂದು
ಯಾವತ್ತೂ
ಮಾಡಿಲ್ಲ.
ಭೇದ
ಮಾಡದೆ
ಎಲ್ಲರಿಗೂ
ಒಂದೇ
ತರಹ
ನೋಡಿದೆ.
ಕೇಂದ್ರ
ಹಾಗೂ
ರಾಜ್ಯ
ಸರ್ಕಾರ
ಪ್ರಾಮಾಣಿಕವಾಗಿ
ಕೆಲಸ
ಮಾಡುತ್ತಿದೆ.
ಹಾಗಾಗಿ
ಯಾವುದೇ
ಅಲ್ಪಸಂಖ್ಯಾತರು
ಬೇಸರ
ಮಾಡಿಕೊಳ್ಳುವ
ವಿಚಾರವೇ
ಬರಲ್ಲ,"
ಎಂದು
ಯಡಿಯೂರಪ್ಪ
ತಿಳಿಸಿದರು.