ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಕ್ರೇಬೈಲು ಆನೆ ಬಿಡಾರದ ಪ್ರೀತಿಯ ನಾಗಣ್ಣ ಸಾವು!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ಶಿವಮೊಗ್ಗ, ಆಗಸ್ಟ್ 24: ಕಾಡಿನಿಂದ ಶಿವಮೊಗ್ಗದ ಸಕ್ರೇಬೈಲಿಗೆ ತರಲಾಗಿದ್ದ ಆನೆಯೊಂದು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಸಾವನ್ನಪ್ಪಿದೆ.

 ವಿಡಿಯೋ; ಬಂಡೀಪುರದಲ್ಲಿ ಫೋಟೊ ತೆಗೆದವರ ವಾಹನ ಅಟ್ಟಾಡಿಸಿಕೊಂಡು ಬಂತು ಆನೆ ವಿಡಿಯೋ; ಬಂಡೀಪುರದಲ್ಲಿ ಫೋಟೊ ತೆಗೆದವರ ವಾಹನ ಅಟ್ಟಾಡಿಸಿಕೊಂಡು ಬಂತು ಆನೆ

ಒಂದು ವರ್ಷದ ಹಿಂದೆ ಭದ್ರಾವತಿಯ ಉಬ್ರಾಣಿ ಎಂಬ ಅರಣ್ಯದಲ್ಲಿ ಸಿಕ್ಕಿಬಿದ್ದಿದ್ದ ಕಾಡಾನೆಯನ್ನು ಸಕ್ರೇಬೈಲು ಆನೆ ಬಿಡಾರಕ್ಕೆ ಕರೆತರಲಾಗಿತ್ತು. ಈ ‌ಆನೆಗೆ ನಾಗಣ್ಣ ಎಂದು ಹೆಸರಿಡಲಾಗಿತ್ತು. ಆದರೆ ತರಬೇತಿ ನೀಡುವಾಗ ಸಕ್ರೇಬೈಲ್ ನಲ್ಲಿದ್ದ ಅಭಿಮನ್ಯು ಮತ್ತು ಕಾಡಾನೆ ನಾಗಣ್ಣನ ನಡುವೆ ಜಗಳ ನಡೆದ ಪರಿಣಾಮ ಆನೆ ಗಾಯಗೊಂಡಿತ್ತು. ಅದಕ್ಕೆ ಚಿಕಿತ್ಸೆಯನ್ನೂ ನೀಡಲಾಗಿತ್ತು.

Naganna Elephant Died In Sakrebail Elephant Camp

ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಆನೆ ಸಾವನ್ನಪ್ಪಿದೆ. ಈ ಹಿಂದೆ ನಾಗಣ್ಣ ಆನೆಗೆ ಚಿತ್ರರಂಗದಲ್ಲಿ ಕೂಡ ಅವಕಾಶ ಸಿಕ್ಕಿತ್ತು. ಕೆಲವು ಸಿನಿಮಾಗಳಲ್ಲೂ ಆನೆ ನಟಿಸಿದ್ದು, ಬಿಡಾರದಲ್ಲಿ ಸಿಬ್ಬಂದಿ ಹಾಗೂ ಮಾವುತರ ಪ್ರೀತಿಪಾತ್ರವಾಗಿತ್ತು.

ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ವೈದ್ಯಕೀಯ ಪರೀಕ್ಷೆಯ ನಂತರ ಕಾರಣ ತಿಳಿದು ಬರಲಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

English summary
An elephant that was brought to the sakrebail elephant camp from the forest died on Friday. The elephant, which was trapped in a forest was brought here a year ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X