ಶಿವಮೊಗ್ಗ ದಸರಾ ಮೆರವಣಿಗೆ ಇಲ್ಲ, ಸೀಮಿತ ವ್ಯಕ್ತಿಗಳಿಗೆ ಮಾತ್ರ ಅವಕಾಶ
ಶಿವಮೊಗ್ಗ, ಅಕ್ಟೋಬರ್ 8: ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಕ್ರಮವಾಗಿ ಶಿವಮೊಗ್ಗ ಮಹಾನಗರಪಾಲಿಕೆಯು ಪ್ರಸಕ್ತ ಸಾಲಿನಲ್ಲಿ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಲು ನಿರ್ಣಯ ಕೈಗೊಂಡಿದೆ. ಈ ಬಾರಿ ದಸರಾ ಮೆರವಣಿಗೆಯನ್ನು ರದ್ದು ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ಸೀಮಿತ ವ್ಯಕ್ತಿಗಳಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ ಎಂದು ಮೇಯರ್ ಸುವರ್ಣಾ ಶಂಕರ್ ತಿಳಿಸಿದ್ದಾರೆ.
ಮಹಾನಗರ
ಪಾಲಿಕೆಯ
ಸಭಾಂಗಣದಲ್ಲಿ
ಈ
ಕುರಿತು
ಮಾಹಿತಿ
ನೀಡಿ
ಮಾತನಾಡಿದ
ಅವರು,
ಅತ್ಯಂತ
ಕಡಿಮೆ
ಬಜೆಟ್
ನಲ್ಲಿ
ಕಾರ್ಯಕ್ರಮವನ್ನು
ವಿನ್ಯಾಸಗೊಳಿಸಲಾಗಿದೆ.
ಅಕ್ಟೋಬರ್
17ರಂದು
ಕೋಟೆ
ರಸ್ತೆಯ
ಚಂಡಿಕಾ
ದುರ್ಗಾಪರಮೇಶ್ವರಿ
ದೇವಸ್ಥಾನದಲ್ಲಿ
ದೇವಿ
ಪ್ರತಿಷ್ಠಾಪನೆ
ಮಾಡಲಾಗುವುದು.
ಈ
ಕಾರ್ಯಕ್ರಮದ
ಉದ್ಘಾಟನೆಯನ್ನು
ವಿವಿಧ
ಇಲಾಖೆಗಳ
ಕೊರೊನಾ
ವಾರಿಯರ್
ಗಳಾದ
ಪೌರಕಾರ್ಮಿಕರು,
ನೀರು
ಸರಬರಾಜು
ಸಿಬ್ಬಂದಿ,
ಒಳಚರಂಡಿ
ಸಿಬ್ಬಂದಿ,
ಪೊಲೀಸ್
ಸಿಬ್ಬಂದಿ,
ಆರೋಗ್ಯ
ಇಲಾಖೆಯ
ಶುಶ್ರೂಷಕಿಯರು
ಹಾಗೂ
ವೈದ್ಯರು
ಚಾಲನೆ
ನೀಡುವರು
ಎಂದರು.
ಸರಳ ದಸರಾ ಹೆಸರಿನಲ್ಲಿ ಕೋಟಿ ಕೋಟಿ ಲೂಟಿ: ನಂಜರಾಜೇ ಅರಸ್ ಆರೋಪ
ಸರಳವಾಗಿ ಆಚರಣೆ ಮಾಡುವ ಸಂಬಂಧ ದಸರಾ ಸ್ವಾಗತ ಮತ್ತು ಉತ್ಸವ ಸಮಿತಿಯನ್ನು ಮಹಾಪೌರರ ಅಧ್ಯಕ್ಷತೆಯಲ್ಲಿ ಹಾಗೂ ಅಲಂಕಾರ ಸಮಿತಿಯನ್ನು ವಿರೋಧ ಪಕ್ಷದ ನಾಯಕರ ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ. ಪಾಲಿಕೆಯ ಎಲ್ಲಾ ಸದಸ್ಯರು ಈ ಸಮಿತಿಗಳಿಗೆ ಸದಸ್ಯರಾಗಿರುತ್ತಾರೆ ಎಂದರು.
ಅಕ್ಟೋಬರ್
26ರಂದು
ವಿಜಯ
ದಶಮಿ
ಪ್ರಯುಕ್ತ
ಈ
ಬಾರಿ
ಮೆರವಣಿಗೆ
ಇರುವುದಿಲ್ಲ.
ಆದರೆ
ಮುಜರಾಯಿ
ಇಲಾಖೆಗೆ
ಸೇರಿದ
ದೇವಸ್ಥಾನಗಳ
ಸಮಿತಿಗಳಿಂದ
ಮಾತ್ರ
ತಮ್ಮ
ದೇವರುಗಳನ್ನು
ಬನ್ನಿ
ಮುಡಿಯುವ
ಸ್ಥಳವಾದ
ಫ್ರೀಡಂ
ಪಾರ್ಕ್ಗೆ
ಮೆರವಣಿಗೆ
ಇಲ್ಲದೇ
ನೇರವಾಗಿ
ಕರೆತರುವಂತೆ
ಮನವಿ
ಮಾಡಲಾಗಿದೆ
ಎಂದು
ಹೇಳಿದರು.
ಈ
ವರ್ಷವೂ
ಎಲ್ಲ
ದೇವಸ್ಥಾನಗಳ
ಅಲಂಕಾರಕ್ಕಾಗಿ
ಪಾಲಿಕೆ
ವತಿಯಿಂದ
ಧನಸಹಾಯ
ನೀಡಲಾಗುವುದು
ಹಾಗೂ
ನಗರದಾದ್ಯಂತ
ದೀಪಾಲಂಕಾರ
ಮಾಡಲಾಗುವುದು.
ಸಾರ್ವಜನಿಕರಿಗೆ
ಬನ್ನಿ
ಮುಡಿಯುವ
ಸ್ಥಳಕ್ಕೆ
ಪ್ರವೇಶ
ಇರುವುದಿಲ್ಲ.
ಆದರೆ
ಸ್ಥಳೀಯ
ಟಿ.ವಿ
ಚಾನೆಲ್
ಗಳ
ಮೂಲಕ
ನೇರ
ಪ್ರಸಾರ
ಮಾಡಲಾಗುವುದು.
ಸಾರ್ವಜನಿಕರು
ತಮ್ಮ
ಮನೆಯಲ್ಲಿಯೇ
ಕುಳಿತು
ಕಾರ್ಯಕ್ರಮ
ವೀಕ್ಷಿಸಬಹುದು
ಎಂದು
ಹೇಳಿದರು.
ಕಳೆದ ವರ್ಷ ದಸರಾ ಆಚರಣೆಗೆ 163 ಲಕ್ಷ ರೂ.ವೆಚ್ಚ ಮಾಡಲಾಗಿತ್ತು. ಈ ಬಾರಿ 38 ಲಕ್ಷ ರೂ.ಗಳನ್ನು ತೆಗೆದಿರಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಸುರೇಖಾ ಮುರಳೀಧರ್, ಸದಸ್ಯರುಗಳಾದ ಎಸ್.ಎನ್. ಚನ್ನಬಸಪ್ಪ, ಇ.ವಿಶ್ವಾಸ್, ಯು.ಎಚ್. ವಿಶ್ವನಾಥ್, ಕೆ.ಟಿ. ಶ್ರೀನಿವಾಸ್, ಆಯುಕ್ತ ಚಿದಾನಂದ ವಟಾರೆ ಇದ್ದರು.