ಪ್ರಧಾನಿಯಂತೆ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸಿಕೊಳ್ಳೊಲ್ಲ: ಕುಮಾರಸ್ವಾಮಿ
Recommended Video
ಶಿವಮೊಗ್ಗ, ಏಪ್ರಿಲ್ 17: ಮಂಡ್ಯದಿಂದ ಚುನಾವಣಾ ಪ್ರಚಾರದ ದಿಕ್ಕನ್ನು ಬುಧವಾರ ಶಿವಮೊಗ್ಗದೆಡೆಗೆ ತಿರುಗಿಸಿಕೊಂಡಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪ್ರಧಾನಿಯಂತೆ ನಾನು ದಿನವೂ ಮುಖಕ್ಕೆ ವ್ಯಾಕ್ಸಿಂಗ್ ಮಾಡಿಸಿಕೊಂಡು ಮುಖ ಹೊಳೆಯುವಂತೆ ಮಾಡಿಕೊಳ್ಳುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಅದೃಷ್ಟದ ಕಾರು ಬದಲಾವಣೆ ಮಾಡಿದ್ರಾ ಎಚ್.ಡಿ.ಕುಮಾರಸ್ವಾಮಿ?
ಪ್ರಧಾನಿಯಂತೆ ಬಡವರು ಮುಟ್ಟಿದ ಕೈಗೆ ಡೆಟಾಲ್ ಹಾಕಿಕೊಂಡು ಕೈಗಳನ್ನು ತೊಳೆದುಕೊಳ್ಳುವುದಿಲ್ಲ. ನಾನು ಬಡವರೊಂದಿಗೆ ಯಾವಾಗಲೂ ಬೆರೆಯುತ್ತೇನೆ. ಅವರ ಬೆವರು ನನ್ನ ಕೈಗೆ ತಾಗಿರುತ್ತದೆ. ಆ ಕೈಯನ್ನು ತೊಳೆಯದೆಯೇ ನಾನು ಊಟ ಮಾಡಿದ್ದೇನೆ. 20 ಸಲ ಸ್ನಾನ ಮಾಡಿದಾಕ್ಷಣ ನಾನು ಬಿಳಿಯಾಗುವುದಿಲ್ಲ ಎಂದು ತಮ್ಮ ಬಣ್ಣದ ಕುರಿತು ಲೇವಡಿ ಮಾಡಿದ ಶಾಸಕ ರಾಜು ಕಾಗೆಗೆ ಎದಿರೇಟು ಕೊಟ್ಟರು.
ಹೃದಯದಲ್ಲಿ ಭಾವುಕತೆ ಇದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತ್ತದೆ. ನಾನೊಬ್ಬ ಭಾವುಕ ಜೀವಿ. ಕಣ್ಣಲ್ಲಿ ನೀರು ಬರುವುದು ಸುಮ್ಮನೆಯಲ್ಲ. ಜನರ ಕಷ್ಟ ನೋಡಿದಾಗ ಕಣ್ಣೀರು ಬರುತ್ತದೆ. ಪ್ರತಿದಿನ ಕಣ್ಣೀರು ಹಾಕುತ್ತೇನೆ ಎಂದು ತಮ್ಮ ಕಣ್ಣೀರಿನ ಕುರಿತು ಲೇವಡಿ ಮಾಡಿದ್ದ ಯಡಿಯೂರಪ್ಪ ಹಾಗೂ ಎಸ್ಎಂ ಕೃಷ್ಣ ಅವರಿಗೆ ಟಾಂಗ್ ನೀಡಿದರು.
ಮಂಡ್ಯದಲ್ಲಿ ದಿಗ್ಗಜರ ಭಾಷಣದ ಸಾರಾಂಶ ಗ್ರಹಿಸಿದ್ದೇನೆ : ಎಚ್ಡಿಕೆ ವ್ಯಂಗ್ಯ
ಯಡಿಯೂರಪ್ಪ ಅವರಿಗೆ ಜನರ ಸಮಸ್ಯೆ ಬೇಕಾಗಿಲ್ಲ. ಮೋದಿ ಮುಖ ನೋಡಿ ಮತ ಹಾಕಿ ಎಂದು ಕೇಳುತ್ತಾರೆ. ತಮ್ಮ ಮುಖ ನೋಡಿ ಮತ ಕೊಡುವಂತೆ ಕೇಳಲು ಇವರಿಗೆ ಸಾಮರ್ಥ್ಯ ಇಲ್ಲವೇ ಎಂದು ವ್ಯಂಗ್ಯವಾಡಿದರು.