ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೀರ್ಥಹಳ್ಳಿಯಲ್ಲೀಗ ಚಿರತೆ ದಾಳಿಯದೇ ಸುದ್ದಿ

|
Google Oneindia Kannada News

ತೀರ್ಥಹಳ್ಳಿ, ಜೂನ್ 7: ಇದು ತೀರ್ಥಹಳ್ಳಿ ತಾಲೂಕಿನಲ್ಲಿ ಆತಂಕಕ್ಕೆ ಹಾಗೂ ಚರ್ಚೆಗೆ ಕಾರಣವಾಗಿರುವ ಸುದ್ದಿ. ತಾಲೂಕಿನ ದತ್ತರಾಜಪುರ ಹತ್ತಿರದ ಹುಲ್ಲತ್ತಿಯಲ್ಲಿ ಬೈಕ್ ಸವಾರರ ಮೇಲೆ ಚಿರತೆಯೊಂದು ದಾಳಿ ನಡೆಸಿದೆ.

ಈ ವೇಳೆ ಪೊರಲುಕೊಪ್ಪ ಮಂಜುನಾಥ ಎಂಬುವವರಿಗೆ ಗಾಯಗಳಾಗಿದ್ದು, ಕೋಣಂದೂರು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅವರ ಮಗ ಹದಿನೈದು ವರ್ಷದ ಚೇತನ್ ಈ ಘಟನೆಯಿಂದ ಗಾಬರಿಯಾಗಿದ್ದಾನೆ.

Leopard attacked on bike rider in Tirthahalli taluk

ರಾತ್ರಿ ಬೈಕ್ ನಲ್ಲಿ ಹೋಗುವಾಗ ಇವರಿಬ್ಬರ ಮೇಲೆ ಚಿರತೆ ಎರಗಿದೆ. ಆಗ ಬೈಕ್ ಏನಾದರೂ ಕೆಳಗೆ ಬಿದ್ದಿದ್ದರೆ ಇನ್ನೂ ಹೆಚ್ಚಿನ ಅನಾಹುತ ಆಗುವ ಸಾಧ್ಯತೆ ಇರುತ್ತಿತ್ತು. ಹಾಗೆ ಬೀಳದ ಕಾರಣಕ್ಕೆ ಬಚಾವಾಗಿ ಬಂದಿದ್ದಾರೆ. ಆ ನಂತರ ಚಿರತೆಯು ಸಮೀಪದಲ್ಲೇ ಒಂದು ದನ ಹಾಗೂ ನಾಯಿಯನ್ನು ಕೊಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.[ಸ್ವಂತ ಮಗನನ್ನೇ ಸುಪಾರಿ ಕೊಟ್ಟು ಕೊಲ್ಲಿಸಿದ ಶಿವಮೊಗ್ಗದ ತಾಯಿ!]

ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ, ಅಗ್ರಹಾರ, ಕನ್ನಂಗಿ, ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಡಲಮನೆ, ಬಂಡಿಕೊಪ್ಪ, ಲಿಂಗನಕೊಪ್ಪ ಮತ್ತಿತರ ಕಡೆ ಚಿರತೆ ಹಾವಳಿ ಹೆಚ್ಚಾಗಿದೆ. ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವವರು ಭಯದಲ್ಲೇ ಸಂಚರಿಸುವ ಸನ್ನಿವೇಶ ಎದುರಾಗಿದೆ.

English summary
Manjuanth, bike rider attacked by leopard in Hullati near Dattarajapura, Tirthahalli taluk, Shivammoga. Manjunath injured and admitted to Konanduru government hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X