ಶಿವಮೊಗ್ಗದ ಗ್ರಾಮಕ್ಕೆ ಬಂದ ಚಿರತೆ: ಕ್ರಮ ಕೈಗೊಳ್ಳದ ಅರಣ್ಯ ಇಲಾಖೆ
ಶಿವಮೊಗ್ಗ, ಸೆಪ್ಟೆಂಬರ್ 7: ಜಿಲ್ಲೆಯ ಶಿಕಾರಿಪುರ ತಾಲೂಕು ಮದಗ ಹಾರನಳ್ಳಿ ಗ್ರಾಮದಲ್ಲಿ ಶನಿವಾರ ಗ್ರಾಮಕ್ಕೆ ಚಿರತೆಯೊಂದು ನುಗ್ಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಚಿರತೆಯು ಗ್ರಾಮದ ಜಾನುವಾರುಗಳ ಮೇಲೆ ದಾಳಿ ಮಾಡಿದ್ದು, ಜನರು ಓಡಾಡಲು ಭಯಭೀತಗೊಂಡಿದ್ದಾರೆ. ಮದಗ ಹಾರನಹಳ್ಳಿ ಗ್ರಾಮದ ಬೂದಿಗೌಡ್ರು ಸಿದ್ದಣ್ಣಗೌಡರ ಒಂದು ಹಸು, ಪರಸಪ್ಪ ಮಾದಕರ ಅವರ ಒಂದು ಹಸು ಮೇಲೆ ಚಿರತೆ ಮಾರಣಾಂತಿಕವಾಗಿ ದಾಳಿ ಮಾಡಿದೆ.
ಮಣಿಪಾಲದ ಗ್ರಾಮದಲ್ಲಿ ಭೀತಿ ಹುಟ್ಟಿಸಿದ್ದ ಚಿರತೆ ಸೆರೆ
ಶಿವಪ್ಪ ಹೊನ್ನಂಬಳಿ ಅವರ ಎಮ್ಮೆಯನ್ನು ಕೊಂದು, ಶಿವಪ್ಪ ನಾಗವಾರ್ ಎಂಬ ವ್ಯಕ್ತಿಯ ಮೇಲೆ ದಾಳಿ ಮಾಡಿದೆ. "ಘಟನೆ ಕುರಿತು ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಎರಡು ದಿನವಾದರೂ ಸ್ಥಳಕ್ಕೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಹಾಗೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ" ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರಣ್ಯ ಇಲಾಖೆ ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
Comments
English summary
Leopard entered madaga haranalli in shivamogga district and killing cattles. Still forest department not taken any action