ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಿಪ್ಪನ್ ಪೇಟೆಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ವೇಳೆ ಯುವಕರಿಗೆ ಚಾಕು ಇರಿತ

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

ರಿಪ್ಪನ್ ಪೇಟೆ (ಶಿವಮೊಗ್ಗ): ರಿಪ್ಪನ್ ಪೇಟೆ ಪಟ್ಟಣದ ಶ್ರೀವಿನಾಯಕ ಮೂರ್ತಿ ವಿಸರ್ಜನೆ ಮೆರವಣಿಗೆ ವೇಳೆ ಯುವಕರ ಗುಂಪೊಂದು ಇಬ್ಬರು ಯುವಕರನ್ನು ಚಾಕುವಿನಿಂದ ಇರಿದಿದೆ. ಕುಮಾರ್ ಹಾಗೂ ಸೂರ್ಯ ಇರಿತಕ್ಕೆ ಒಳಗಾದವರು. ಧನುಷ್, ಸುಚಿತ್, ಜೋಸೆಫ್ ಆರೋಪಿಗಳು.

ಗಣಪತಿ ಮೂರ್ತಿ ಮೆರವಣಿಗೆ ಮಂಗಳವಾರ ರಾತ್ರಿ ವೇಳೆಗೆ ಪಟ್ಟಣದ ಶಿವಮಂದಿರ ಬಳಿ ಬಂದಿದ್ದು, ನೃತ್ಯ ಮಾಡುತ್ತಿದ್ದ ಕುಮಾರ್ ಹಾಗೂ ಸೂರ್ಯ ಅವರಿಗೆ ಆರೋಪಿಗಳು ಚಾಕುವಿನಿಂದ ಇರಿದಿದ್ದಾರೆ. ಇಬ್ಬರಿಗೂ ಬೆನ್ನು, ಪಕ್ಕೆ ಹಾಗೂ ಕುತ್ತಿಗೆಗೆ ಗಾಯಗಳಾಗಿವೆ. ಇವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Knife Attack On Two Youth During Ganesha Idol Immersion In Ripponpet

ಎಲ್ಲರೂ ರಿಪ್ಪನ್ ಪೇಟೆ ನಿವಾಸಿಗಳಾಗಿದ್ದು, ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಮಹಿಳೆಯ ಗುಂಪಿನ ನಡುವೆ ಆರೋಪಿಗಳು ನೃತ್ಯಕ್ಕೆ ಮುಂದಾದರು. ಅದನ್ನು ತಡೆದು, ಗಣಪತಿ ಸಮಿತಿಯವರು ಆರೋಪಿಗಳನ್ನು ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.

ಧನುಷ್, ಸುಚಿತ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೋಸೆಫ್ ನಾಪತ್ತೆಯಾಗಿದ್ದಾನೆ.

English summary
During Ganesha idol immersion knife attack on two youth in Ripponpet, Hosanagar taluk, Shivamogga district on Tuesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X