ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್ ಎಸ್ ಜ್ಯೋತಿಪ್ರಕಾಶ್ ನೇಮಕ
ಶಿವಮೊಗ್ಗ, ಆಗಸ್ಟ್ 27: ಶಿವಮೊಗ್ಗ- ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷರಾಗಿ ಎಸ್.ಎಸ್.ಜ್ಯೋತಿಪ್ರಕಾಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಈ ಕುರಿತು ನಗರಾಭಿವೃದ್ಧಿ ಇಲಾಖೆಯು ಅಧಿಕೃತ ಪ್ರಕಟಣೆ ಹೊರಡಿಸಿದೆ. ನಾಲ್ಕು ಜನ ಸದಸ್ಯರು ಹಾಗೂ ಓರ್ವ ಅಧ್ಯಕ್ಷರ ಹೆಸರನ್ನು ನೇಮಕಗೊಳಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಅದರಂತೆ ಎಸ್.ಎಸ್.ಜ್ಯೋತಿಪ್ರಕಾಶ್ ಅವರನ್ನು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ರೈಲ್ವೇ, ಪ್ರವಾಸೋದ್ಯಮ ಪ್ರಗತಿಗೆ ಹಲವು ಯೋಜನೆ
ಶಿವಮೊಗ್ಗದ ಉಮಾಮೂರ್ತಿ, ಎಸ್.ದೇವರಾಜ್, ಭದ್ರಾವತಿಯ ಬಿ.ಜಿ.ರಾಮಲಿಂಗಯ್ಯ, ಹಾಗೂ ಕದಿರೇಶ್ ಅವರನ್ನು ಸೂಡಾ ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶಿಸಲಾಗಿದೆ.
English summary
Goverernment has appointed SS Jyothi prakash as president to Shivamogga Bhadravathi Urban Development Authority (SUDA)