"ಗೀತಾ ಶಿವರಾಜ್ ಕುಮಾರ್ ಹರಕೆಯ ಕುರಿ"
ಶಿವಮೊಗ್ಗ, ಏ. 5 : ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗದಲ್ಲಿ ಹರಕೆಯ ಕುರಿ ಎಂದು ಕಾಂಗ್ರೆಸ್ ಮುಖಂಡ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಪರವಾಗಿ ತಾವು ಪ್ರಚಾರ ಮಾಡುತ್ತೇನೆ ಎಂದು ಕು.ಬಂಗಾರಪ್ಪ ಘೋಷಿಸಿದ್ದಾರೆ.
ಶನಿವಾರ
ಶಿವಮೊಗ್ಗ
ಕ್ಷೇತ್ರದ
ಕಾಂಗ್ರೆಸ್
ಅಭ್ಯರ್ಥಿ
ಮಂಜುನಾಥ
ಭಂಡಾರಿ
ಕುಮಾರ್
ಬಂಗಾರಪ್ಪ
ಅವರನ್ನು
ಭೇಟಿ
ಮಾಡಿ,
ಪ್ರಚಾರಕ್ಕೆ
ಬರುವಂತೆ
ಆಹ್ವಾನಿಸಿದ್ದರು.
ಭಂಡಾರಿ
ಭೇಟಿಯ
ನಂತರ
ಪತ್ರಿಕಾಗೋಷ್ಠಿ
ನಡೆಸಿದ
ಕು.ಬಂಗಾರಪ್ಪ
ತಾವು
ಕಾಂಗ್ರೆಸ್
ಪಕ್ಷದಲ್ಲಿದ್ದು,
ಅಭ್ಯರ್ಥಿ
ಪರವಾಗಿ
ಪ್ರಚಾರ
ನಡೆಸುತ್ತೇನೆ
ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪುತ್ರಿ ಹಾಗೂ ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹರಕೆಯ ಕುರಿ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಗೀತಾ ಶಿವರಾಜ್ ಕುಮಾರ್ ಅವರನ್ನು ಜೆಡಿಎಸ್ ನಾಯಕರು ಹರಕೆಯ ಕುರಿಯಾಗಿ ಮಾಡಿದ್ದಾರೆ ಎಂದರು. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಯಾವುದೇ ಲೆಕ್ಕಾಚಾರಗಳಿಲ್ಲದೇ ಜೆಡಿಎಸ್ ಗೀತಾ ಶಿವರಾಜ್ ಕುಮಾರ್ ಅವರನ್ನು ಕ್ಷೇತ್ರದಿಂದ ಚುನಾವಣೆಗೆ ಇಳಿಸಿದೆ. ಇದಕ್ಕೆ ಮಧು ಬಂಗಾರಪ್ಪ ಅವರು ಬೆಂಬಲ ನೀಡಿದ್ದಾರೆ. ಜೆಡಿಎಸ್ ನಾಯಕರ ಲೆಕ್ಕಚಾರ ತಲೆಕೆಳಗಾಗಲಿದ್ದು, ಗೀತಾ ಕ್ಷೇತ್ರದಲ್ಲಿ ಹರಕೆಯ ಕುರಿಯಾಗಲಿದ್ದಾರೆ ಎಂದು ಕು.ಬಂಗಾರಪ್ಪ ಭವಿಷ್ಯ ನುಡಿದರು. [ಕಾಂಗ್ರೆಸ್ ಗೆ ಬೆಂಬಲ ಅಂದ್ರು ಕು.ಬಂಗಾರಪ್ಪ]
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಮುನಿಸಿಕೊಂಡಿದ್ದ ಕುಮಾರ್ ಬಂಗಾರಪ್ಪ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ದರು. ಆದರೆ, ಪಕ್ಷದ ನಾಯಕರ ಮನವೊಲಿಕೆ ಯತ್ನದ ನಂತರ ಚುನಾವಣೆಗೆ ಸ್ಪರ್ಧಿಸುವುದಿಲ್ಲ, ಕ್ಷೇತ್ರದ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರಿಗೆ ಬೆಂಬಲ ನೀಡುವುದಾಗಿ ಪ್ರಕಟಿಸಿದ್ದರು.
ಆದರೆ, ಕುಮಾರ್ ಬಂಗಾರಪ್ಪ ಪ್ರಚಾರಕ್ಕೆ ಆಗಮಿಸಿರಲಿಲ್ಲ. ಆದ್ದರಿಂದ ಶನಿವಾರ ಮಂಜುನಾಥ್ ಭಂಡಾರಿ ಅವರು, ಕುಮಾರ್ ಬಂಗಾರಪ್ಪ ಅವರ ನಿವಾಸಕ್ಕೆ ತೆರಳಿ, ಪ್ರಚಾರಕ್ಕೆ ಆಗಮಿಸುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಕು.ಬಂಗಾರಪ್ಪ, ತಾವು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.