ಅತಿ ವೇಗವಾಗಿ ಕಾರು ಓಡಿಸುತ್ತಾಳೆ ಎಂದು ಹೆಂಡತಿ ಮೇಲೆ ದೂರು ಕೊಟ್ಟ ಗಂಡ
ಶಿವಮೊಗ್ಗ, ನವೆಂಬರ್ 27: ನನ್ನ ಹೆಂಡತಿ ಅತಿ ವೇಗವಾಗಿ ವಾಹನ ಚಾಲನೆ ಮಾಡುತ್ತಾಳೆ, ಎಷ್ಟು ಹೇಳಿದರೂ ನನ್ನ ಮಾತು ಕೇಳುತ್ತಿಲ್ಲ ಎಂದು ಆರೋಪಿಸಿ ಪತಿರಾಯ ಪೊಲೀಸ್ ಠಾಣೆ ಮೆಟ್ಟಿಲೇರಿ, ತನ್ನ ಹೆಂಡತಿ ವಿರುದ್ಧವೇ ದೂರು ದಾಖಲಿಸಿರುವ ಘಟನೆ ಮಂಗಳವಾರ ಹೊಸನಗರದಲ್ಲಿ ನಡೆದಿದೆ.
ಮಗು ಮೂತ್ರ ಮಾಡಿಕೊಂಡಿದ್ದಕ್ಕೆ ಚಾಕುವಿನಿಂದ ಹೊಡೆಯೋದೇ?
ನಾಗರಾಜ್ ಎಂಬಾತ ತನ್ನ ಪತ್ನಿ ಮಂಜುಳ ವಿರುದ್ಧ ದೂರು ನೀಡಿದ್ದು, ಆಕೆಯ ಅಜಾಗರೂಕತೆಯಿಂದ ಕಾರು ಚಲಾಯಿಸಿ ಮಗ, ಮಗಳು ಹಾಗೂ ನಾದಿನಿಗೆ ಗಾಯಗಳಾಗಿವೆ. ಪತ್ನಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ನಿನ್ನೆ ಬೆಳಿಗ್ಗೆ ಉಡುಪಿಯ ನಿವಾಸಿ ನಾಗರಾಜ್ ಹೆಂಡತಿಯೊಟ್ಟಿಗೆ ಮಾರುತಿ ಬ್ರೀಜಾ ಕಾರಿನಲ್ಲಿ ಸಾಗರದಲ್ಲಿರುವ ತಮ್ಮ ಸಂಬಂಧಿ ಮನೆಗೆ ಹೋಗುತ್ತಿದ್ದರು. ಈ ಸಂದರ್ಭ ಕಾರ್ ಪಲ್ಟಿಯಾಗಿ ಹೊಸನಗರದ ರಾಮಚಂದ್ರಪುರ ಗ್ರಾಮದ ಶರಾವತಿ ಸೇತುವೆಯ ಬಳಿ ಹಳ್ಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ಕುಟುಂಬ ಸದಸ್ಯರಿಗೂ ಗಾಯಗಳಾಗಿವೆ. ಇದಕ್ಕೆ ಪತ್ನಿ ಮಂಜುಳಾಳ ಅಜಾಗರೂಕತೆ ಹಾಗೂ ದುಡುಕೇ ಕಾರಣ, ಆಕೆಯ ವಿರುದ್ಧ ಸೂಕ್ತ ಕ್ರಮ ಜರುಗಿಸಿ ಎಂದು ದೂರಿನಲ್ಲಿ ನಾಗರಾಜ್ ಆರೋಪಿಸಿದ್ದಾರೆ.