ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗೀತಾ ಶಿವಣ್ಣ ಮಾಧ್ಯಮ ಸಂವಾದ ಹೈಲೈಟ್ಸ್

By Rajendra
|
Google Oneindia Kannada News

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರು 'ಜೀವನ ಚೈತ್ರ' ಸಿನಿಮಾದಲ್ಲಿ "ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋ ತನಕ ಸಂಸಾರದೊಳಗೆ ಗಂಡಾಗುಂಡಿ...ಇರೋದರೊಳಗೆ ಒಮ್ಮೆ ನೋಡು ಜೋಗದ ಗುಂಡಿ" ಎಂದು ಹಾಡಿ ಜೋಗ ಜಲಪಾತದ ಮಹತ್ವವನ್ನು ಮತ್ತೊಮ್ಮೆ ಅಭಿಮಾನಿ ದೇವರುಗಳಿಗೆ ನೆನಪಿಸಿದ್ದರು.

ಇದೀಗ ಅವರ ಹಿರಿ ಸೊಸೆ ಗೀತಾ ಶಿವರಾಜ್ ಕುಮಾರ್ ಅವರು ಅದೇ ಜೋಗ ಜಲಪಾತ ಧುಮ್ಮಿಕ್ಕುತ್ತಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇದೇ ಮಾರ್ಚ್ 27ಕ್ಕೆ ಅವರು ಜೆಡಿಎಸ್ ನಿಂದ ನಾಮಪತ್ರ ಸಲ್ಲಿಸುವುದಾಗಿ ಹೇಳಿದ್ದಾರೆ. [ಶಿವಮೊಗ್ಗ ಜೆಡಿಎಸ್ ಅಭ್ಯರ್ಥಿ ಗೀತಾ ಶಿವಣ್ಣ ಸಂದರ್ಶನ]

Elections 2014: Geetha Shivarajkumar Meet the press highlights

ತಮ್ಮ ತವರೂರು ಶಿವಮೊಗ್ಗದಿಂದ ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವ ಅವರು ಇದೇ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮುಖಾಮುಖಿಯಾದರು. ತಮ್ಮ ಪ್ರಬಲ ಸ್ಪರ್ಧಿ ಮಾಜಿ ಮುಖ್ಯಮಂತ್ರಿ ಹಳೆ ಹುಲಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಅವರು ಸೆಣೆಸುತ್ತಿರುವುದು ಅತೀವ ಕುತೂಹಲ ಕೆರಳಿಸಿದೆ.

ಕಳೆದ ಇಪ್ಪತ್ತೈದು ವರ್ಷಗಳಿಂದ ಯಾವುದೇ ಚಾನಲ್, ಮಾಧ್ಯಮಗಳ ಜೊತೆ ಸಂವಾದ, ಸಂದರ್ಶನಕ್ಕೆ ಗೀತಾ ಬಂದವರೇ ಅಲ್ಲ. ಮಾಧ್ಯಮಗಳ ಜೊತೆಗಿನ ಸಂವಾದ ಅವರಿಗೆ ಇದೇ ಮೊದಲು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತನ್ನ ಮುದ್ದಿನ ಮಡದಿ ಜೊತೆ ಸಂವಾದದಲ್ಲಿ ಸಾಥ್ ನೀಡಿದರು.

ಪ್ರೆಸ್ ಕ್ಲಬ್ ಗೆ ಶಿವಣ್ಣ ಇದುವರೆಗೂ ಹೆಚ್ಚೆಂದರೆ ಒಂದೆರಡು ಬಾರಿ ಬಂದಿರಬಹುದಷ್ಟೆ. ಮೊದಲು ಮಾತನಾಡಿದ ಶಿವಣ್ಣ ತಮ್ಮ ಪತ್ನಿ ಯಾಕೆ ಸ್ಪರ್ಧಿಸುತ್ತಿದ್ದಾರೆ. ರಾಜಕೀಯಕ್ಕೆ ಅಡಿಯಿಟ್ಟಿದ್ಯಾಕೆ ಎಂದು ಹೇಳುತ್ತಾ ಗೀತಾ ಅವರಲ್ಲಿದ್ದ ಕೊಂಚ ದುಗುಡವನ್ನು ದೂರ ಮಾಡಿದರು. ಬನ್ನಿ ಶಿವಣ್ಣ ಏನು ಹೇಳಿದರು ಎಂಬುದನ್ನು ನೋಡೋಣ ಓವರ್ ಟು ಶಿವಣ್ಣ...

English summary
Shimoga Lok Sabha constituency, Elections 2014: Late legend Dr Rajkumar daughter-in-law Geetha Shivrajkumar (Former CM late Bangarappa's daughter) contesting from JD(S), first time in the history Geetha meet the press at Bangalore Press club. Here is the media interaction with Hat Trick Hero Shivrajkumar and his wife Geetha. Both faced questions and answerd safe and sound.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X