'ನೂರು ಡಿಕೆಶಿ ಬಂದರೂ ಶಿವಮೊಗ್ಗದಲ್ಲಿ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ'
Recommended Video
ಶಿವಮೊಗ್ಗ, ಮಾರ್ಚ್ 19: ಡಿ.ಕೆ.ಶಿವಕುಮಾರ್ ಮೈತ್ರಿ ಪಕ್ಷದ ಪರವಾಗಿ ಶಿವಮೊಗ್ಗ ಚುನಾವಾಣಾ ಉಸ್ತುವಾರಿ ವಹಿಸಿಕೊಳ್ಳುತ್ತಿರುವ ಬಗ್ಗೆ ಬಿಜೆಪಿ ಭಯಗೊಂಡಿದೆ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಆಯನೂರು ಮಂಜುನಾಥ್, ಇಂತಹ ನೂರು ಶಿವಕುಮಾರ್ ಬಂದರೂ ಶಿವಮೊಗ್ಗದಲ್ಲಿ ಬಿಜೆಪಿ ಸೋಲಿಸಲು ಸಾಧ್ಯವಿಲ್ಲ ಎಂದರು.
ಪ್ರಧಾನಿ ಮೋದಿಗೆ ಷಂಡ ಎಂದು ಪದಬಳಕೆ ಮಾಡಿದ ಬಸವಕಲ್ಯಾಣ ಶಾಸಕ ನಾರಾಯಣ್ ರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆಯನೂರು, ಷಂಡ ಪದ ಬಳಕೆ ಸರಿಯಲ್ಲ. ಮೋದಿಯವರು, ಷಂಡ ಹೌದೋ, ಅಲ್ಲವೋ ಎಂಬುದು, ಈ ಚುನಾವಣೆ ನಿರ್ಧಾರ ಮಾಡುತ್ತೆ ಎಂದು ತಿಳಿಸಿದರು.
ಗೋವಾ: ಬಹುಮತ ಸಾಬೀತು ಪಡಿಸೋಕೆ ಬುಧವಾರ ಮುಹೂರ್ತ
ದೇಶ ಮಾರುವವರ ಎದುರು ಚಾಯ್ ಮಾರುವವ ಉತ್ತಮ ಎಂಬುದು ಈಗಾಗಲೇ ಸಾಬೀತಾಗಿದೆ. ದೇಶದ ಮೇಲೆ ಹಲವು ದಾಳಿಗಳಾದ ಸಂದರ್ಭದಲ್ಲಿ ನಾಮರ್ಧರಾಗಿದ್ದವರು, ಕಾಂಗ್ರೆಸ್ ನವರೇ ಹೊರತು ಮೋದಿಯಲ್ಲ. ಮೋದಿಯವರು ಈಗಾಗಲೇ ಅದನ್ನು ಸಾಬೀತು ಮಾಡಿದ್ದಾರೆ.ಸೈನಿಕರ ದಾಳಿಗೆ ಸಾಕ್ಷಿ ಕೇಳಿದವರು ಷಂಡರಾಗುತ್ತಾರೆ ಎಂದು ಮಂಜುನಾಥ್ ಟೀಕಿಸಿದರು.
ಪರಿಕ್ಕರ್ ನಿಧನಾನಂತರ ಗೋವಾ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ
ಪ್ರಧಾನಿಯಾದವರಿಗೆ ಷಂಡ ಎಂದು ಹೇಳಿದಾಗ ವೇದಿಕೆ ಮೇಲಿದ್ದವರು, ಅದನ್ನ ಖಂಡಿಸುವ ಬದಲು ಷಂಡತನ ಪ್ರದರ್ಶನ ಮಾಡಿದ್ದಾರೆ. ಕಾಂಗ್ರೆಸ್ ನವರು, ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಬೇಕೆಂದು ಆಯನೂರು ಆಗ್ರಹಿಸಿದ್ದಾರೆ.