ಶಿವಮೊಗ್ಗದಲ್ಲಿ ಮಳೆ ಹೆಚ್ಚಳ, ಭದ್ರಾ ಜಲಾಶಯದಿಂದ ಹೊರ ಹರಿವು
ಶಿವಮೊಗ್ಗ,ಸೆ 4: ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 303.50 ಮಿಮಿ ಮಳೆಯಾಗಿದ್ದು, ಸರಾಸರಿ 43.36 ಮಿಮಿ ಮಳೆ ದಾಖಲಾಗಿದೆ. ಸೆಪ್ಟಂಬರ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 164.16 ಮಿಮಿ ಇದ್ದು, ಇದುವರೆಗೆ ಸರಾಸರಿ 59.39 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ 24.60 ಮಿಮಿ., ಭದ್ರಾವತಿ 22.20 ಮಿಮಿ., ತೀರ್ಥಹಳ್ಳಿ 48.80 ಮಿಮಿ., ಸಾಗರ 32.20 ಮಿಮಿ., ಶಿಕಾರಿಪುರ 19.80 ಮಿಮಿ., ಸೊರಬ 57.10 ಮಿಮಿ. ಹಾಗೂ ಹೊಸನಗರ 98.80 ಮಿಮಿ. ಮಳೆಯಾಗಿದೆ.
ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ: ಯೆಲ್ಲೋ ಅಲರ್ಟ್ ಘೋಷಣೆ
ಜಲಾಶಯಗಳ
ನೀರಿನ
ಮಟ್ಟ
ಅಡಿಗಳಲ್ಲಿ
ಮತ್ತು
ಹರಿವು
ಕ್ಯೂಸೆಕ್ಸ್
ಗಳಲ್ಲಿ:
ಲಿಂಗನಮಕ್ಕಿ:
1819
(ಗರಿಷ್ಠ),
1806.60
(ಇಂದಿನ
ಮಟ್ಟ),
17824.00
(ಒಳಹರಿವು),
4711.10
(ಹೊರಹರಿವು).
ಭದ್ರಾ:
186
(ಗರಿಷ್ಠ),
182.10
(ಇಂದಿನ
ಮಟ್ಟ),
3848.00
(ಒಳಹರಿವು),
2668.00
(ಹೊರಹರಿವು).
ತುಂಗಾ:
588.24
(ಗರಿಷ್ಠ),
588.24
(ಇಂದಿನ
ಮಟ್ಟ),
8212.00
(ಒಳಹರಿವು),
8212.00
(ಹೊರಹರಿವು).
Sub title: ಭದ್ರಾ ಜಲಾಶಯದಿಂದ ಹೊರ ಹರಿವು, ತರೀಕೆರೆ ತಾಲೂಕಿಗೆ ಎಚ್ಚರ
ವಿಶ್ವೇಶ್ವರಯ್ಯ ಜಲ ನಿಗಮ ನಿ. ಅಡಿಯಲ್ಲಿ ಬರುವ, ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಯ ಭದ್ರಾ ಜಲಾಶಯದಿಂದ ಪ್ರಾರಂಭವಾಗಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ, ಲಿಂಗದಹಳ್ಳಿ, ತರೀಕರೆ ಕಸಬಾ, ಅಮೃತಾಪುರ, ಅಜ್ಜಂಪುರ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಹಾದುಹೋಗಿದ್ದು, ಶಾಂತಿಪುರ ಪಂಪ್ಹೌಸ್-1 ಜಂಬದಹಳ್ಳಿ ಅಕ್ವೆಡಕ್ಟ್, ತರೀಕೆರೆ ರೈಲು ಸೇತುವೆ, ಬೆಟ್ಟತಾವರೇಕೆರೆ ಪಂಪ್ಹೌಸ್-2, ಅಜ್ಜಂಪುರ ಸುರಂಗದ ಮಾರ್ಗವಾಗಿ ಹೆಬ್ಬೂರು ಗ್ರಾಮದ ಹತ್ತಿರವಿರುವ ವೈಜಂಕ್ಷನ್ನಿಂದ ಹಳ್ಳದ ಮುಖಾಂತರ ಕಡೂರು ತಾಲೂಕಿನ ಕುಕ್ಕೆ ಸಮುದ್ರ ಕೆರೆಯ ಮೂಲಕ ವೇದಾವತಿ ನದಿಯ ಮುಖಾಂತರ ವಾಣಿವಿಲಾಸ ಸಾಗರಕ್ಕೆ ಸರ್ಕಾರದ ನಿರ್ದೇಶನದಂತೆ ದಿ: 04.09.2020 ರಿಂದ ನೀರು ಹರಿಸಲಾಗುವುದು.
ಚುರುಕಾದ ಮುಂಗಾರು, ತುಂಬುತ್ತಿವೆ ಅಣೆಕಟ್ಟುಗಳು!
ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು, ತೋಟಗಾರಿಕೆ ಮಾಡುವುದು ಮತ್ತು ದೈನಂದಿನ ಚಟುವಟಿಕೆಗಳನ್ನು ಮಾಡುವುದು ಇತ್ಯಾದಿಗಳನ್ನು ನಿರ್ಬಂಧಿಸಲಾಗಿದೆ ಹಾಗೂ ನಿಗಮದ ಆಸ್ತಿಯಾದ ನೀರಾವರಿ ಕಾಲುವೆ, ಕಟ್ಟಡಗಳನ್ನು ಜಖಂಗೊಳಿಸುವುದು, ಅನಧೀಕೃತವಾಗಿ ಪಂಪ್ಸೆಟ್ಗಳನ್ನು ಅಳವಡಿಸಿ ನೀರನ್ನು ಎತ್ತುವುದು ನೀರಾವರಿ ಕಾಯ್ದೆಯ ವಿವಿಧ ನಿಯಮಗಳ ಪ್ರಕಾರ ಕಾನೂನು ಬಾಹಿರವಾಗುತ್ತದೆಯೆಂದು ವಿಜನಿನಿ ಅಧೀಕ್ಷಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.