ಸೊರಬ: ಕರ್ತವ್ಯದಲ್ಲಿದ್ದಾಗಲೇ ಉಪ ತಹಶೀಲ್ದಾರ್ಗೆ ಹೃದಯಾಘಾತ, ಸಾವು
ಶಿವಮೊಗ್ಗ, ಏಪ್ರಿಲ್ 7: ಹೃದಯಾಘಾತ ಸಂಭವಿಸಿ ಕರ್ತವ್ಯ ನಿರತ ಉಪ ತಹಶೀಲ್ದಾರ ಒಬ್ಬರು ಅಸುನೀಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ನಾಡಕಚೇರಿಯಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಉಪ ತಹಶೀಲ್ದಾರ ಚನ್ನಕೇಶವ (45) ಮೃತರಾಗಿದ್ದು, ಬುಧವಾರ ಮಧ್ಯಾಹ್ನ ಕರ್ತವ್ಯದಲ್ಲಿ ಇರುವಾಗ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಆನವಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಚನ್ನಕೇಶವ ಅವರು ಕೊನೆಯುಸಿರೆಳೆದಿದ್ದಾರೆ. ಉಪ ತಹಶೀಲ್ದಾರ ಚನ್ನಕೇಶವ ಅವರು ಸಾಗರದ ಶ್ರೀಧರ ನಗರ ನಿವಾಸಿಯಾಗಿದ್ದಾರೆ. ಪತ್ನಿ ಹಾಗೂ ಇಬ್ಬರು ಪುತ್ರರು ಇದ್ದಾರೆ.
1998ರಲ್ಲಿ ಗ್ರಾಮ ಲೆಕ್ಕಿಗರಾಗಿ ಕಂದಾಯ ಇಲಾಖೆಗೆ ಸೇರ್ಪಡೆಯಾಗಿದ್ದ ಅವರು, ವಿವಿಧ ಹಂತದ ಪದೋನ್ನತಿ ಹೊಂದಿ ಉಪ ತಹಶೀಲ್ದಾರ ಆಗಿದ್ದರು. ಸೊರಬ ಪಟ್ಟಣದ ತಾಲೂಕು ಕಚೇರಿಯಲ್ಲಿ ಶಿರಸ್ತೆದಾರರಾಗಿ ಸಹ ಕರ್ತವ್ಯ ಸಲ್ಲಿಸಿದ್ದರು.
Recommended Video
ಸಂತಾಪ
ಸೂಚಿಸಿದ
ಶಾಸಕ
ಕುಮಾರ್
ಬಂಗಾರಪ್ಪ
ಉಪ
ತಹಶೀಲ್ದಾರ
ಚನ್ನಕೇಶವ
ಅವರ
ನಿಧನಕ್ಕೆ
ಸೊರಬ
ಶಾಸಕ
ಎಸ್.
ಕುಮಾರ್
ಬಂಗಾರಪ್ಪ,
ಸರ್ಕಾರಿ
ನೌಕರರ
ಸಂಘ,
ಕಂದಾಯ
ಇಲಾಖೆಯ
ನೌಕರರ
ಸಂಘ
ಸೇರಿದಂತೆ
ವಿವಿಧ
ಸಂಘ
ಸಂಸ್ಥೆಯವರು
ಸಂತಾಪ
ಸೂಚಿಸಿದ್ದಾರೆ.