ಶಿವಮೊಗ್ಗದ ಶಾಲೆಗಳಿಗೆ 3 ದಿನ ರಜೆ ಘೋಷಣೆ; ಪ್ರಸಿದ್ಧ ಮಾರಿಕಾಂಬ ಜಾತ್ರೆ ಮುಂದೂಡಿಕೆ
ಶಿವಮೊಗ್ಗ, ಜನವರಿ 18: ಮಕ್ಕಳು, ಶಿಕ್ಷಕರು ಕೊರೊನಾ ಸೋಂಕಿಗೆ ತುತ್ತಾಗುತ್ತಿರುವ ಹಿನ್ನೆಲೆ ಶಿವಮೊಗ್ಗ ನಗರದ ಶಾಲೆಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ. ಇನ್ನು ಪ್ರಸಿದ್ಧ ಕೋಟೆ ಮಾರಿಕಾಂಬ ದೇವಿ ಜಾತ್ರೆಯನ್ನು ಕೂಡ ಮುಂದೂಡಲಾಗಿದೆ.
ಮಂಗಳವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಶಿವಮೊಗ್ಗ ನಗರದ ಎಲ್ಲಾ ಶಾಲೆಗಳ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಬುಧವಾರದಿಂದ ಮೂರು ದಿನ ರಜೆ ಘೋಷಿಸಲಾಗಿದೆ ಎಂದು ತಿಳಿಸಿದರು.
200
ವಿದ್ಯಾರ್ಥಿಗಳಿಗೆ
ಕೊರೊನಾ
ಬುಧವಾರದಿಂದ
ಮೂರು
ದಿನ
ಶಾಲೆಗಳಿಗೆ
ರಜೆ
ಘೋಷಿಸಲಾಗಿದೆ.
ಶನಿವಾರ
ಮತ್ತು
ಭಾನುವಾರ
ವಾರಾಂತ್ಯ
ಕರ್ಫ್ಯೂ
ಇರಲಿದೆ.
ಹಾಗಾಗಿ
ಸೋಮವಾರದಿಂದ
ಪುನಃ
ತರಗತಿಗಳು
ಆರಂಭವಾಗಲಿದೆ
ಎಂದು
ಸಚಿವರು
ಹೇಳಿದರು.
ಶಿವಮೊಗ್ಗದಲ್ಲಿ ಮಕ್ಕಳಿಗೆ ಸೋಂಕು ತಗುಲುವ ಪ್ರಕರಣಗಳು ಹೆಚ್ಚಾಗಿವೆ. ಸುಮಾರು 45 ಶಾಲೆಯ 208 ವಿದ್ಯಾರ್ಥಿಗಳಿಗೆ ಸೋಂಕು ತಗುಲಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಶಿವಮೊಗ್ಗ ನಗರದಲ್ಲಿ ಮಾತ್ರ ಶಾಲೆಗಳಿಗೆ ರಜೆ ಘೋಷಿಸಲಾಗುತ್ತಿದೆ. ಭಾನುವಾರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಮಾಹಿತಿ ನೀಡಿದರು.
ಕೋಟೆ
ಮಾರಿಕಾಂಬ
ಜಾತ್ರೆ
ಮುಂದೂಡಿಕೆ
ಶಿವಮೊಗ್ಗದ
ಪ್ರಸಿದ್ಧ
ಕೋಟೆ
ಮಾರಿಕಾಂಬ
ದೇವಿ
ಜಾತ್ರೆ
ಮೇಲೂ
ಕೊರೊನಾ
ಕರಿಛಾಯೆ
ಆವರಿಸಿದ್ದು,
ಜಾತ್ರೆಯನ್ನು
ಒಂದು
ತಿಂಗಳು
ಮುಂದೂಡಲಾಗಿದ್ದು,
ಅತ್ಯಂತ
ಸರಳವಾಗಿ
ಆಚರಣೆ
ಮಾಡಲು
ತೀರ್ಮಾನಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ, ಕೋಟೆ ಮಾರಿಕಾಂಬ ದೇವಿ ಜಾತ್ರೆಯನ್ನು ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ನಡೆಸಲು ತೀರ್ಮಾನ ಮಾಡಲಾಗಿದೆ. ಅತ್ಯಂತ ಸರಳವಾಗಿ ಜಾತ್ರೆ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲಾಡಳಿತದ
ನಿರ್ಧಾರಕ್ಕೆ
ಬದ್ಧ
ಕೊರೊನಾ
ಸೋಂಕು
ವ್ಯಾಪಕವಾಗಿ
ಹರಡುತ್ತಿದೆ.
ಆದ್ದರಿಂದ
ಜಾತ್ರೆ
ನಡೆಸುವ
ಸಂಬಂಧ
ದೇವಸ್ಥಾನ
ಸಮಿತಿಯು
ತಮ್ಮೊಂದಿಗೆ
ಚರ್ಚೆ
ನಡೆಸಿತು.
ಈ
ವೇಳೆ
ಜಿಲ್ಲಾಡಳಿತ
ಕೈಗೊಳ್ಳುವ
ನಿರ್ಧಾರಕ್ಕೆ
ತಾವು
ಬದ್ಧ
ಎಂದು
ಸಮಿತಿಯವರು
ತಿಳಿಸಿದ್ದಾರೆ.
ಜಾತ್ರೆಯನ್ನು
ನಿಗದಿತ
ದಿನಾಂಕಕ್ಕಿಂತಲೂ
ಒಂದು
ತಿಂಗಳು
ಮುಂದೂಡಲಾಗಿದೆ.
ಮಾರ್ಚ್
ತಿಂಗಳ
ಕೊನೆಯ
ವಾರದಲ್ಲಿ
ಜಾತ್ರೆ
ನಡೆಯಲಿದೆ
ಎಂದು
ಸಚಿವ
ಈಶ್ವರಪ್ಪ
ಹೇಳಿದರು.
ಅತ್ಯಂತ
ಸರಳವಾಗಿ
ಜಾತ್ರೆ
ಆಚರಣೆ
ಈ
ಬಾರಿ
ಕೋಟೆ
ಮಾರಿಕಾಂಬ
ದೇವಿ
ಜಾತ್ರೆಯನ್ನು
ಅತ್ಯಂತ
ಸರಳವಾಗಿ
ಆಚರಿಸಲಾಗುತ್ತದೆ.
ಅಂಗಡಿಗಳು,
ಸ್ಟಾಲ್ಗಳು,
ಪ್ರದರ್ಶನ
ಮಳಿಗೆಗಳು
ಇರುವಂತಿಲ್ಲ.
ಹೊರಗಿನ
ಭಕ್ತರು
ಆಗಮಿಸಿದಂತೆ
ನೋಡಿಕೊಂಡು,
ಸರಳವಾಗಿ
ಜಾತ್ರೆ
ಮಾಡಬೇಕು.
ಸೋಂಕು
ಉಲ್ಬಣಗೊಳ್ಳುವುದನ್ನು
ತಡೆಯಲು
ಈ
ಕ್ರಮ
ಕೈಗೊಳ್ಳಲಾಗುತ್ತಿದೆ
ಎಂದರು.
ಶಿವಮೊಗ್ಗದ ಕೋಟೆ ಮಾರಿಕಾಂಬ ದೇವಿ ಜಾತ್ರೆಯು ಫೆಬ್ರವರಿ ತಿಂಗಳಲ್ಲಿ ನಿಗದಿಯಾಗಿತ್ತು. ಆದರೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜಾತ್ರೆಯನ್ನು ಒಂದು ತಿಂಗಳು ಮುಂದೂಡಲಾಗಿದೆ. ಮಾರ್ಚ್ 22 ಮತ್ತು 23ರಂದು ಜಾತ್ರೆ ನಡೆಸಲು ದೇವಸ್ಥಾನ ಸಮಿತಿ ತೀರ್ಮಾನಿಸಿದೆ.
Recommended Video
ಶಿವಮೊಗ್ಗದಲ್ಲಿ
ವ್ಯಾಪಕವಾದ
ಕೊರೊನಾ
ಶಿವಮೊಗ್ಗ
ಜಿಲ್ಲೆಯಾದ್ಯಂತ
ಕೊರೊನಾ
ಸೋಂಕು
ವ್ಯಾಪಕವಾಗಿ
ಹರಡುತ್ತಿದೆ.
ಕಳೆದ
ಒಂದು
ವಾರದಿಂದ
ಈಚೆಗೆ
ಜಿಲ್ಲೆಯಲ್ಲಿ
ಸೋಂಕು
ತೀವ್ರ
ಸ್ವರೂಪ
ಪಡೆದುಕೊಂಡಿದೆ.
ಜಿಲ್ಲೆಯಲ್ಲಿ
ಒಂದೂವರೆ
ಸಾವಿರಕ್ಕಿಂತಲೂ
ಹೆಚ್ಚು
ಸಕ್ರಿಯ
ಪ್ರಕರಣಗಳಿವೆ.
ಅಲ್ಲದೆ
ನಿತ್ಯಕ್ಕೂ
200ಕ್ಕೂ
ಹೆಚ್ಚು
ಮಂದಿಗೆ
ಪಾಸಿಟಿವ್
ಬರುತ್ತಿದೆ.
ಈ
ಪೈಕಿ
ವಿದ್ಯಾರ್ಥಿಗಳು
ಸೇರಿರುವುದು
ಆತಂಕಕ್ಕೆ
ಕಾರಣವಾಗಿದೆ.
ಈಗಾಗಲೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಐದು ದಿನ ರಜೆ ಘೋಷಿಸಲಾಗಿದೆ. ಕಳೆದ ಒಂದು ವಾರದಿಂದ ಈಚೆಗೆ ಹಲವು ಶಾಲೆಗಳಿಗೆ ರಜೆ ನೀಡಲಾಗಿತ್ತು. ಈಗ ಶಿವಮೊಗ್ಗ ನಗರದಲ್ಲಿ ರಜೆ ಘೋಷಣೆ ಮಾಡಲಾಗಿದೆ. ಅಲ್ಲದೆ ಪ್ರಮುಖ ಜಾತ್ರೆಯನ್ನು ಮುಂದೂಡಲಾಗಿದೆ.