ಶಿವಮೊಗ್ಗ-ಬೆಂಗಳೂರು ಶತಾಬ್ದಿ ರೈಲು ಸಮಯ ಪರಿಷ್ಕರಣೆ
ಶಿವಮೊಗ್ಗ, ಅಕ್ಟೋಬರ್ 13 : ಬೆಂಗಳೂರು-ಶಿವಮೊಗ್ಗ ಜನಶತಾಬ್ದಿ ಎಕ್ಸ್ಪ್ರೆಸ್ ರೈಲಿನ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ. ಇನ್ನು ಮುಂದೆ 4ಗಂಟೆ 20 ನಿಮಿಷದಲ್ಲಿ ರೈಲು ಬೆಂಗಳೂರು ತಲುಪಲಿದ್ದು, ವಾರದಲ್ಲಿ 6 ದಿನ ಸಂಚಾರ ನಡೆಸಲಿದೆ.
ನೈಋತ್ಯ ರೈಲ್ವೆ ಶನಿವಾರ ಆದೇಶ ಈ ಕುರಿತು ಆದೇಶವನ್ನು ಹೊರಡಿಸಿದೆ. ಅಕ್ಟೋಬರ್ 14ರ ಸೋಮವಾರದಿಂದ ಪರಿಷ್ಕರಣೆ ಮಾಡಿದ ಸಮಯದಲ್ಲಿ ರೈಲು ಶಿವಮೊಗ್ಗ-ಬೆಂಗಳೂರು ನಡುವೆ ವಾರದ 6 ದಿನ ರೈಲು ಸಂಚಾರ ನಡೆಸಲಿದೆ.
ಹೊಸಪೇಟೆ-ಕೊಟ್ಟೂರು ರೈಲಿಗೆ ಅ.17ರಂದು ಹಸಿರು ನಿಶಾನೆ
ಇಷ್ಟು ದಿನ ಜನಶತಾಬ್ದಿ ರೈಲು ವಾರದಲ್ಲಿ 4 ದಿನಗಳು ಮಾತ್ರ ಸಂಚಾರ ನಡೆಸುತ್ತಿತ್ತು. ಸೋಮವಾರಿಂದ 6 ದಿನ ಸಂಚಾರ ನಡೆಸಲಿದ್ದು, ಬೆಂಗಳೂರು-ಶಿವಮೊಗ್ಗ ನಡುವೆ ಸಂಚಾರ ನಡೆಸುವ ಜನರಿಗೆ ಸಹಾಯಕವಾಗಲಿದೆ.
ದೀಪಾವಳಿ; ಮೈಸೂರು-ವಿಜಯಪುರ ನಡುವೆ ವಿಶೇಷ ರೈಲು
ರೈಲಿನ ವೇಳಾಪಟ್ಟಿ : ಜನಶತಾಬ್ದಿ ಎಕ್ಸ್ಪ್ರೆಸ್ ರೈಲು ಪ್ರತಿದಿನ ಬೆಳಗ್ಗೆ 5.30ಕ್ಕೆ ಶಿವಮೊಗ್ಗದಿಂದ ಹೊರಡಲಿದೆ. 9.50ಕ್ಕೆ ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣವನ್ನು ತಲುಪಲಿದೆ. ಸಂಜೆ 5.30ಕ್ಕೆ ಯಶವಂತಪುರ ರೈಲು ನಿಲ್ದಾಣದಿಂದ ಹೊರಡಲಿದ್ದು, ರಾತ್ರಿ 9.50ಕ್ಕೆ ಶಿವಮೊಗ್ಗವನ್ನು ತಲುಪಲಿದೆ.
ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗಕ್ಕಾಗಿ ಕೇಂದ್ರ ಸಚಿವರಿಗೆ ಪತ್ರ
ಬೆಂಗಳೂರು-ಶಿವಮೊಗ್ಗ ನಡುವಿನ ಸಂಚಾರಕ್ಕೆ ರೈಲು 4 ಗಂಟೆ 50 ನಿಮಿಷ ತೆಗೆದುಕೊಳ್ಳುತ್ತಿತ್ತು. ಇನ್ನು ಮುಂದೆ 4 ಗಂಟೆ 20 ನಿಮಿಷದಲ್ಲಿ ರೈಲು ಸಂಚಾರ ನಡೆಸಲಿದೆ. ವಾರದ ಆರು ದಿನ (ಮಂಗಳವಾರ ಬಿಟ್ಟು) ಈ ರೈಲು ಸೇವೆ ಲಭ್ಯವಿದೆ.
ರೈಲಿನ ಸಮಯ ಪರಿಷ್ಕರಣೆ ಮಾಡಿರುವುದರಿಂದ ಸಾರ್ವಜನಿಕರು ಬೆಂಗಳೂರಿನ ಕಚೇರಿಗಳಿಗೆ, ವಾಣಿಜ್ಯ ಉದ್ದೇಶಕ್ಕಾಗಿ ತೆರಳಿ ಅದೇ ದಿನ ವಾಪಸ್ಸು ಬರಲು ಸಹಾಯಕವಾಗಿದೆ.