ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯೇಂದ್ರ, ಶೋಭಾ ಕರಂದ್ಲಾಜೆಯಿಂದ ಸಿಎಂ ಬಿಎಸ್ವೈಗೆ ಸಂಕಷ್ಟ

|
Google Oneindia Kannada News

ಶಿವಮೊಗ್ಗ, ಜೂನ್ 20: "ತಮ್ಮನ್ನು ಯಡಿಯೂರಪ್ಪನವರ ಮಾನಸ ಪುತ್ರ ಎಂದು ಹೇಳಿಕೊಳ್ಳುತ್ತಿದ್ದವರೇ ಈಗ ಅವರ ವಿರುದ್ದ ತಿರುಗಿಬಿದ್ದಿದ್ದಾರೆ"ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

Recommended Video

ಶೋಭಾ ಕರಂದ್ಲಾಜೆ, ವಿಜಯೇಂದ್ರನಿಂದ ಯಡಿಯೂರಪ್ಪ ಪದವಿ ಸದ್ಯದಲ್ಲೇ ಹೋಗುತ್ತೆ | Beluru GopalaKrishna

"ನಾನು ಭವಿಷ್ಯವನ್ನು ನುಡಿಯುತ್ತಿರುವುದಲ್ಲ, ಭವಿಷ್ಯ ನುಡಿಯಲು ನಾನು ಕೋಡಿಮಠದ ಶ್ರೀಗಳಲ್ಲ"ಎಂದ ಬೇಳೂರು, "ಬಿಜೆಪಿಯ ಹೆಚ್ಚಿನ ಶಾಸಕರು ತಮ್ಮತಮ್ಮ ಕ್ಷೇತ್ರಕ್ಕೆ ಅನುದಾನ ಬಂದಿಲ್ಲ"ಎಂದು ಅಸಮಾಧಾನ ಗೊಂಡಿದ್ದಾರೆ" ಎಂದು ಹೇಳಿದರು.

MLC ಚುನಾವಣೆ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಬಿವೈ ವಿಜಯೇಂದ್ರMLC ಚುನಾವಣೆ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಬಿವೈ ವಿಜಯೇಂದ್ರ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಬೇಳೂರು ಗೋಪಾಲಕೃಷ್ಣ, "ಪುತ್ರ ಬಿ.ವೈ.ವಿಜಯೇಂದ್ರ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಯವರಿಂದ ಯಡಿಯೂರಪ್ಪನವರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ"ಎಂದು ಬೇಳೂರು ಭವಿಷ್ಯ ನುಡಿದರು.

Because Of BY Vijayendra And Shobha Karandlaje, Yediyurappa Will Loose The CM Post, Beluru Gopalakrishna

"ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಿಸಿದೆ. ಎಚ್.ವಿಶ್ವನಾಥ್ ಅವರಿಗೆ ಟಿಕೆಟ್ ಸಿಗಲಿಲ್ಲ. ಪಕ್ಷಾಂತರಿಗಳಿಗೆ ಇದೊಂದು ಸರಿಯಾದ ಪಾಠ"ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.

"ಬಿಜೆಪಿಯ ಭಿನ್ನಮತ ಈಗಾಗಲೇ ಸ್ಪೋಟಗೊಳ್ಲಬೇಕಿತ್ತು. ಆದರೆ, ಕೊರೊನಾದಿಂದ ಸ್ವಲ್ಪ ಮುಂದಕ್ಕೆ ಹೋಗಿದೆ ಅಷ್ಟೇ. ಇನ್ನಾರು ತಿಂಗಳಲ್ಲಿ ಮುಖ್ಯಮಂತ್ರಿಗಳು ಕುರ್ಚಿಯನ್ನು ಕಳೆದುಕೊಳ್ಳಲಿದ್ದಾರೆ"ಎಂದು ಬೇಳೂರು ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತ ಪಡಿಸಿದರು.

"ನಾನು ಕೋಡಿಮಠದ ಶ್ರೀಗಳಲ್ಲ. ಆದರೆ, ಕೋಡಿಶ್ರೀಗಳು ಯಡಿಯೂರಪ್ಪನವರ ಜೊತೆ ಹೊಂದಾಣಿಕೆ ಮಾಡಿಕೊಂಡಂತಿದೆ"ಎಂದು ಬೇಳೂರು ಗೋಪಾಲಕೃಷ್ಣ ಲೇವಡಿ ಮಾಡಿದರು.

English summary
Because Of BY Vijayendra And Shobha Karandlaje, Yediyurappa Will Loose The CM Post, Beluru Gopalakrishna Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X