Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿ.ಎಸ್. ಯಡಿಯೂರಪ್ಪ ಹೆಸರು ಅಂತಿಮ; ಸಿಎಂ ಘೋಷಣೆ
ಶಿವಮೊಗ್ಗ, ಏಪ್ರಿಲ್ 20: ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಸರು ಇಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬುಧವಾರ ಶಿವಮೊಗ್ಗದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುದ್ದಿಗಾರರೊಂದಿಗೆ ಮಾತನಾಡಿದರು. ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಸರು ಇಡಲು ಸಚಿವ ಸಂಪುಟ ತೀರ್ಮಾನಿಸಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಕಳುಹಿಸಲಾಗಿದೆ ಎಂದು ತಿಳಿಸಿದರು.
ಶಿವಮೊಗ್ಗ ವಿಮಾನ ನಿಲ್ದಾಣ ಟರ್ಮಿನಲ್ ವಿನ್ಯಾಸ ಸಮರ್ಥಿಸಿಕೊಂಡ ಬಿ.ವೈ. ರಾಘವೇಂದ್ರ
ಕಾಮಗಾರಿಗೆ
ಮತ್ತಷ್ಟು
ಅನುದಾನ
ಶಿವಮೊಗ್ಗ
ವಿಮಾನ
ನಿಲ್ದಾಣ
ಕಾಮಗಾರಿಗಾಗಿ
ರೈತರು
ಹೆಚ್ಚುವರಿ
ಜಮೀನು
ನೀಡಿದ್ದಾರೆ.
ಅದಕ್ಕೆ
ಪರಿಹಾರ
ನೀಡಬೇಕಿದೆ.
ರನ್ವೇ
ಕಾಮಗಾರಿ
ಪೂರ್ಣಗೊಳಿಸಲು,
ವಿಮಾನ
ನಿಲ್ದಾಣ
ಸುತ್ತಲು
ರಸ್ತೆ
ನಿರ್ಮಾಣಕ್ಕೆ
40ರಿಂದ
50
ಕೋಟಿ
ರೂ.
ಅನುದಾನ
ಬೇಕಿದೆ.
ಈ
ಹಣ
ಒದಗಿಸಲು
ಸರ್ಕಾರ
ಸಿದ್ಧವಿದೆ
ಎಂದು
ಮುಖ್ಯಮಂತ್ರಿ
ಬೊಮ್ಮಾಯಿ
ತಿಳಿಸಿದರು.
ಅಂತಾರಾಷ್ಟ್ರೀಯ
ಗುಣಮಟ್ಟದ
ರಸ್ತೆ
ಅಕ್ಕಪಕ್ಕದ
ಗ್ರಾಮದ
ರೈತರ
ಓಡಾಟಕ್ಕೆ
ವಿಮಾನ
ನಿಲ್ದಾಣದ
ಪಕ್ಕದಲ್ಲಿ
ಅಸ್ಫಾಲ್ಟ್
ರಸ್ತೆ
ನಿರ್ಮಾಣ
ಮಾಡಲಾಗುತ್ತದೆ.
ಇನ್ನು
ವಿಮಾನ
ನಿಲ್ದಾಣಕ್ಕೆ
ವಿದೇಶಿಯರು,
ಬೇರೆ
ಕಡೆಯಿಂದ
ಪ್ರವಾಸಿಗರು
ಬರುತ್ತಾರೆ.
ಆದ್ದರಿಂದ
ವಿಮಾನ
ನಿಲ್ದಾಣದ
ಸಂಪರ್ಕಕ್ಕೆ
ಅಂತಾರಾಷ್ಟ್ರೀಯ
ಗುಣಮಟ್ಟದ
ರಸ್ತೆ
ನಿರ್ಮಿಸಲಾಗುತ್ತದೆ
ಎಂದು
ಸಿಎಂ
ತಿಳಿಸಿದರು.
ನೈಟ್
ಲ್ಯಾಂಡಿಂಗ್,
ಕನೆಕ್ಟಿವಿಟಿ
ಲೈಸೆನ್ಸ್
ಶಿವಮೊಗ್ಗ
ವಿಮಾನ
ನಿಲ್ದಾಣದಲ್ಲಿ
ರಾತ್ರಿ
ವೇಳೆ
ವಿಮಾನ
ಲ್ಯಾಂಡಿಂಗ್ಗೆ
ಅನುಕೂಲ
ಆಗುವ
ವ್ಯವಸ್ಥೆ
ಮಾಡಬೇಕಿದೆ.
ಅಲ್ಲದೆ
ಕನೆಕ್ಟಿವಿಟಿ
ಲೈಸೆನ್ಸಿಂಗ್
ಬೇಕಿದೆ.
ಕೇಂದ್ರ
ಸರ್ಕಾರದೊಂದಿಗೆ
ಈ
ಕುರಿತು
ಮಾತುಕತೆ
ನಡೆಸುವಂತೆ
ಶಿವಮೊಗ್ಗ
ಕ್ಷೇತ್ರದ
ಸಂಸದ
ಬಿ.ವೈ.
ರಾಘವೇಂದ್ರ
ಮನವಿ
ಮಾಡಿದರು.
ಇದಕ್ಕೆ
ಸ್ಪಂದಿಸಿದ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ,
ನೈಟ್
ಲ್ಯಾಂಡಿಂಗ್,
ಎಟಿಸಿ
ಟವರ್ಗೆ
ಅಗತ್ಯವಿರುವ
ಉಪಕರಣ,
ಕನಕ್ಟಿವಿಟಿ
ಲೈಸೆನ್ಸಿಂಗ್
ಸೇರಿದಂತೆ
ಅಗತ್ಯವಿರುವ
ಎಲ್ಲಾ
ಸಹಕಾರ
ನೀಡಲಾಗುತ್ತದೆ
ಎಂದು
ತಿಳಿಸಿದರು.
ಯಡಿಯೂರಪ್ಪಗೆ
ಹೆಚ್ಚಿನ
ಆಸಕ್ತಿ
ಶಿವಮೊಗ್ಗ
ವಿಮಾನ
ನಿಲ್ದಾಣ
ಕುರಿತು
ಮಾಜಿ
ಮುಖ್ಯಮಂತ್ರಿ
ಯಡಿಯೂರಪ್ಪ
ಅವರಿಗೆ
ಹೆಚ್ಚಿನ
ಅಸಕ್ತಿ
ಇದೆ.
ಬೆಂಗಳೂರಿನಲ್ಲಿ
ಇದ್ದಾಗ
ವಿಮಾನ
ನಿಲ್ದಾಣ
ಕುರಿತು
ತಿಳಿಸಿದ್ದರು.
ಶಿವಮೊಗ್ಗಕ್ಕೆ
ಬಂದಾಗಲೂ
ಕರೆ
ಮಾಡಿ
ವಿಮಾನ
ನಿಲ್ದಾಣ
ಕಾಮಗಾರಿ
ಪರಿಶೀಲನೆಗೆ
ಮನವಿ
ಮಾಡಿದ್ದರು.
ವಿಮಾನ
ನಿಲ್ದಾಣ
ಮತ್ತು
ಶಿವಮೊಗ್ಗದಲ್ಲಿ
ನಡೆಯುತ್ತಿರುವ
ಕಾಮಗಾರಿಗಳಿಗೆ
ಅನುದಾನ
ಬಿಡುಗಡೆ
ಮಾಡುವಂತೆ
ಯಡಿಯೂರಪ್ಪ
ಹೇಳಿದ್ದಾರೆ
ಎಂದು
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ತಿಳಿಸಿದರು.
ರನ್ ವೇ ಕಾಮಗಾರಿ ಪರಿಶೀಲನೆ
ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರನ್ವೇ ಕಾಮಗಾರಿ ಪರಿಶೀಲನೆ ನಡೆಸಿದರು. ಮೂರು ಕಿ.ಮೀ ರನ್ವೇಯಲ್ಲಿ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು ಸಂಚರಿಸಿದರು. ರನ್ವೇ ವಿಸ್ತರಣೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಅಲ್ಲದೆ ಕಾಮಗಾರಿ ಕುರಿತು ಅಧಿಕಾರಿಗಳು, ಗುತ್ತಿಗೆದಾರರಿಂದ ಮಾಹಿತಿಯನ್ನು ಪಡೆದರು.
ಸಂಸದ ಬಿ.ವೈ. ರಾಘವೇಂದ್ರ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಶಾಸಕರಾದ ಹರತಾಳು ಹಾಲಪ್ಪ, ಅಶೋಕ ನಾಯ್ಕ್, ಪ್ರಮುಖರಾದ ಎಸ್. ದತ್ತಾತ್ರಿ, ಮೇಯರ್ ಸುನೀತಾ ಅಣ್ಣಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಸೇರಿದಂತೆ ಹಲವರು ಇದ್ದರು.