ಒಂದೂವರೆ ತಿಂಗಳ ಬಳಿಕ ಆಗುಂಬೆ ಘಾಟಿಯಲ್ಲಿ ಮತ್ತೆ ಸಂಚಾರ ಆರಂಭ
ಬೆಂಗಳೂರು, ಮೇ 17: ಒಂದೂವರೆ ತಿಂಗಳ ಕಾಮಗಾರಿ ಬಳಿಕ ಆಗುಂಬೆ ಘಾಟಿಯಲ್ಲಿ ಮತ್ತೆ ಸಂಚಾರ ಆರಂಭಗೊಂಡಿದೆ.
ಗುರುವಾರ
(ಮೇ
16)ದಿಂದ
ಸಂಜೆಯಿಂದಲೇ
ದ್ವಿಚಕ್ರ
ವಾಹನಗಳು
ಮತ್ತು
ಕಾರುಗಳಿಗೆ
ಅವಕಾಶ
ಕಲ್ಪಿಸಲಾಗಿತ್ತು.
ಗುರುವಾರ
ಬೆಳಗ್ಗೆಯಿಂದ
ಈ
ಮಾರ್ಗದಲ್ಲಿ
ಮಿನಿ
ಬಸ್
ಸಂಚಾರ
ಆರಂಭಿಸಿವೆ.
ಒಂದೂವರೆ
ತಿಂಗಳಿನಿಂದ
ಸ್ಥಗತಗೊಂಡಿದ್ದ
ಮಲೆನಾಡು-ಕರಾವಳಿ
ಸಂಪರ್ಕ
ಸೇತುವೆ
ಆಗುಂಬೆ
ಘಾಟಿ
ರಸ್ತೆಯಲ್ಲಿ
ವಾಹನ
ಸಂಚಾರ
ಮತ್ತೆ
ಆರಂಭಿಸಿವೆ.
ಮೇ 16ರಿಂದ ಆಗುಂಬೆ ಘಾಟ್ ರಸ್ತೆ ವಾಹನ ಸಂಚಾರಕ್ಕೆ ಮುಕ್ತ
ಕಳೆದ ವರ್ಷ ಜೂನ್ ಎರಡನೇ ವಾರ ಸುರಿದ ಭಾರಿ ಮಳೆಗೆ ಈ ಘಾಟಿ ರಸ್ತೆಯ 5.7 ಹಾಗೂ 14ನೇ ಸುತ್ತಿನಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಗುಡ್ಡ ಕುಸಿದ ಜಾಗಣದಲ್ಲಿ ಮರಳು ಚೀಲಗಳನ್ನು ಹಾಕಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಶಾಶ್ವತವಾಗಿ ದುರಸ್ತಿಗೊಳಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಏಪ್ರಿಲ್ ಒಂದರಿಂದ 30ರವರೆಗೆ ಸ್ಥಗಿತಗೊಳಿಸಲಾಗಿತ್ತು.
ಕಾಮಗಾರಿಗೆ ಸಂಬಂಧಿಸಿ ವನ್ಯಜೀವಿ ವಿಭಾಗ ವಿಧಿಸಿ ನಿಯಮಗಳನ್ನು ಪಾಲಿಸಬೇಕಾದ ಹಿನ್ನೆಲೆಯಲ್ಲಿ ಇಲಾಖೆಯ ಅನುಮತಿ ದೊರೆಯುವುದು ತಡವಾಗಿತ್ತು. ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಇಲ್ಲಿ ರಸ್ತೆ ವಿಸ್ತರಣೆ ಮಾಡಬೇಕಿದೆ. ಆದರೆ ವನ್ಯಜೀವಿ ವಿಭಾಗ ತಕರಾರು ತೆಗೆದಿರುವ ಕಾರಣ ಈ ಕಾಮಗಾರಿಯನ್ನು ಕೈಬಿಡಲಾಗಿದೆ.