ಮೇ 25ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ಶಿವಮೊಗ್ಗ, ಮೇ 20 : 2016ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಮೇ 25ರಂದು ಪ್ರಕಟಿಸಲು ಪ್ರೌಢ ಶಿಕ್ಷಣ ಇಲಾಖೆ ಸಿದ್ಧವಾಗಿದೆ' ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಹೇಳಿದ್ದಾರೆ.
ಗುರುವಾರ
ಭದ್ರಾವತಿಯಲ್ಲಿ
ಮಾತನಾಡಿದ
ಸಚಿವರು,
'ಈ
ಬಾರಿ
ಉತ್ತರ
ಪತ್ರಿಕೆ
ಸ್ಕ್ಯಾನ್
ಕಾಪಿ
ಕೊಡುವ
ಉದ್ದೇಶವನ್ನು
ಇಲಾಖೆಯು
ಹೊಂದಿದೆ.
ಸ್ಕ್ಯಾನ್
ಮಾಡಿಕೊಡುವ
ತಾಂತ್ರಿಕತೆಯ
ಬಗ್ಗೆ
ಪ್ರಾಯೋಗಿಕ
ಪರೀಕ್ಷೆ
ನಡೆಯುತ್ತಿದೆ.
ಇದು
ಅಂತಿಮಗೊಂಡ
ತಕ್ಷಣ
ಫಲಿತಾಂಶ
ಪ್ರಕಟಿಸುತ್ತೇವೆ'
ಎಂದರು.
[ಪಿಯು
ಪ್ರಶ್ನೆ
ಪ್ರತ್ರಿಕೆ
ಸೋರಿಕೆಯಾಗಿದ್ದು
ಹಾವೇರಿಯಲ್ಲಿ]
ಮೇ 25ರೊಳಗೆ ಫಲಿತಾಂಶ ಪ್ರಕಟಿಸುವಾಗಿ ಹಿಂದೆ ಸಚಿವರು ಹೇಳಿದ್ದರು. ಈಗ ಮೇ 25ರಂದೇ ಫಲಿತಾಂಶ ಘೋಷಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ, ಗ್ರೇಸ್ ಅಂಕಗಳು, ಮೌಲ್ಯ ಮಾಪನ ಬಹಿಷ್ಕಾರ ಮುಂತಾದ ಹಲವು ವಿವಾದಗಳಿಂದಾಗಿ ಈ ಬಾರಿಯ ಪಿಯುಸಿ ಪರೀಕ್ಷೆ ಫಲಿತಾಂಶ ಕುತೂಹಲ ಮೂಡಿಸಿದೆ. [ಸಿಇಟಿ ಫಲಿತಾಂಶಕ್ಕೂ ಮೊದಲು ಪಿಯು ಫಲಿತಾಂಶ ಪ್ರಕಟ]
ಪರೀಕ್ಷೆ ರದ್ದಾಗಿತ್ತು : 2016ರ ಮಾರ್ಚ್ 21ರಂದು 1.75 ಲಕ್ಷ ವಿದ್ಯಾರ್ಥಿಗಳು ಪಿಯುಸಿ ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್ 31ಕ್ಕೆ ಮರು ಪರೀಕ್ಷೆ ನಿಗದಿ ಮಾಡಲಾಗಿತ್ತು. ಆದರೆ, ಪುನಃ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಅಂತಿಮವಾಗಿ ಏಪ್ರಿಲ್ 12ರಂದು ಪರೀಕ್ಷೆ ನಡೆದಿತ್ತು. [ಪ್ರಶ್ನೆ ಪತ್ರಿಕೆ ಸೋರಿಕೆ : ಟೊಮೆಟೊ ಅಣ್ಣನ ಮಗ ಸಿಕ್ಕಿಬಿದ್ದ]
ಕರ್ನಾಟಕ
ಸರ್ಕಾರ
ಪ್ರಶ್ನೆ
ಪತ್ರಿಕೆ
ಸೋರಿಕೆ
ಹಗರಣದ
ತನಿಖೆಯನ್ನು
ಸಿಐಡಿಗೆ
ಒಪ್ಪಿಸಿದೆ.
ಹಗರಣಕ್ಕೆ
ಸಂಬಂಧಿಸಿದಂತೆ
ಇದುವರೆಗೂ
15
ಆರೋಪಿಗಳನ್ನು
ಬಂಧಿಸಲಾಗಿದೆ.
ಸಿಐಡಿ
ಪೊಲೀಸರು
ಹೇಳುವ
ಪ್ರಕಾರ
ದಿನೇಶ್
ಎಂಬ
ಆರೋಪಿಗಾಗಿ
ಹುಡುಕಾಟ
ಮುಂದುವರೆದಿದೆ.
ರಂಜಿತ್ಗೆ ಸನ್ಮಾನ : ಗುರುವಾರ ಭದ್ರಾವತಿಗೆ ಭೇಟಿ ನೀಡಿದ್ದ ಸಚಿವ ಕಿಮ್ಮನೆ ರತ್ನಾಕರ ಅವರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಪಡೆದು ಐತಿಹಾಸಿಕ ಸಾಧನೆ ಮಾಡಿದ ರಂಜಿತ್ಗೆ ಅಭಿನಂದನೆ ಸಲ್ಲಿಸಿ, ಸನ್ಮಾನ ಮಾಡಿದರು. [SSLC ಟಾಪರ್ ರಂಜಿತ್ ಬಗ್ಗೆ ರಂಜನೀಯ ಟ್ರಾಲ್ಸ್]