ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪರಿಚಯ
ಶಿವಮೊಗ್ಗ, ನವೆಂಬರ್ 09 : ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಬಿ.ವೈ.ರಾಘವೇಂದ್ರ ಅವರು ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಶಿಕಾರಿಪುರ ಕ್ಷೇತ್ರದ ಶಾಸಕರಾಗಿಯೂ ಅವರು ಕೆಲಸ ಮಾಡಿದ್ದಾರೆ.
ಶಿವಮೊಗ್ಗ ಲೋಕಸಭಾ ಉಪ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರು 5,43,306 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. 2009ರಲ್ಲಿ ಅವರು ಮೊದಲ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೆ ಆಯ್ಕೆಯಾಗಿದ್ದರು.
ಶಿವಮೊಗ್ಗ ಉಪ ಚುನಾವಣೆ : ಯಾವ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?
ಬಿ.ವೈ.ರಾಘವೇಂದ್ರ ಮಾಜಿ ಮುಖ್ಯಮಂತ್ರಿ, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ. 2007ರಲ್ಲಿ ಶಿಕಾರಿಪುರ ಪುರಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ ಅವರು ಶಿವಮೊಗ್ಗ ಸಂಸದರಾಗಿ, ಶಿಕಾರಿಪುರ ಕ್ಷೇತ್ರದ ಶಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಶಿವಮೊಗ್ಗ : ಮಾಜಿ ಸಂಸದ ಬಿವೈ ರಾಘವೇಂದ್ರ ಆಸ್ತಿ ದ್ವಿಗುಣವಾಗಿದೆ
ಪ್ರೇರಣಾ ಎಜುಕೇಷನಲ್ ಅಂಡ್ ಸೋಷಿಯಲ್ ಟ್ರಸ್ಟ್ ಮೂಲಕ ಶಿವಮೊಗ್ಗದಲ್ಲಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಮೂಲಕ ಶಿಕಾರಿಪುರದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಬಿ.ವೈ.ರಾಘವೇಂದ್ರ ಅವರ ಪರಿಚಯ ಇಲ್ಲಿದೆ ನೋಡಿ......
ಬಿ.ವೈ.ರಾಘವೇಂದ್ರ
*
ಬಿ.ವೈ.ರಾಘವೇಂದ್ರ
ವಯಸ್ಸು
45
ವರ್ಷ
*
ಜನನ
16
ಆಗಸ್ಟ್
1973
*
ಪ್ರಾಥಮಿಕ
ಮತ್ತು
ಪ್ರೌಢ
ಶಿಕ್ಷಣ
ಶಿಕಾರಿಪುರ
ಮತ್ತು
ಬೆಂಗಳೂರಿನಲ್ಲಿ
*
ಪದವಿ
ಪೂರ್ವ
ಶಿಕ್ಷಣ
ಶಿವಮೊಗ್ಗ
ಡಿ.ವಿ.ಎಸ್.ಕಾಲೇಜಿನಲ್ಲಿ
*
ಶಿವಮೊಗ್ಗ
ಆಚಾರ್ಯ
ತುಳಸಿ
ರಾಷ್ಟ್ರೀಯ
ಶಿಕ್ಷಣ
ಸಂಸ್ಥೆಯಲ್ಲಿ
ಬಿಬಿಎಂ
ವ್ಯಾಸಂಗ
*
ಪತ್ನಿ
ತೇಜಸ್ವಿನಿ.
ಸುಭಾಷ್
ಮತ್ತು
ಭಗತ್
ಮಕ್ಕಳು
ರಾಜಕೀಯಕ್ಕೆ ಪಾದಾರ್ಪಣೆ
*
2007ರಲ್ಲಿ
ಶಿಕಾರಿಪುರದ
ಪುರಸಭಾ
ಸದಸ್ಯರಾಗಿ
ಆಯ್ಕೆ
*
2009ರಲ್ಲಿ
ಶಿವಮೊಗ್ಗ
ಸಂಸದರಾಗಿ
ಆಯ್ಕೆ
*
2014ರಲ್ಲಿ
ಶಿಕಾರಪುರ
ಉಪ
ಚುನಾವಣೆಯಲ್ಲಿ
ಕ್ಷೇತ್ರದ
ಶಾಸಕರಾಗಿ
ಆಯ್ಕೆ
*
2018ರ
ಶಿವಮೊಗ್ಗ
ಉಪ
ಚುನಾವಣೆಯಲ್ಲಿ
ಸಂಸದರಾಗಿ
ಆಯ್ಕೆ
ವಿವಿಧ ಸಂಸ್ಥೆಗಳ ಸದಸ್ಯರಾಗಿ ಕಾರ್ಯ
*
1995ರಿಂದ
ಶ್ರೀಮತಿ
ಗಂಗಮ್ಮ
ವೀರಭದ್ರಶಾಸ್ತ್ರಿ
ಸ್ಮಾರಕ
ಟ್ರಸ್ಟ್
(ರಿ)
ಅಡಿಯಲ್ಲಿ
ಕಲೆ,
ಸಾಹಿತ್ಯ,
ಸಂಗೀತ
ಪ್ರೋತ್ಸಾಹಿಸಲು
ವಿವಿಧ
ಸಾಂಸ್ಕೃತಿಕ
ಕಾರ್ಯಕ್ರಮಗಳಿಗೆ
ಪ್ರೋತ್ಸಾಹ.
*
1993ರಲ್ಲಿ
ಕುವೆಂಪು
ವಿಶ್ವವಿದ್ಯಾಲಯದ
ಸೆನೆಟ್
ಸದಸ್ಯರಾಗಿ
ಕಾರ್ಯ
ನಿರ್ವಹಣೆ
*
ಅಕ್ಟೋಬರ್
8,
2012ರಂದು
6
ವರ್ಷಗಳ
ಅವಧಿಗೆ
ಅಖಿಲ
ಭಾರತ
ವೀರಶೈವ
ಮಹಾಸಭಾದ
ಕೇಂದ್ರ
ಸಮಿತಿ
ಸದಸ್ಯರಾಗಿ
ಆಯ್ಕೆ
*
ಸೆಪ್ಟೆಂಬರ್
26,
2010ರಲ್ಲಿ
ಅಖಿಲ
ಭಾರತ
ವೀರಶೈವ
ಮಹಾಸಭಾ
ರಾಜ್ಯ
ಯುವ
ಘಟಕದ
ಅಧ್ಯಕ್ಷರಾಗಿ
ಆಯ್ಕೆ
ಶೈಕ್ಷಣಿಕ ಕಾರ್ಯಗಳು
*
2008ರಲ್ಲಿ
ಪ್ರೇರಣಾ
ಎಜುಕೇಷನಲ್
ಅಂಡ್
ಸೋಷಿಯಲ್
ಟ್ರಸ್ಟ್
ಮೂಲಕ
ಕಾಲೇಜುಗಳನ್ನು
ಸ್ಥಾಪಿಸಿ
ಪಬ್ಲಿಕ್
ಸ್ಕೂಲ್,
ಡಿಪ್ಲೊಮಾ,
ಪಿಯುಸಿ,
ಇಂಜಿನಿಯರಿಂಗ್
ಹಾಗೂ
ಎಂಬಿಎ
ಕಾಲೇಜುಗಳ
ಮ್ಯಾನೇಜಿಂಗ್
ಟ್ರಸ್ಟಿಯಾಗಿ
ಕಾರ್ಯ
ನಿರ್ವಹಣೆ
*
1996ರಿಂದ
ಸ್ವಾಮಿ
ವಿವೇಕಾನಂದ
ವಿದ್ಯಾ
ಸಂಸ್ಥೆಯ
ಮೂಲಕ
ಶಿಕಾರಿಪುರದಲ್ಲಿ
ಕಾಲೇಜುಗಳನ್ನು
ಆರಂಭಿಸಿ
ಪ್ರಾಥಮಿಕ
ಶಿಕ್ಷಣ/
ಪ್ರೌಢ
ಶಿಕ್ಷಣ/ಪದವಿಪೂರ್ವ
ಶಿಕ್ಷಣ/ಡಿಎಡ್
ಕಾಲೇಜು/ಬಿಎಡ್
ಕಾಲೇಜು/ನರ್ಸಿಂಗ್
ಕಾಲೇಜುಗಳ
ಕಾರ್ಯದರ್ಶಿಯಾಗಿ
ಸೇವೆ.