ಶಿವಮೊಗ್ಗದಲ್ಲಿ ಎಸಿಬಿ ಪೊಲೀಸ್ ಠಾಣೆ ಆರಂಭ
ಶಿವಮೊಗ್ಗ, ಜೂನ್ 22 : ಶಿವಮೊಗ್ಗ ಜಿಲ್ಲೆಯಲ್ಲಿ ಭ್ರಷ್ಟಾಚಾರ ನಿಗ್ರಹದಳದ ಕಚೇರಿ ಆರಂಭವಾಗಿದೆ. ಸರ್ಕಾರಿ ಕೆಲಸಗಳನ್ನು ಮಾಡಿಕೊಡಲು ಲಂಚ ಕೇಳಿದಲ್ಲಿ ಅಥವಾ ಸರ್ಕಾರಿ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಲ್ಲಿ ಎಸಿಬಿಗೆ ದೂರು ನೀಡಲು ಮನವಿ ಮಾಡಲಾಗಿದೆ.
ನಗರದ
ಜಿಲ್ಲಾ
ಪೊಲೀಸ್
ಅಧೀಕ್ಷಕರ
ಕಚೇರಿ
ಪಕ್ಕದಲ್ಲಿ
ಭ್ರಷ್ಟಾಚಾರ
ನಿಗ್ರಹದಳ
(ಎಸಿಬಿ)
ಕಚೇರಿ
ಆರಂಭಿಸಲಾಗಿದೆ.
ಎಸಿಬಿಯ
ಹೆಚ್ಚುವರಿ
ಪೊಲೀಸ್
ಮಹಾನಿರ್ದೇಶಕ
ಕೆ.ವಿ.ಗಗನದೀಪ್
ಅವರು
ಮಂಗಳವಾರ
ಕಚೇರಿ
ಉದ್ಘಾಟಿಸಿದ್ದಾರೆ.
[ಭ್ರಷ್ಟಾಚಾರ
ನಿಗ್ರಹ
ದಳದ
ಯಾವ
ಕಚೇರಿ
ಎಲ್ಲಿರುತ್ತದೆ?]
ಜಿಲ್ಲೆಯಲ್ಲಿ ಯಾವುದೇ ಸರ್ಕಾರಿ ಕಚೇರಿಯಲ್ಲಿ ಸರ್ಕಾರಿ ಕೆಲಸಗಳನ್ನು ಮಾಡಿಕೊಡಲು ಲಂಚ ಕೇಳಿದಲ್ಲಿ ಅಥವಾ ಇನ್ನಿತರೆ ಭ್ರಷ್ಟಾಚಾರದಲ್ಲಿ ತೊಡಗಿದ್ದಲ್ಲಿ ಇದಕ್ಕೆ ಸಂಬಂಧಿಸಿದ ಯಾವುದೇ ದೂರುಗಳು ಇದ್ದಲ್ಲಿ ಎಸಿಬಿಗೆ ದೂರು ನೀಡಬಹುದಾಗಿದೆ. [ಎಸಿಬಿ ರಚನೆ : ಸಿದ್ದರಾಮಯ್ಯ ಸ್ಪಷ್ಟನೆಗಳು]
ಮಾಹಿತಿಗಾಗಿ ದೂರವಾಣಿ ಸಂಖ್ಯೆ 08182-222276, ಮೊಬೈಲ್ ಸಂಖ್ಯೆ 9480806287, 9480806288. [ಸಂದರ್ಶನ : ಎಸಿಬಿಯಿಂದಾಗಿ ಲೋಕಾಯುಕ್ತದ ಅಧಿಕಾರ ಮೊಟಕುಗೊಳ್ಳುವುದಿಲ್ಲ]
ಭ್ರಷ್ಟಾಚಾರ ನಿಗ್ರಹ ದಳದ ಕೇಂದ್ರ ಕಚೇರಿ ಬೆಂಗಳೂರಿನ ಖನಿಜ ಭವನದಲ್ಲಿದ್ದು, ಪ್ರತಿ ಜಿಲ್ಲೆಯಲ್ಲಿಯೂ ಎಸಿಬಿ ದಳ ರಚನೆಯಾಗಲಿದೆ. ಡಿಎಸ್ಪಿ ದರ್ಜೆಯ ಅಧಿಕಾರಿ ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಎಸಿಬಿ ರಚನೆ : ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರ ಭ್ರಷ್ಟಾಚಾರ ನಿಗ್ರಹ ದಳವನ್ನು (Anti Corruption Bureau- ACB) ರಚನೆ ಮಾಡಿ ಮಾರ್ಚ್ 15ರಂದು ಆದೇಶ ಹೊರಡಿಸಿದೆ. ವಿರೋಧ ಪಕ್ಷಗಳು ಎಸಿಬಿ ರಚನೆಯನ್ನು ವಿರೋಧಿಸುತ್ತಿವೆ.