ಕಾರಿನೊಳಗೆ ಕೂತಿದ್ದ ಶಿವಮೊಗ್ಗ ಮಾರ್ಕೆಟ್ ಗಿರಿಯನ್ನು ಕೊಂದ ಮುಸುಕುಧಾರಿಗಳು
ಶಿವಮೊಗ್ಗ, ಸೆಪ್ಟೆಂಬರ್ 12: ನಗರದ ಸೂರ್ಯ ಕಂಫರ್ಟ್ಸ್ ನ ಬಳಿ ಮಂಗಳವಾರ ರೌಡಿ ಶೀಟರ್ ಮಾರ್ಕೆಟ್ ಗಿರಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾತ್ರಿ 9.45ರ ಹೊತ್ತಿಗೆ ಈ ಹತ್ಯೆ ಮಾಡಲಾಗಿದೆ. ಹಳೇ ದ್ವೇಷವೇ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.
ಸೂರ್ಯ ಕಂಫರ್ಟ್ಸ್ ನಲ್ಲಿರುವ ಬಾರ್ ನ ಪ್ರವೇಶ ದ್ವಾರದಲ್ಲಿ ಗಿರಿಯನ್ನು ಹತ್ಯೆ ಮಾಡಲಾಗಿದೆ. ಈ ಕೊಲೆಯ ಕುರಿತು ಮಾತನಾಡಿದ ಎಸ್ಪಿ ಅಭಿನವ ಖರೆ, ರೌಡಿ ಶೀಟರ್ ಗಿರಿ ಮರ್ಡರ್ ಗೆ ಹಳೇ ವೈಷಮ್ಯವೇ ಕಾರಣವೆಂದು ತಿಳಿದುಬಂದಿದೆ. ಹತ್ಯೆಯ ಕುರಿತು ತನಿಖೆ ನಡೆದಾಗಲೇ ಯಾರು ಈ ಹತ್ಯೆಗೆ ಕಾರಣರು ಎಂಬ ಸತ್ಯ ಹೊರಬರಲಿದೆ ಎಂದು ಹೇಳಿದ್ದಾರೆ.
ಫೇಸ್ ಬುಕ್ ಲೈವ್ ನಲ್ಲಿ ವಿಷ ಸೇವಿಸಿದ ಹೊಸನಗರ ಯುವಕ
ಐದು ಜನ ಮುಸುಕುಧಾರಿಗಳು ಬಂದು ಏಕಾಏಕಿ ಗಿರಿ ಮೇಲೆ ಎರಗಿದ್ದು, ಮಚ್ಚು ಮತ್ತು ಲಾಂಗು ಬೀಸಿದ್ದಾರೆ. ಇದರಿಂದಾಗಿ ಗಿರಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.
ಸೂರ್ಯ ಕಂಫರ್ಟ್ಸ್ ಎದುರು ನಿಲ್ಲಿಸಿದ್ದ ತನ್ನ ಸ್ನೇಹಿತನ ಕಾರಿನಲ್ಲಿ ಗಿರಿ ಹಿಂಭಾಗದಲ್ಲಿ ಕುಳಿತಿದ್ದ. ಕಾರಿನ ಹಿಂಭಾಗದ ಗಾಜು ಒಡೆದ ದುಷ್ಕರ್ಮಿಗಳು ಏಕಾಏಕಿ ಮಚ್ಚು- ಲಾಂಗ್ ಬೀಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಅವನಿಗೆ ಅವಕಾಶ ದೊರೆತಿಲ್ಲ. ಒಂದು ಕಾಲು ಕಾರಿನ ಒಳಗೆ ತುಂಡಾಗಿದೆ. ದೇಹ ಹೊರಗೆ ಬಿದ್ದಿದೆ.
29 ರೌಡಿಗಳನ್ನು ಜೈಲಿಗಟ್ಟಿದ ಶಿವಮೊಗ್ಗ ಎಸ್ಪಿ ಅಭಿನವ್ ಖರೆ
ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಜಿಲ್ಲಾ ಹೆಚ್ಚುವರಿ ಎಸ್ ಪಿ ಮುತ್ತುರಾಜ್, ಡಿವೈಎಸ್ಪಿ ಸುದರ್ಶನ್, ದೊಡ್ಡಪೇಟೆ ಪೊಲೀಸ್ ಠಾಣೆಯ ಹರೀಶ್ ಪಾಟೀಲ್ ಮೊದಲಾದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.