ಹೈಕೋರ್ಟ್ನಲ್ಲಿ ಕೆಎಸ್ ಈಶ್ವರಪ್ಪ ಕುಟುಂಬಕ್ಕೆ ಹಿನ್ನಡೆ
ಶಿವಮೊಗ್ಗ, ಆಗಸ್ಟ್ 02 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಕುಟುಂಬಕ್ಕೆ ಹಿನ್ನಡೆ ಉಂಟಾಗಿದೆ. ಆಸ್ತಿಗಳಿಕೆ ಪ್ರಕರಣದಲ್ಲಿ ತನಿಖೆಗೆ ಆದೇಶ ನೀಡಿದ್ದ ಲೋಕಾಯುಕ್ತ ಕೋರ್ಟ್ ತೀರ್ಪನ್ನು ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಅಕ್ರಮ
ಆಸ್ತಿಗಳಿಕೆ
ಆರೋಪದಲ್ಲಿ
ಕೆ.ಎಸ್.ಈಶ್ವರಪ್ಪ,
ಈಶ್ವರಪ್ಪ
ಪುತ್ರ
ಕೆ.ಇ.ಕಾಂತೇಶ್,
ಸೊಸೆ
ಶಾಲಿನಿ
ವಿರುದ್ಧ
ತನಿಖೆ
ನಡೆಸಲು
ಶಿವಮೊಗ್ಗ
ಲೋಕಾಯುಕ್ತ
ಕೋರ್ಟ್
ಆದೇಶ
ನೀಡಿತ್ತು.
ಈ
ಆದೇಶವನ್ನು
ರದ್ದುಪಡಿಸುವಂತೆ
ಕೋರಿ
ಈಶ್ವರಪ್ಪ
ಅವರು
ಹೈಕೋರ್ಟ್ಗೆ
ಅರ್ಜಿ
ಸಲ್ಲಿಸಿದ್ದರು.[ಲೋಕಾಯುಕ್ತ
ಕಂಟಕದಲ್ಲಿ
ಯಡಿಯೂರಪ್ಪ,
ಈಶ್ವರಪ್ಪ]
ಸೋಮವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ, ಲೋಕಾಯುಕ್ತ ಕೋರ್ಟ್ ಆದೇಶ ರದ್ದುಪಡಿಸಲು ಸಾಧ್ಯವಿಲ್ಲ ಎಂದು ಹೇಳಿತು. ದೂರುದಾರ ವಿನೋದ್ ಅವರ ಪ್ರಮಾಣೀಕೃತ ಹೇಳಿಕೆ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿ ಅರ್ಜಿಯನ್ನು ಇತ್ಯರ್ಥ ಪಡಿಸಿತು.[ಈಶುಗೆ ಚುನಾವಣಾ ಕಾಲೇ ಲೋಕಾಯುಕ್ತ ಸ್ಮರಣೆ]
ಹೇಳಿಕೆ ದಾಖಲಿಸಿಕೊಳ್ಳಲು ಆದೇಶ : ದೂರುದಾರ ವಿನೋದ್ ಅವರ ಹೇಳಿಕೆಯನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳುವಂತೆ ಹೈಕೋರ್ಟ್ ಶಿವಮೊಗ್ಗ ಲೋಕಾಯುಕ್ತ ಕೋರ್ಟ್ಗೆ ಆದೇಶ ನೀಡಿದೆ. ವಕೀಲ ವಿನೋದ್ ಅವರು ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್ ಮತ್ತು ಶಾಲಿನಿ ಅವರ ವಿರುದ್ಧ ಅಕ್ರಮ ಆಸ್ತಿಗಳಿಕೆ ದೂರು ದಾಖಲು ಮಾಡಿದ್ದರು.