ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಚಾದ್ರಿಯಲ್ಲಿ ಸಿಡಿಲು ಬಡಿದು ಕೇರಳದ ಯುವಕ ಸಾವು

By Gururaj
|
Google Oneindia Kannada News

ಶಿವಮೊಗ್ಗ, ಮೇ 20 : ಸಿಡಿಲು ಬಡಿದು ಕೇರಳದ ಯುವಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ ಘಟನೆ ಕೊಡಚಾದ್ರಿಯಲ್ಲಿ ನಡೆದಿದೆ. ಕೇರಳದಿಂದ 4 ಯುವಕರು ಕೊಡಚಾದ್ರಿಗೆ ಚಾರಣಕ್ಕೆಂದು ಬಂದಿದ್ದರು.

ಮೃತಪಟ್ಟ ಯುವಕನನ್ನು ಕೇರಳದ ತ್ರಿಶೂರ್ ಮೂಲದ ವಿಷ್ಣು (24) ಎಂದು ಗುರುತಿಸಲಾಗಿದೆ. ಶನಿವಾರ ರಾತ್ರಿ ಸಿಡಿಲು ಬಡಿದು ವಿಷ್ಣು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿಸಿಡಿಲಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೆ? ಇಲ್ಲಿದೆ ಮಾಹಿತಿ

ವಿಷ್ಣು ಮತ್ತು ಆತನ ಮೂವರು ಸ್ನೇಹಿತರು ಕೇರಳದಿಂದ ಕೊಡಚಾದ್ರಿಗೆ ಟ್ರಕ್ಕಿಂಗ್ ಬಂದಿದ್ದರು. ರಾತ್ರಿ ಸರ್ವಜ್ಞ ಪೀಠದಲ್ಲಿ ತಂಗಿದ್ದರು. ಆಗ ಸಿಡಿಲು ಬಡಿದು ವಿಷ್ಣು ಮೃತಪಟ್ಟಿದ್ದಾರೆ.

Kerala youth killed in lightning at Kodachadri, Shivamogga

ಹೊಸನಗರ ತಾಲೂಕು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೋಷಕರಿಗೆ ಮಾಹಿತಿ ತಿಳಿಸಲು ಪೊಲೀಸರು ಪ್ರಯತ್ನ ನಡೆಸಿದ್ದಾರೆ.

ಲಾರಿಗೆ ಕಾರು ಡಿಕ್ಕಿ, ಇಬ್ಬರ ಸಾವು : ಹಾಸನ-ಬೆಂಗಳೂರು ರಾಷ್ಷ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದ್ದು ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮೃತ ಯುವಕರು ಮಂಡ್ಯ ಮೂಲದ ಬಸರಾಳು ಗ್ರಾಮದವರು ಎಂದು ತಿಳಿದುಬಂದಿದೆ. ಮೃತಪಟ್ಟ ಯುವಕರನ್ನು ಅರುಣ್, ರಾಜ ಎಂದು ಗುರುತಿಸಲಾಗಿದೆ. ಚಾಲಕ ಸಹ ಮೃತಪಟ್ಟಿದ್ದು, ಅವರ ಗುರುತು ಪತ್ತೆಯಾಗಿಲ್ಲ.

English summary
24 year old Vishnu from Thrissur, Kerala killed in lightning in Kodachadri, Shivamogga district. Vishnu and 3 others come to Kodachadri for trekking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X