ಶಿಕಾರಿಪುರ ತಾಲೂಕಿನ ಅಧಿಕಾರಿಗಳಿಗೆ ಬಿಎಸ್ ವೈ ಫುಲ್ ಕ್ಲಾಸ್
ಶಿವಮೊಗ್ಗ, ಜುಲೈ.19: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಿಕಾರಿಪುರ ಶಾಸಕರದ ಮೇಲೆ ಮೊದಲ ಬಾರಿಗೆ ತಾಲೂಕು ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿದರು.
ತಾಲೂಕಿನ ಕಾಮಗಾರಿಗಳು ಮತ್ತು ಇನ್ನೂ ಬಾಕಿ ಇರುವ ಕೆಲಸಗಳ ಬಗ್ಗೆ ವಿಚಾರಿಸಿದ ಅವರು ಕಾಮಗಾರಿಗಳ ವಿಳಂಬದ ಬಗ್ಗೆ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ಇನ್ನು ಮುಂದೆ ಈ ರೀತಿ ಕಾರಣ ಹೇಳಿದರೆ ಸರಿ ಇರುವುದಿಲ್ಲ . ಮೊದಲ ಸಭೆ ಎಂದು ಸುಮ್ಮನಿರುವೆ ಎಂದು ಎಚ್ಚರಿಕೆ ನೀಡಿದರು.
ಚಂದ್ರ ಗ್ರಹಣದ ಕೆಡುಕಿನ ಬಗ್ಗೆ ಯಡಿಯೂರಪ್ಪನವರು ಹೇಳಿದ್ದೇನು?
ತಾಲೂಕಿನ
ಅನೇಕ
ಸಮಸ್ಯೆಗಳ
ಬಗ್ಗೆ
ಅಧಿಕಾರಿಗಳು
ವಿಳಂಬ
ವಹಿಸುತ್ತಿರುವದುನ್ನು
ಗಮನಿಸಿ,
ಸಿಟ್ಟಾದ
ಅವರು
ವರದಿಯನ್ನು
ಸರಿಯಾಗಿ
ಪರಿಶೀಲಿಸಿ
ಸಭೆಗೆ
ತರಬೇಕು
ಎಂದರು.
ತಾಲೂಕಿನಲ್ಲಿ
ದುರಸ್ಥಿಯಲ್ಲಿರುವ
ಶಾಲಾ
ಕಾಲೇಜುಗಳ
ಕಟ್ಟಡ
ದುರಸ್ಥಿಗಳ
ಬಗ್ಗೆ
ಹೆಚ್ಚಿನ
ಗಮನವಹಿಸಬೇಕು
ಎಂದು
ಎಚ್ಚರಿಸಿದರು.
ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಯಡಿಯೂರಪ್ಪ ಅವರು ಜುಲೈ 27ರಂದು ಸಂಭವಿಸಲಿರುವ ಚಂದ್ರಗ್ರಹಣ ಅತ್ಯಂತ ಕೆಟ್ಟದ್ದು ಎಂದು ಹೇಳಲಾಗುತ್ತಿದೆ. ಆ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡಬೇಡಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಸಲಹೆ ನೀಡಿದರು.
ಗ್ರಹಣ ಕಳೆದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇನೆ. ಗ್ರಹಣದ ಸಮಯದಲ್ಲಿ ಯಾವುದೇ ಅವಘಡ ಸಂಭವಿಸದಿರಲಿ ಎಂದು ಪ್ರಾರ್ಥಿಸುವುದನ್ನು ಬಿಟ್ಟು ಬೇರೆ ದಾರಿ ಇಲ್ಲ. ರಾಜ್ಯದ ಜನರು ಗ್ರಹಣದ ಬಗ್ಗೆ ಎಚ್ಚರ ವಹಿಸಬೇಕು ಎಂದರು.