ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ, ವಿಡಿಯೋ ನೋಡಿ
ಶಿವಮೊಗ್ಗ, ಫೆಬ್ರವರಿ 19 : ಜೋಗ ಸಮೀಪದ ಶರಾವತಿ ವಿದ್ಯುದಾಗಾರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೂವರು ಇಂಜಿನಿಯರ್ ಸೇರಿದಂತೆ 20 ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, 10 ಘಟಕಗಳ ವಿದ್ಯುತ್ ವಿತರಣಾ ಕೇಬಲ್ ಜಾಲ ಸುಟ್ಟು ಭಸ್ಮವಾಗಿದ್ದು, ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ.
ಗುರುವಾರ
ಸಂಜೆ
4.30ರ
ಸುಮಾರಿಗೆ
220
ಕೆ.ವಿ.
ಸಾಮರ್ಥ್ಯದ
ಶರಾವತಿ
ಲೈನ್-2ರಲ್ಲಿ
ಶಾರ್ಟ್
ಸರ್ಕ್ಯೂಟ್
ಉಂಟಾಗಿ
ಬೆಂಕಿ
ಹೊತ್ತಿಕೊಂಡಿದೆ.
ಟರ್ಬೈನ್,
ವಿದ್ಯುತ್
ಪರಿವರ್ತಕಗಳಿಗೆ
ಬೆಂಕಿಯಿಂದಾಗಿ
ಯಾವುದೇ
ಹಾನಿ
ಉಂಟಾಗಿಲ್ಲ
ಎಂದು
ಅಧಿಕಾರಿಗಳು
ಸ್ಪಷ್ಟಪಡಿಸಿದ್ದಾರೆ.
[ವಿದ್ಯುತ್
ಕಳ್ಳತನದ
ಬಗ್ಗೆ
ಮೆಸ್ಕಾಂ
ಮೌನವೇಕೆ?]
'ಎಲ್ಲಾ
10
ಘಟಕಗಳ
ವಿದ್ಯುತ್
ವಿತರಣಾ
ಕೇಬಲ್
ಜಾಲ
ಸುಟ್ಟು
ಭಸ್ಮವಾಗಿದೆ.
ಕೇಬಲ್
ಜಾಲ
ಸರಿಪಡಿಸಲು
ಸುಮಾರು
1
ತಿಂಗಳು
ಬೇಕಾಗಬಹುದು.
ಅಲ್ಲಿಯ
ತನಕ
ನಿತ್ಯ
1,035
ಮೆಗಾವಾಟ್
ಉತ್ಪಾದನೆ
ಸ್ಥಗಿತಗೊಳ್ಳಲಿದೆ'
ಎಂದು
ಮುಖ್ಯ
ಎಂಜಿನಿಯರ್
ಕೆ.ಆರ್.ಶಿವಾಜಿ
ಹೇಳಿದ್ದಾರೆ.
[ಸೌರಶಕ್ತಿಯಿಂದ
ಮನೆ
ಬೆಳಗಿಸಿದ
ಮೈಸೂರಿನ
'ಭಕ್ತವತ್ಸಲ']
ನಿನ್ನೆ ಸಂಜೆ 4ಗಂಟೆ ಸುಮಾರಿಗೆ ಬೆಂಕಿ ಅವಗಡ ನಡೆದ ಶರಾವತಿ ವಿದ್ಯುದಾಗಾರ. ಘಟನೆಯಲ್ಲಿ ನಿಯಂತ್ರಣ ಕೊಠಡಿ ಸಂಪೂರ್ಣ ಭಸ್ಮವಾಗಿದೆ.
Posted by Karnataka Varthe on Friday, February 19, 2016
ಇಂದು ಸಚಿವರ ಭೇಟಿ : ಶರಾವತಿ ವಿದ್ಯುದಾಗಾರಕ್ಕೆ ಶುಕ್ರವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಲಿದ್ದಾರೆ. ಅಗ್ನಿ ಅವಘಡದಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ನಷ್ಟದ ಅಂದಾಜು ಶುಕ್ರವಾರ ಅಧಿಕೃತವಾಗಿ ತಿಳಿದುಬರಲಿದೆ. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]
24 ಪೈಸೆ ವೆಚ್ಚವಾಗುತ್ತದೆ : ರಾಜ್ಯದ ಬೇಡಿಕೆಯ ಶೇ 22.34 ರಷ್ಟು ವಿದ್ಯುತ್ ಈ ಕೇಂದ್ರದಿಂದ ಪೂರೈಕೆ ಯಾಗುತ್ತದೆ. ಇಲ್ಲಿ ಪ್ರತಿ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು 24.18 ಪೈಸೆ ವೆಚ್ಚವಾಗುತ್ತದೆ. [ರಾಜ್ಯದ ವಿದ್ಯುತ್ ಸಮಸ್ಯೆ ಏಕೆ, ನಿವಾರಣೆ ಹೇಗೆ?]
ಶರಾವತಿ ವಿದ್ಯುದಾಗಾರಕ್ಕೆ ಹಾನಿಯಾದರೂ ಶರಾವತಿ ಕಣಿವೆಯಲ್ಲಿರುವ ಲಿಂಗನಮಕ್ಕಿ, ಮಹಾತ್ಮ ಗಾಂಧಿ, ಗೇರುಸೊಪ್ಪ ವಿದ್ಯುದಾಗಾರಗಳು ಕಾರ್ಯನಿರ್ವಹಣೆ ಮಾಡುತ್ತಿವೆ.