ಶಿವಮೊಗ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬುಡುಬುಡಿಕೆಯವ ದೇವೇಗೌಡ್ರ ಬಗ್ಗೆ ಹೇಳಿದ ಶಾಸ್ತ್ರ ನಿಜವಾಯ್ತು!

By ಶಿವಮೊಗ್ಗ ಪ್ರತಿನಿಧಿ
|
Google Oneindia Kannada News

Recommended Video

ಎಚ್ ಡಿ ದೇವೇಗೌಡ್ರ ಬಗ್ಗೆ ಬುಡುಬುಡಿಕೆಯವ ಹೇಳಿದ ಶಾಸ್ತ್ರ ನಿಜವಾಯ್ತಂತೆ | Oneindia Kannada

ಶಿವಮೊಗ್ಗ, ಸೆಪ್ಟೆಂಬರ್ .14: "ಮಾಜಿ ಪ್ರಧಾನಿಗಳು 5-6 ನೇ ತರಗತಿಯಲ್ಲಿ ಓದುತ್ತಿದ್ದಾಗ ಕುರಿ ಕಾಯುತ್ತಿದ್ದರು. ಆಗ ಅಲ್ಲಿ ಬುಡಬುಡಿಕೆಯವನೊಬ್ಬ ಶಾಸ್ತ್ರ ಹೇಳಲು ಬರುತ್ತಾನೆ. ಆಗ ದೇವೇಗೌಡರ ಹಸ್ತ ರೇಖೆ ನೋಡಿ ನೀನು ಚಕ್ರವರ್ತಿ ಆಗುತ್ತೀಯ ಎಂದು ಹೇಳಿದ್ದ.

ಆಗ ಅವರ ಜೊತೆಗಿದ್ದ ದೇವೇಗೌಡರ ಚಿಕ್ಕಮ್ಮ ಗೊಣ್ಣೆ ಬುರುಕ ಇವನೆಂತ ಚಕ್ರವರ್ತಿ ಆದಾನು ಎಂದು ಗೇಲಿ ಮಾಡಿದ್ದರು. ಆದರೆ ಇಂದು ಗೌಡರು ನಮ್ಮ ಮುಂದೆ ಚಕ್ರಾಧಿಪತಿಯಾಗಿಯೇ ಕುಳಿತಿದ್ದಾರೆ" ಎಂದು ಆದಿಚುಂಚನಗಿರಿ ಪೀಠಾಧಿಪತಿ ಡಾ.ನಿರ್ಮಲಾನಂದ ಶ್ರೀಗಳು ಹೇಳಿದರು.

ನನ್ನ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಪಟ್ಟಿಯೇ ಬೇರೆ: ಎಚ್ಡಿಕೆ ಹೊಸ ಬಾಂಬ್ನನ್ನ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಪಟ್ಟಿಯೇ ಬೇರೆ: ಎಚ್ಡಿಕೆ ಹೊಸ ಬಾಂಬ್

ನಗರದಲ್ಲಿ ಇಂದು ಮಲೆನಾಡು ಕೋಆಪರೇಟಿವ್ ಸೊಸೈಟಿಯ ಬ್ಯಾಂಕ್‌ನ ರಜತ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಅವರು ದೇವೇಗೌಡರು ಒಬ್ಬ ಮಹಾನ್ ದೈವಭಕ್ತ. ಅವರ ವಿರುದ್ದ ಹೋಗುವುದು, ದೈವ ವಿರುದ್ಧ ನಿಲ್ಲುವುದು ಒಂದೇ.

Budubudike man said to Former Prime Minister Devegowda you would become Emperor

ಹಾಗಾಗಿ ಸರ್ಕಾರವನ್ನು ಉರುಳಿಸಲು ಹವಣಿಸುವವರು ದೈವ ಶಕ್ತಿಯ ವಿರುದ್ಧ ನಿಂತಂತೆ. ಸರ್ಕಾರ ಉರುಳಿಸುವ ಕೆಲಸದಲ್ಲಿ ತೊಡಗಿದರೆ ಮಾಜಿ ಪ್ರಧಾನಿ ದೇವೇಗೌಡರ ವಿರೋಧಿ ಕೆಲಸ ಮಾಡಿದಂತೆ. ದೇವೇಗೌಡರ ವಿರುದ್ಧ ಮಾಡುವ ಕೆಲಸ ದೈವದ ವಿರೋಧಿ ಕೆಲಸ ಮಾಡಿದಂತೆ ಎಂದು ಶ್ರೀಗಳು ಹೇಳಿದರು.

 ಸರ್ಕಾರ ಬೀಳಿಸಲು ಹೊರಟ ಕಿಂಗ್‌ಪಿನ್ ಯಾರೆಂದು ಗೊತ್ತಿದೆ: ಕುಮಾರಸ್ವಾಮಿ ಸರ್ಕಾರ ಬೀಳಿಸಲು ಹೊರಟ ಕಿಂಗ್‌ಪಿನ್ ಯಾರೆಂದು ಗೊತ್ತಿದೆ: ಕುಮಾರಸ್ವಾಮಿ

ಮೀಟರ್ ಬಡ್ಡಿಯಿಂದ ಎಷ್ಟೋ ಸಂಸಾರಗಳು ನಾಶ ಹೊಂದಿವೆ. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ಮೊಬೈಲ್ ಬ್ಯಾಂಕ್ ಸ್ಥಾಪಿಸುತ್ತಿರುವುದು ಶ್ಲಾಘನೀಯ ಎಂದರು.

English summary
Budubudike man said to Former Prime Minister Devegowda you would become Emperor. That speech is true today, said Nirmalananda Swamiji, Adichunchanagiri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X