ಪಾಸಿಟಿವ್ ವರದಿ ಬಂದ ಗಂಟೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ರಂಚಿ, ಜೂನ್ 10: ಮುಂಬೈನಿಂದ ಹಿಂದಿರುಗಿದ ವಲಸೆ ಕಾರ್ಮಿಕ ಜರ್ಖಾಂಡ್ನ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಕೊರೊನಾ ವೈರಸ್ ಭೀತಿಯೇ ಕಾರಣ ಎಂದು ತಿಳಿದುಬಂದಿದೆ.
ಮುಂಬೈನಿಂದ ಬಂದ ಕಾರಣ ವಲಸೆ ಕಾರ್ಮಿಕನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಎಂದು ತಿಳಿದು ಬಂದಿತ್ತು. ಆದರೆ, ವರದಿ ಬಂದ ಕೆಲವೇ ಗಂಟೆಗಳಲ್ಲಿ ಆ ವಲಸೆ ಕಾರ್ಮಿಕ ತನ್ನ ಪ್ರಾಣ ಕಳೆದುಕೊಂಡಿದ್ದಾನೆ.
ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ವಲಯಗಳ ಸಂಖ್ಯೆ 64ಕ್ಕೆ ಏರಿಕೆ
ಮೇ 27 ರಂದು ವಲಸೆ ಕಾರ್ಮಿಕನ ಪರೀಕ್ಷೆ ನಡೆಸಿದ್ದು, ಅದನ್ನು ರಂಚಿಗೆ ಕಳುಹಿಸಿಕೊಡಲಾಗಿತ್ತು. ಅದರ ವರದಿ ಪಾಸಿಟಿವ್ ಬಂದಿತ್ತು. ಇದನ್ನು ತಿಳಿದ ವ್ಯಕ್ತಿ ತನ್ನ ಕೋಟ್ ಮತ್ತು ಬೆಡ್ಶೀಟ್ನಿಂದ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾನೆ.
ಈ ವಲಸೆ ಕಾರ್ಮಿಕನಿಗೆ ಸುಮಾರು 35 ವರ್ಷ ವಯಸ್ಸಾಗಿತ್ತು. ಮುಂಬೈ ನಿಂದ ಈತ ತೀವ್ರ ಜ್ವರದಿಂದ ಬಳಲುತ್ತಿದ್ದ ಕಾರಣ ಕೊರೊನಾ ನಡೆಸಲಾಗಿತ್ತು. ಕೊರೊನಾ ಪಾಸಿಟಿವ್ ವರದಿ ಬಂದ ಮೇಲೆ ಈ ವ್ಯಕ್ತಿ ಖಿನ್ನತೆಗೆ ಒಳಗಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈವರೆಗೆ, ಜರ್ಖಾಂಡ್ನಲ್ಲಿ 1066 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 2,77,000ಕ್ಕೆ ಏರಿಕೆಯಾಗಿದೆ.