ಜಾರ್ಖಂಡ್ ಸಿಎಂ ಆದ ಹೇಮಂತ್ ಸೊರೆನ್, ಬಿಜೆಪಿಯಿಂದ ರಾಜ್ಯ ಕಸಿದ ತೃಪ್ತಿ ಕಾಂಗ್ರೆಸ್ಗೆ
ರಾಂಚಿ, ಡಿಸೆಂಬರ್ 29: ಜಾರ್ಖಂಡ್ ಮುಖ್ಯಮಂತ್ರಿಯಾಗಿ ಜೆಎಂಎಂ ಪಕ್ಷದ ನಾಯಕ ಹೇಮಂತ್ ಸೊರೆನ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಪಕ್ಷ ಮೈತ್ರಿಯು ಇತ್ತೀಚಿಗೆ ನಡೆದ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದು, ಸರ್ಕಾರ ರಚಿಸಿದೆ.
ರಾಜ್ಯದ 81 ಕ್ಷೇತ್ರಗಳಿಗೆ ಒಟ್ಟು5 ಹಂತಗಳಲ್ಲಿ ಮತದಾನ ನಡೆದಿತ್ತು. ಚುನಾವಣೆಯಲ್ಲಿ ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಪಕ್ಷವು 47 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಬಿಜೆಪಿ 29 ಸ್ಥಾನಗಳಿಗೆ ಕುಸಿದಿದೆ. ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 41.
ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಶಿಬು ಸೊರೆನ್ ಅವರ ಪುತ್ರ ಹೇಮಂತ್ ಸೂರೆನ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದು, ಆರ್ಜೆಡಿ-ಕಾಂಗ್ರೆಸ್-ಜೆಎಂಎಂ ನ ಒಮ್ಮತದ ಆಯ್ಕೆ ಅವರಾಗಿದ್ದಾರೆ. ಹೇಮಂತ್ ಎರಡನೇ ಬಾರಿಗೆ ಜಾರ್ಖಂಡ್ ನ ಸಿಎಂ ಆಗಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವು ರಾಂಚಿಯ ಮೊರಾಬದಿ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಲಿದೆ.