ಹೇಮಂತ್ ಸೊರೇನ್ ನಮ್ಮ ಸಿಎಂ: ತೇಜಸ್ವಿ ಯಾದವ್
ರಾಂಚಿ, ಡಿಸೆಂಬರ್ 23: ಜಾರ್ಖಂಡ್ ವಿಧಾನಸಭೆ ಚುನಾವಣೆ ಮತ ಎಣಿಕೆ ಇನ್ನೂ ಪ್ರಗತಿಯಲ್ಲಿರುವಾಗಲೇ ಕಾಂಗ್ರೆಸ್ ಮೈತ್ರಿಯು ಮುಖ್ಯಮಂತ್ರಿಯನ್ನು ಘೋಷಿಸಿಯಾಗಿದೆ.
ಕಾಂಗ್ರೆಸ್ ಮೈತ್ರಿಯ ಭಾಗವಾಗಿರುವ ಆರ್ಜೆಡಿ ಪಕ್ಷದ ತೇಜಸ್ವಿ ಯಾದವ್ ಅವರು 'ನಮ್ಮ ಮುಖ್ಯಮಂತ್ರಿ ಹೇಮಂತ್ ಸೊರೇನ್' ಎಂದು ಹೇಳಿದ್ದಾರೆ.
ಬುಡಕಟ್ಟು ಸಮುದಾಯದ ಆಶಾಕಿರಣ ಹೇಮಂತ್ ಸೊರೆನ್ ವ್ಯಕ್ತಿಚಿತ್ರ
ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಎಂಎಂ-ಆರ್ಜೆಡಿ ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದವು. ಫಲಿತಾಂಶದ ಟ್ರೆಂಡ್ ಕಾಂಗ್ರೆಸ್ ಮೈತ್ರಿಗೆ ಸ್ಪಷ್ಟ ಬಹುಮತ ಸಿಗುತ್ತಿರುವುದಾಗಿ ಸೂಚಿಸುತ್ತಿದೆ.
ಜೆಎಂಎಂ-ಕಾಂಗ್ರೆಸ್-ಆರ್ಜೆಡಿ ಪಕ್ಷಗಳು ಅಧಿಕಾರ ಹಿಡಿಯುವುದು ಬಹುತೇಕ ಖಾತ್ರಿ ಎಂಬಂತಾಗಿದ್ದು, ಮೈತ್ರಿಯ ಸಿಎಂ ಅಭ್ಯರ್ಥಿ ಹೇಮಂತ್ ಸೊರೇನ್ ಆಗಿದ್ದಾರೆ.
ಹೇಮಂತ್ ಸೊರೇನ್ ನೇತೃತ್ವದ ಜೆಎಂಎಂ ಪಕ್ಷವು 24 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡು ಮೈತ್ರಿ ಯಲ್ಲಿ ಅತಿ ದೊಡ್ಡ ಪಕ್ಷವಾಗಿದೆ. ಹಾಗಾಗಿ ಹೇಮಂತ್ ಸೊರೇನ್ ಅವರನ್ನೇ ಸಿಎಂ ಆಗಿಸಲು ಮೈತ್ರಿ ನಿರ್ಧರಿಸಲಿದೆ. ಹೇಮಂತ್ ಸೊರೇನ್ ಈ ಹಿಂದೆಯೂ ಜಾರ್ಖಂಡ್ ನ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.