ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೀಮ್ ಚುಲ್ಹಾ; ಇಲ್ಲಿ 10 ಸಾವಿರ ಆನೆಗಳಿಗಾಗುವಷ್ಟು ಆಹಾರ ಬೇಯಿಸಿದ್ದನೇ ಭೀಮ?

|
Google Oneindia Kannada News

ಮೊಹಮ್ಮದ್‌ಗಂಜ್ ಜೂನ್ 3: ಐತಿಹಾಸಿಕ ಸ್ಥಳ, ಸ್ಮಾರಕಗಳು, ದೇವಾಲಯಗಳು ಮತ್ತು ಧಾರ್ಮಿಕ ಸ್ಥಳಗಳನ್ನು ಒಳಗೊಂಡಂತೆ ಹಲವಾರು ಪ್ರವಾಸಿ ಆಕರ್ಷಣೆಗಳಿಗೆ ಭಾರತ ಹೆಸರುವಾಸಿಯಾಗಿದೆ. ಇವುಗಳಲ್ಲಿ ಐತಿಹಾಸಿಕ ಭೀಮ್ ಚುಲ್ಹಾ ಸ್ಥಳ ಕೂಡ ಒಂದು. ಜಾರ್ಖಂಡ್‌ನ ಮೊಹಮ್ಮದ್‌ಗಂಜ್ ಪಂಚಾಯತ್‌ನ ದಕ್ಷಿಣ ಗಡಿಯಲ್ಲಿ ಇದು ನೆಲೆಗೊಂಡಿದೆ. ಈ ಸ್ಥಳದ ಸೌಂದರ್ಯಕ್ಕೆ ಮಾರು ಹೋಗದವರಿಲ್ಲ.

ಇದನ್ನು ಕೋಯೆಲ್ ನದಿಯ ದಡದಲ್ಲಿ ನಿರ್ಮಿಸಲಾಗಿದ್ದು ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಭೀಮ್ ಚುಲ್ಹಾನಲ್ಲಿ ನಿರ್ಮಾಣಗೊಂಡ ಉದ್ಯಾನವನ ಮಳೆಗಾಲದಲ್ಲಿ ಕಂಗೊಳಿಸುತ್ತದೆ. ಮಾತ್ರವಲ್ಲದೆ ಈ ಸ್ಥಳದಲ್ಲಿ ಭೀಮನು 10 ಸಾವಿರ ಆನೆಗಳು ಸೇವಿಸುವಷ್ಟು ಶಕ್ತಿಯುತವಾದ ಆಹಾರವನ್ನು ಬೇಯಿಸುತ್ತಿದ್ದನಂತೆ. ಈ ಸ್ಥಳದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.

ಮಧ್ಯಪ್ರದೇಶ ಇಂಜಿನಿಯರಿಂಗ್‌ ಕೋರ್ಸ್‌ನಲ್ಲಿ ರಾಮಸೇತು ಪಠ್ಯ!ಮಧ್ಯಪ್ರದೇಶ ಇಂಜಿನಿಯರಿಂಗ್‌ ಕೋರ್ಸ್‌ನಲ್ಲಿ ರಾಮಸೇತು ಪಠ್ಯ!

10 ಸಾವಿರ ಆನೆಗಳು ಸೇವಿಸುವಷ್ಟು ಆಹಾರ ತಯಾರಿಸಿದ್ದ ಭೀಮ

10 ಸಾವಿರ ಆನೆಗಳು ಸೇವಿಸುವಷ್ಟು ಆಹಾರ ತಯಾರಿಸಿದ್ದ ಭೀಮ

ಈ ಸ್ಥಳ ಮಹಾಭಾರತ ಕಾಲಕ್ಕೆ ಸಂಬಂಧಿಸಿದೆ. ಈ ಕುರಿತು ಸರ್ಕಾರದ ವೆಬ್‌ಸೈಟ್ https://palamu.nic.in/ ನಲ್ಲಿ ಮಾಹಿತಿ ನೀಡಲಾಗಿದೆ. ಜಾರ್ಖಂಡ್ ಪ್ರಾಂತ್ಯದ ಕಾಡುಗಳು ಮತ್ತು ಪರ್ವತಗಳಿಂದ ಆವೃತವಾಗಿರುವ ಪಲಾಮು ಪ್ರದೇಶವು ನೈಸರ್ಗಿಕ ಸೌಂದರ್ಯ ಮತ್ತು ಐತಿಹಾಸಿಕ-ಪೌರಾಣಿಕ ಸ್ಥಳಗಳಿಂದ ತುಂಬಿದೆ. ಇಲ್ಲಿಯೇ ಭೀಮಚುಲ್ಹಾ ಎಂಬ ಪ್ರವಾಸಿ ಸ್ಥಳವಿದೆ. ಅದು ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದು. ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಸ್ಥಳಕ್ಕೆ ಬಂದಿದ್ದರು ಎಂದು ನಂಬಲಾಗುತ್ತದೆ. ಭೀಮ ಅವರಿಗಾಗಿ ಇಲ್ಲಿಯೇ ಅಡುಗೆ ಮಾಡಿದ್ದನಂತೆ. ಕೋಯೆಲ್ ನದಿಯ ದಡದಲ್ಲಿರುವ ಬಂಡೆಗಳಿಂದ ಮಾಡಿದ ಈ ಚುಲ್ಹಾ ಈ ಪ್ರದೇಶದಲ್ಲಿ ಪಾಂಡವರು ತಂಗಿದ್ದಕ್ಕೆ ಮೂಕ ಸಾಕ್ಷಿ ಎಂದು ಪರಿಗಣಿಸಲಾಗಿದೆ. ಇಂದಿನ ಮೊಹಮ್ಮದ್‌ಗಂಜ್ ಬ್ಯಾರೇಜ್ ಬಳಿ ಆಹಾರ ಬೇಯಿಸಿದ ಒಲೆಯನ್ನು ಕಾಣಬಹುದು.

ಬೆಂಕಿಯಲ್ಲೂ ತಂಪು ಕಂಡೆನಾ? ಅಥವಾ ತಪ್ಪು ಕಂಡೆನಾ?ಬೆಂಕಿಯಲ್ಲೂ ತಂಪು ಕಂಡೆನಾ? ಅಥವಾ ತಪ್ಪು ಕಂಡೆನಾ?

ವಿಷಪೂರಿತ ಹಾವು ಭೀಮನಿಗೆ ಕಚ್ಚಲಾಗದು

ವಿಷಪೂರಿತ ಹಾವು ಭೀಮನಿಗೆ ಕಚ್ಚಲಾಗದು

ಮಹಾಭಾರತದ ಅವಧಿಯು ಸನಾತನ ಧರ್ಮದ ಪಠ್ಯಗಳಲ್ಲಿ ಉಲ್ಲೇಖಿಸಲಾದ ದ್ವಾಪರ ಯುಗಕ್ಕೆ ಸಂಬಂಧಿಸಿದೆ. ಆ ಅವಧಿಯಲ್ಲಿ ಅನೇಕ ಬಲಶಾಲಿಯಾದ ಯೋಧರಿದ್ದರು. ಅವರು ಅಪಾರ ದೈಹಿಕ ಶಕ್ತಿಯನ್ನು ಹೊಂದಿದ್ದರು. ಆ ವೀರರಲ್ಲಿ ಕುಂತಿಯ ಮಗ ಭೀಮನೂ ಒಬ್ಬ. ಆತನಿಗೆ ಐವರು ಸಹೋದರರಿದ್ದರು. ಪಾಂಡು ರಾಜನ ಮಕ್ಕಳಾದ ಕಾರಣ ಅವರನ್ನು ಪಾಂಡವರು ಎಂದು ಕರೆಯಲಾಗುತ್ತಿತ್ತು. ಭೀಮನು ವಾಯುದೇವನಿಂದ ಜನಿಸಿದನು. ಆದ್ದರಿಂದ ಅವನನ್ನು ಹನುಮಂಜಿಯ ಸಹೋದರ ಎಂದು ಪರಿಗಣಿಸಲಾಯಿತು. ಭೀಮನಿಗೆ 10 ಸಾವಿರ ಆನೆಗಳ ಬಲವಿತ್ತು. ಅವನ ದೇಹದ ಚರ್ಮವು ಎಷ್ಟು ಗಟ್ಟಿಯಾಗಿತ್ತು ಎಂದರೆ ವಿಷಪೂರಿತ ಹಾವು ಸಹ ಅವನನ್ನು ಕಚ್ಚುವುದಿಲ್ಲ.

ನೋಡಲು ಯೋಗ್ಯವಾದ ದೃಶ್ಯ

ನೋಡಲು ಯೋಗ್ಯವಾದ ದೃಶ್ಯ

ಈ ಸಂದರ್ಭದಲ್ಲಿ ಭೀಮನು ನಾಗಲೋಕವನ್ನು ತಲುಪಿದ್ದ ಎಂಬ ಗ್ರಂಥದಲ್ಲಿ ಹೇಳಲಾಗುತ್ತದೆ. ಅಲ್ಲಿ ನಾಗರಾಜ ವಾಸುಕಿ ಅವರಿಗೆ ದೈವಿಕ ರಸದ ನೀರನ್ನು ಕುಡಿಸಿದರು. ಅದರ ನಂತರ ಭೀಮನ ಬಲವು ಬಹಳ ಹೆಚ್ಚಾಯಿತು. ಅದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಈಗ ಈ ಯುಗದಲ್ಲಿ ಭೀಮನ ಹೆಸರಿನಲ್ಲಿ ಹಲವಾರು ಸ್ಥಳಗಳು ಮತ್ತು ಐತಿಹಾಸಿಕ ಪುರಾವೆಗಳು ಕಂಡುಬರುತ್ತವೆ. ಜಾರ್ಖಂಡ್‌ನ ಭೀಮ್ ಚುಲ್ಹಾ ಅಂತಹ ಸ್ಥಳಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ.


ಜಾರ್ಖಂಡ್ ಸರ್ಕಾರದ ಪೋರ್ಟಲ್ ಪ್ರಕಾರ, ಭೀಮ್ ಚುಲ್ಹಾವನ್ನು ಹೆಚ್ಚು ಆಕರ್ಷಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವುದನ್ನು ಆನಂದಿಸುತ್ತಾರೆ. ಇಲ್ಲಿ ಬೆಟ್ಟದ ಬಳಿ ಕಲ್ಲಿನ ಮೇಲಿನ ಆನೆಯ ಆಕಾರವೂ ಗೋಚರಿಸುತ್ತದೆ. ಇದನ್ನು ಜನರು ತಮ್ಮ ಗೌರವಕ್ಕೆ ಅನುಗುಣವಾಗಿ ಪೂಜಿಸುತ್ತಾರೆ.

ರಾಂಚಿಯಲ್ಲಿ ವಿಮಾನ ನಿಲ್ದಾಣ

ರಾಂಚಿಯಲ್ಲಿ ವಿಮಾನ ನಿಲ್ದಾಣ

ಬರ್ವಾಡಿಯಿಂದ ಡೆಹ್ರಿಗೆ ಭಾರತೀಯ ರೈಲ್ವೆ ಮಾರ್ಗವು ಭೀಮ್ ಚುಲ್ಹಾ ಸ್ಥಳದಿಂದ ಹಾದುಹೋಗುತ್ತದೆ. ರಸ್ತೆ ಮತ್ತು ರೈಲಿನ ಮೂಲಕ ದಾಲ್ತೋಂಗಂಜ್ ಮೂಲಕವೂ ಹೋಗಬಹುದು. ಮೊಹಮ್ಮದ್‌ಗಂಜ್ ರೈಲು ನಿಲ್ದಾಣವು ಹತ್ತಿರದಲ್ಲಿದೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ರಾಂಚಿ ವಿಮಾನ ನಿಲ್ದಾಣ, ಭೀಮ್ ಚುಲ್ಹಾ ರಾಂಚಿಯಿಂದ 258 ಕಿ.ಮೀ ದೂರದಲ್ಲಿದೆ.

Recommended Video

ಆನೆಯೊಂದು ತಲೆಕೆಳಗಾಗಿ ನಿಂತಿದ್ದು ಹೀಗೆ | OneIndia Kannada

English summary
Bheema had cooked food for 10 thousand elephants in Bhim Chulha, the historic site of Jharkhand. Learn more about this.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X