ಜಾರ್ಖಂಡ್ ಎನ್ಕೌಂಟರ್: 3 ನಕ್ಸಲರ ಹತ್ಯೆ,ಓರ್ವ ಯೋಧ ಹುತಾತ್ಮ
ರಾಂಚಿ, ಏ.15: ಜಾರ್ಖಂಡ್ನ ಬೆಲ್ಭಾ ಘಾಟ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ 3 ನಕ್ಸಲರು ಹತರಾಗಿದ್ದು, ಓರ್ವ ಯೋಧ ಹುತಾತ್ಮರಾಗಿದ್ದಾರೆ.
ಇಂದು ಬೆಳಗ್ಗೆ ಗಿರಿಧಿ ಜಿಲ್ಲೆಯ ಬೆಲ್ಭಾಘಾಟ್ ಪ್ರದೇಶದಲ್ಲಿ ಸಿಆರ್ಪಿಎಫ್ ಯೋಧರು ಮತ್ತು ನಕ್ಸಲರ್ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಶ್ಮೀರದಲ್ಲಿ ಎನ್ಕೌಂಟರ್, ಇಬ್ಬರು ಉಗ್ರರನ್ನು ಹತ್ಯೆಗೈದ ಭಾರತೀಯ ಸೇನೆ
ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್ಪಿಎಫ್)ನ 7ನೆ ಬೆಟಾಲಿಯನ್ ಈ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಎನ್ಕೌಂಟರ್ ನಡೆಯಿತು. ಈ ಸ್ಥಳವು ಜಾರ್ಖಂಡ್ ರಾಜಧಾನಿ ರಾಂಚಿಯಿಂದ 185 ಕಿಮೀ ದೂರದಲ್ಲಿದೆ.
ಬಂಧಿತ ಶಂಕಿತ ಉಗ್ರ ಫರ್ವೇಜ್ ಬಿಚ್ಚಿಟ್ಟ ಸ್ಫೋಟಕ ಮಾಹಿತಿ
ಹತ ನಕ್ಸಲರಿಂದ ಎಕೆ-47 ರೈಫಲ್ಗಳು ಮೂವರು ಬುಲೆಟ್ ಮ್ಯಾಗಝೀನ್ಗಳು ಮತ್ತು ನಾಲ್ಕು ಪೈಪ್ ಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡಿನ ಚಕಮಕಿ ವೇಳೆ ಗಾಯಗೊಂಡ ಕೆಲವು ನಕ್ಸಲರು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಆ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರಿದಿದೆ.