ರಾಮನಗರ: ಕುಡಿಯುವ ನೀರಿನ ಟ್ಯಾಂಕ್ನಲ್ಲಿ ಮಹಿಳೆಯ ಅಂಗಾಗ ಪತ್ತೆ; ಆತಂಕದಲ್ಲಿ ಬಡಾವಣೆ ಜನರು
ರಾಮನಗರ, ಅಕ್ಟೋಬರ್ 9: ಕುಡಿಯುವ ನೀರಿನ ಬೃಹತ್ ಟ್ಯಾಂಕಿನಲ್ಲಿ ಮಹಿಳೆಯ ಅಂಗಾಂಗ ಪತ್ತೆಯಾಗಿದ್ದು, ಇದೇ ಟ್ಯಾಂಕಿನ ನೀರನ್ನು ಬಳಸಿದ್ದ ಹಲವು ಬಡಾವಣೆಯ ಜನರು ಆತಂಕಕ್ಕೆ ಒಳಗಾಗಿರುವ ಘಟನೆ ಬೊಂಬೆನಾಡು ಖ್ಯಾತಿ ಚನ್ನಪಟ್ಟಣದಲ್ಲಿ ನಡೆದಿದೆ.
ಚನ್ನಪಟ್ಟಣದ ಹೊಸ ಕೋರ್ಟ್ ಹಿಂಭಾದಲ್ಲಿರುವ ಮಾರುತಿ ನಗರದ ಓವರ್ ಹೆಡ್ ಟ್ಯಾಂಕ್ನ ಕೆಳಭಾಗದಲ್ಲಿ ಇರುವು ಓವರ್ ಹೆಡ್ ಟ್ಯಾಂಕ್ನ ವಾಲ್ನಲ್ಲಿ ಮಹಿಳೆ ಮೃತ ದೇಹ ಪತ್ತೆಯಾಗಿದ್ದು, ವಾರದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಬೆಳಗ್ಗೆ ವಾಲ್ನಲ್ಲಿ ಮೃತ ಮಹಿಳೆಯ ಕಾಲು ನೋಡಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ, ವಾಟರ್ ಹೆಡ್ ಟ್ಯಾಂಕ್ ಮೇಲ್ಭಾಗದಲ್ಲಿ ಮಹಿಳೆಯ ಬಟ್ಟೆ, ಚಪ್ಪಲಿ, ಛತ್ರಿ ಪತ್ತೆಯಾಗಿದೆ.
ಈ ಸಂಬಂಧ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಈ ರೀತಿ ಘಟನೆ ನಡೆದಿದೆ. ಇದಕ್ಕೆ ನೇರ ಹೊಣೆ ಅಧಿಕಾರಿಗಳೇ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳ
ನಿರ್ಲಕ್ಷ್ಯ
ಖಂಡಿಸಿ
ಪ್ರತಿಭಟನೆ
ಮಹಿಳೆಯ
ಮೃತ
ದೇಹ
ಸಿಕ್ಕ
ಹೊಸ
ಕೋರ್ಟ್
ಹಿಂಭಾಗವಿರುವ
ಓವರ್
ಹೆಡ್
ಟ್ಯಾಂಕ್ನಿಂದ
ನಗರಸಭೆ
ವ್ಯಾಪ್ತಿಯ
ವಾರ್ಡ್
ನಂ.
9,
10,
11ಕ್ಕೆ
ಕಲುಷಿತ
ನೀರು
ಪೂರೈಕೆಯಾಗಿದೆ.
ನೀರೆಲ್ಲವೂ
ಸಹ
ಸಂಪೂರ್ಣ
ಕೆಟ್ಟ
ವಾಸನೆಯಿಂದ
ಕೂಡಿರುತ್ತದೆ.
ಕಳೆದ
7-
8
ದಿನಗಳಿಂದ
ಈ
ಮೂರು
ವಾರ್ಡ್ನ
ಜನರಿಗೆ
ಇದೇ
ನೀರನ್ನು
ಪೂರೈಕೆ
ಮಾಡಲಾಗಿದೆ
ಎಂದು
ಸ್ಥಳೀಯ
ನಿವಾಸಿಗಳು
ಆತಂಕ
ವ್ಯಕ್ತಪಡಿಸಿದ್ದಾರೆ.
ಇನ್ನು ಪ್ರಮಾದಕ್ಕೆ ಕರ್ನಾಟಕ ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ, ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಘಟನೆಗೆ
ಜನರ
ಕ್ಷಮೆ
ಕೇಳಿದ
ಮಾಜಿ
ಸಿಎಂ
ಎಚ್ಡಿಕೆ
ಚನ್ನಪಟ್ಟಣದ
ಹೊಸ
ಕೋರ್ಟ್
ಹಿಂಭಾಗದಲ್ಲಿರುವ
ಓವರ್
ಹೆಡ್
ಟ್ಯಾಂಕ್ನಲ್ಲಿ
ಮಹಿಳೆಯ
ಶವ
ಪತ್ತೆಯಾಗಿರುವ
ಘಟನೆ
ನಡೆಯಬಾರದಿತ್ತು.
ಇದು
ದುರದೃಷ್ಟಕರ.
ಚನ್ನಪಟ್ಟಣದಲ್ಲಿ
ಎಂದೂ
ಈ
ರೀತಿಯ
ಘಟನೆ
ನಡೆದಿರಲಿಲ್ಲ,
ಕ್ಷೇತ್ರದ
ಜನರಿಗೆ
ನಾನು
ಕ್ಷಮೆ
ಕೇಳುತ್ತೇನೆ
ಎಂದು
ಮಾಜಿ
ಮುಖ್ಯಮಂತ್ರಿ
ಎಚ್.ಡಿ.
ಕುಮಾರಸ್ವಾಮಿ
ಘಟನೆಗೆ
ವಿಷಾದ
ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿದ ಕ್ಷೇತ್ರದ ಶಾಸಕರೂ ಆದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಕೂಡಲೇ ಟ್ಯಾಂಕರ್ಗಳ ಮೂಲಕ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವಂತೆ ಸೂಚಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, "ಈಗಾಗಲೇ ನಾನು ಪೊಲೀಸ್ ಅಧಿಕಾರಿಗಳ ಜತೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಅದೇ ರೀತಿ ನಗರಸಭೆ ಅಧಿಕಾರಿಗಳ ಜತೆಗೂ ಮಾತನಾಡಿ, ಜನರ ಕುಡಿಯುವ ಮತ್ತು ದಿನಬಳಕೆ ನೀರಿನ ಪರ್ಯಾಯ ವ್ಯವಸ್ಥೆ ಮಾಡುವಂತೆ ಹೇಳಿದ್ದೇನೆ," ಎಂದರು.
ಓವರ್ ಹೆಡ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸಿ, ಆ ನಂತರ ಅದರ ಸ್ವಚ್ಛತೆ ಖಾತರಿಪಡಿಸಿಕೊಂಡ ನಂತರ ಅಧಿಕಾರಿಗಳು ಅಧಿಕೃತವಾಗಿ ಹೇಳುವ ತನಕ ಯಾರೂ ಆ ಟ್ಯಾಂಕ್ನ ನೀರನ್ನು ಬಳಸಬಾರದು ಎಂದು ಜನರಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.