ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್‌ಡೌನ್ ನಡುವೆ ಸಾತನೂರು ಪೊಲೀಸರ ಸಮ್ಮುಖದಲ್ಲಿ ನಡೆಯಿತು ಮದುವೆ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 23: ಪೊಲೀಸರೇ ಮುಂದಾಳತ್ವ ವಹಿಸಿ ವಿಧವೆಯೊಬ್ಬರಿಗೆ ಇಂದು ಮರುಮದುವೆ ಮಾಡಿಸಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಸಾತನೂರು ಪೊಲೀಸ್ ಠಾಣೆಯಲ್ಲಿ ನಡೆದಿದೆ.

Recommended Video

ಕೊರೊನಾದಿಂದ ಸರಳ ವಿವಾಹವಾಗಲು ಮುಂದಾದ ನಿಖಿಲ್ | Oneindia Kannada

ಅಂತರ ಜಾತಿ ಕಾರಣದಿಂದ ಮೂರು ವರ್ಷಗಳ ಹಿಂದೆ ಬೇರೆಯಾಗಿದ್ದ ಪವನ್ ಮತ್ತು ಶ್ರುತಿ ಇಂದು ಮದುವೆಯಾಗಿದ್ದಾರೆ. ಸಾತನೂರು ಪೊಲೀಸರ ಮಧ್ಯಸ್ಥಿಕೆಯಲ್ಲಿ ಹಾರ ಬದಲಿಸಿಕೊಳ್ಳುವ ಮೂಲಕ ಮದುವೆ ನಡೆದಿದೆ.

ಕೊರೊನಾ ಎಫೆಕ್ಟ್: ಮಾಸ್ಕ್ ತೊಟ್ಟು ಮದುವೆಯಾದ ನವದಂಪತಿಕೊರೊನಾ ಎಫೆಕ್ಟ್: ಮಾಸ್ಕ್ ತೊಟ್ಟು ಮದುವೆಯಾದ ನವದಂಪತಿ

ಮೂರು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದ ತಾವರಗಟ್ಟೆ ಗ್ರಾಮದ ಪವನ್ ಮತ್ತು ಮೂಲೆಮನೆ ಗ್ರಾಮದ ಶ್ರುತಿ ಬೇರೆ ಬೇರೆ ಜಾತಿ ಎಂಬ ಕಾರಣಕ್ಕೆ ಪೋಷಕರ ವಿರೋಧದಿಂದ ಬೇರ್ಪಟ್ಟಿದ್ದರು. ಶ್ರುತಿಗೆ ಬೇರೆ ಯುವಕನೊಂದಿಗೆ ವಿವಾಹವಾಗಿತ್ತು. ಇತ್ತೀಚಿಗೆ ಶ್ರುತಿ ಪತಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಈಕೆ ಕೈ ಹಿಡಿಯಲು ಪವನ್ ಮುಂದಾಗಿದ್ದರು.

Widow Remarriage Happened At Satanuru Police Station Today

ಪವನ್ ಶ್ರುತಿಯನ್ನು ಮದುವೆಯಾಗುವ ವಿಚಾರಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪವನ್ ನ್ಯಾಯ ಕೇಳಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ. ವಿಚಾರಣೆ ನಡೆಸಿದ ಪೊಲೀಸರು ಠಾಣೆಯಲ್ಲೇ ಪ್ರೇಮಿಗಳಿಗೆ ಮದುವೆ ಮಾಡಿಸಿದ್ದಾರೆ. ಲಾಕ್ ಡೌನ್ ನಡುವೆ ಇಬ್ಬರೂ ಸಾತನೂರು ಪಿಎಸ್ಐ ಮುರಳಿ ಸಮ್ಮುಖದಲ್ಲಿ‌ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಠಾಣೆಯಲ್ಲೇ ಮದುವೆಯಾದ ನವ ಜೋಡಿಗಳಿಗೆ ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಶುಭಾಶಯ ಕೋರಿದ್ದಾರೆ.

English summary
Boy married a widow at police station today. The incident took place at Satanur police station in Kanakapur taluk of Ramanagar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X