ರಾಮನಗರ: ಮ್ಯಾನ್ಹೋಲ್ ಕ್ಲೀನಿಂಗ್ ವೇಳೆ 3 ಕಾರ್ಮಿಕರು ಸಾವು
ರಾಮನಗರ, ಜೂನ್ 4: ರಾಮನಗರ ಟೌನ್ ವ್ಯಾಪ್ತಿಯ ನೇತಾಜಿ ಪಬ್ಲಿಕ್ ಸ್ಕೂಲ್ ಪಕ್ಕದಲ್ಲಿ ಮ್ಯಾನ್ಹೋಲ್ ಕ್ಲೀನ್ ಮಾಡಲು ಇಳಿದಿದ್ದ 3 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಶವ ಹೊರಕ್ಕೆ ತೆಗೆಯಲಾಯಿತು.
ನಗರ ವ್ಯಾಪ್ತಿಯಲ್ಲಿ ಬರುವ ನೇತಾಜಿ ಪಬ್ಲಿಕ್ ಸ್ಕೂಲ್ ಪಕ್ಕದಲ್ಲಿ ಘಟನೆ ನಡೆದಿದ್ದು, ಮ್ಯಾನ್ಹೋಲ್ಗೆ ಇಳಿದಾಗ 3 ಕಾರ್ಮಿಕರು ಮೃತಪಟ್ಟಿದ್ದಾರೆ. ಮ್ಯಾನ್ಹೋಲ್ಗೆ ಕಾರ್ಮಿಕರನ್ನು ಇಳಿಸಬಾರದು ಎಂದು ಇಂಥಾ ದುರ್ಘಟನೆಗಳು ನಡೆದಾಗ ಪ್ರತಿಭಟಿಸಿದರೂ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಲೇ ಇರುತ್ತವೆ.
ಗುತ್ತಿಗೆದಾರ ಹರೀಶ್ ಎಂಬುವವರಿಗೆ ಮ್ಯಾನ್ಹೋಲ್ ಕಾಮಗಾರಿಯನ್ನು ವಹಿಸಲಾಗಿತ್ತು. ರಾಮನಗರದ ಎಪಿಎಂಸಿ ಹಿಂಭಾಗದಲ್ಲಿ ಈ ದುರ್ಘಟನೆ ನಡೆದಿದ್ದು, ನಗರಸಭೆಗೆ ಮಾಹಿತಿಯೇ ಕೊಡದೇ ಕಾರ್ಮಿಕರು ಇಳಿದಿದ್ದರು ಎನ್ನಲಾಗಿದೆ. ಆಯತಪ್ಪಿ ಬಿದ್ದ ಒಬ್ಬನನ್ನು ರಕ್ಷಿಸಲು ಮುಂದಾದ ಇಬ್ಬರು ಕಾರ್ಮಿಕರೂ ಸೇರಿ, ಮೂರು ಜನರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಮಾಜಿ
ಸಿಎಂ
ಎಚ್ಡಿಕೆ
ತೀವ್ರ
ಸಂತಾಪ
ಯುಜಿಡಿ
ಕೆಲಸ
ಮಾಡುತ್ತಿದ್ದ
ಹೊರ
ಗುತ್ತಿಗೆ
ಮೂವರು
ಕಾರ್ಮಿಕರು
ಮ್ಯಾನ್ಹೋಲ್ನಲ್ಲಿ
ಉಸಿರುಗಟ್ಟಿ
ಸಾವನ್ನಪ್ಪಿರುವ
ಘಟನೆ
ರಾಮನಗರದಲ್ಲಿ
ನಡೆದಿರುವುದು
ಅತ್ಯಂತ
ದುರ್ದೈವದ
ಸಂಗತಿ.
ಇದಕ್ಕಾಗಿ
ತೀವ್ರ
ಕಂಬನಿ
ಮಿಡಿಯುತ್ತೇನೆ.
ಇದೊಂದು
ಮನಕಲಕುವ
ಸರಣಿ
ಸಾವು.
ಬೇಜವಾಬ್ದಾರಿತನದಿಂದ
ಗುತ್ತಿಗೆ
ಕಾರ್ಮಿಕರ
ಸಾವಿಗೆ
ಕಾರಣನಾದ
ಗುತ್ತಿಗೆದಾರನ
ವಿರುದ್ಧ
ಕಠಿಣ
ಕ್ರಮ
ಕೈಗೊಳ್ಳುವಂತೆ
ಒತ್ತಾಯಿಸುತ್ತೇನೆ
ಎಂದು
ಮಾಜಿ
ಸಿಎಂ
ಎಚ್.ಡಿ
ಕುಮಾರಸ್ವಾಮಿ
ಸಂತಾಪ
ಸೂಚಿಸಿದ್ದಾರೆ.
ಕುಟುಂಬಸ್ಥರಿಗೆ
ಸಾಂತ್ವನ
ಹೇಳಿದ
ನಿಖಿಲ್
ಜೀವನ
ನಿರ್ವಹಣೆಗಾಗಿ
ಲಾಕ್ಡೌನ್
ಲೆಕ್ಕಿಸದೆ
ಕೆಲಸ
ಮಾಡುತ್ತಿದ್ದ
ಮೂವರು
ಕಾರ್ಮಿಕರು
ನಿರ್ಮಾಣ
ಹಂತದ
ಮ್ಯಾನ್ಹೋಲ್
ಒಳಗೆ
ಇಳಿದು
ಉಸಿರುಗಟ್ಟಿ
ಸಾವನ್ನಪ್ಪಿರುವುದಕ್ಕೆ
ನಿಖಿಲ್
ಕುಮಾರಸ್ವಾಮಿ
ಬೇಸರ
ವ್ಯಕ್ತಪಡಿಸಿದರು.
Recommended Video
ಘಟನೆ ಬಗ್ಗೆ ಮಾಹಿತಿ ತಿಳಿದ ತಕ್ಷಣ ರಾಮನಗರ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ನಿಖಿಲ್ ಕುಮಾರಸ್ವಾಮಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಳಿಕ ಎಸ್ಪಿ ಕಚೇರಿಗೆ ಭೇಟಿ ನೀಡಿ ಘಟನೆ ಬಗ್ಗೆ ಎಸ್ಪಿ ಅವರಿಂದ ಮಾಹಿತಿ ತೆಗೆದುಕೊಂಡರು. ಕಾರ್ಮಿಕರ ಸಾವಿನಿಂದ ಅವರ ಕುಟುಂಬ ವರ್ಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ, ಸರ್ಕಾರದಿಂದ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.
ರಾಮನಗರದಲ್ಲಿ ನಿರ್ಮಾಣ ಹಂತದ ಮ್ಯಾನ್ಹೋಲ್ನಲ್ಲಿ ಇಳಿದು 3 ಮಂದಿ ಮೃತಪಟ್ಟ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಹಾಗೂ ರಾಮನಗರ ಎಸ್ಪಿ ಪಿ.ಗಿರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.