2022ರ GIMನಿಂದ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ: 10 ಲಕ್ಷ ಉದ್ಯೋಗ ಸೃಷ್ಟಿ
ರಾಮನಗರ, ಅಕ್ಟೋಬರ್ 1: "2022ರ ನವೆಂಬರ್ನಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ನಡೆಯಲಿದ್ದು, ಸುಮಾರು 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ನಿರೀಕ್ಷಿಸಲಾಗುತ್ತಿದೆ. ಇದರಿಂದ ಸುಮಾರು 10 ಲಕ್ಷ ಉದ್ಯೋಗಗಳು ಸೃಷ್ಟಿಯಾಗುವ ವಿಶ್ವಾಸವಿದೆ," ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಈಗಲ್ಟನ್ ರೆಸಾರ್ಟ್ನಲ್ಲಿ ನಡೆದ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಘದ 50ನೇ ವಾರ್ಷಿಕೊತ್ಸವದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಸಚಿವ ಮುರುಗೇಶ್ ಆರ್. ನಿರಾಣಿ ಮಾತನಾಡಿದರು.
"ಹಿಂದಿನ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆದಿತ್ತು. ಆಗಲೂ 10.8 ಲಕ್ಷ ಕೋಟಿ ಬಂಡವಾಳ ಹೂಡಿಕೆಯಾಗಿದೆ. ಮುಂದಿನ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಕರ್ಷಣೆ ಮಾಡಿ 10 ಲಕ್ಷ ಉದ್ಯೋಗ ಸೃಷ್ಟಿ ಮಾಡುವುದು ನಮ್ಮ ಗುರಿ," ಎಂದರು.
ಭಾರತದಲ್ಲಿ
800
ಸಕ್ಕರೆ
ಕಾರ್ಖಾನೆಗಳಿವೆ
"ಭಾರತದಲ್ಲಿ
ಸುಮಾರು
800
ಸಕ್ಕರೆ
ಕಾರ್ಖಾನೆಗಳಿದ್ದು,
ರಾಜ್ಯದಲ್ಲಿ
84
ಸಕ್ಕರೆ
ಕಾರ್ಖಾನೆಗಳಿವೆ.
ಅವುಗಳಲ್ಲಿ
64
ಕಾರ್ಖಾನೆಗಳು
ಮಾತ್ರ
ಕಾರ್ಯನಿರ್ವಹಿಸುತ್ತಿವೆ.
ದೇಶದಲ್ಲಿ
12
ಕೋಟಿ
ರೈತರು
ಕಬ್ಬು
ಬೆಳೆಯುತ್ತಿದ್ದಾರೆ.
ಸಕ್ಕರೆ
ಕಾರ್ಖಾನೆಗಳು
ತಮ್ಮ
ಕಾರ್ಯವ್ಯಾಪ್ತಿಯನ್ನು
ವಿಸ್ತರಿಸಿಕೊಳ್ಳಬೇಕು.
ಸಕ್ಕರೆ
ಉದ್ಯಮಕ್ಕೆ
ಪೂರಕವಾಗುವ
ಚಟುವಟಿಕೆಗಳನ್ನು
ಕೈಗೆತ್ತಿಕೊಳ್ಳಬೇಕು,"
ಎಂದು
ಸಚಿವರು
ಕರೆ
ನೀಡಿದರು.
"ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಸರ್ಕಾರ ಚಿಂತನೆ ನಡೆಸಿದೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ನಷ್ಟ ಹೊಂದಬಾರದು ಎಂಬುದು ಸರ್ಕಾರದ ಉದ್ದೇಶ. ಸಕ್ಕರೆ ಕಾರ್ಖಾನೆಗಳಿಗೆ ನಷ್ಟವಾದರೆ ರೈತರಿಗೂ ನಷ್ಟವಾಗುತ್ತದೆ. ಸರ್ಕಾರ ರೈತನನ್ನು ಉಳಿಸಬೇಕು, ಸಕ್ಕರೆ ಉದ್ದಿಮೆಯನ್ನು ಬೆಳೆಸಬೇಕು ಎಂಬ ನಿಲುವು ಹೊಂದಿದೆ." ಇಂದು ನಡೆಯುತ್ತಿರುವ ದಕ್ಷಿಣ ಭಾರತ ಮಟ್ಟದ ಬೆಳೆಗಾರರು ಮತ್ತು ಸಕ್ಕರೆ ತಂತ್ರಜ್ಞಾನದ ಸಲಹೆ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದರು.
ಎಥೆನಾಲ್
ಉತ್ಪಾದನೆಗೆ
ಕೇಂದ್ರ
ಸರ್ಕಾರ
ಉತ್ತೇಜನ
"ಹಿಂದೆ
ಸಕ್ಕರೆ
ಕಾರ್ಖಾನೆಗಳಲ್ಲಿ
ಎಥೆನಾಲ್
ಉತ್ಪಾದನೆ
ಮಾಡುತ್ತಿರಲಿಲ್ಲ.
ಪ್ರಸ್ತುತ
ಪೆಟ್ರೋಲ್
ಜೊತೆಗೆ
ಶೇ.20ರಷ್ಟು
ಎಥೆನಾಲ್
ಬಳಸಲು
ಕೇಂದ್ರ
ಸರ್ಕಾರ
ಒಪ್ಪಿಗೆ
ನೀಡಿದೆ.
ಅಲ್ಲದೇ
ಎಥೆನಾಲ್
ಉತ್ಪಾದನೆ
ಹೆಚ್ಚಿಸುವ
ನಿಟ್ಟಿನಲ್ಲಿ
ಕೇಂದ್ರ
ಸರ್ಕಾರ
ಐದು
ವರ್ಷಗಳ
ಅವಧಿಯ
ಇಂಟರ್
ಸಬ್ಸಿಡಿ
ಸುಮಾರು
ಶೇ.6ರಷ್ಟು
ರಿಯಾಯಿತಿ
ಘೋಷಣೆ
ಮಾಡಿದೆ.
ಇದರಿಂದ
ಸಾಕಷ್ಟು
ಸಕ್ಕರೆ
ಕಾರ್ಖಾನೆಗಳಿಗೆ
ಉಪಯೋಗವಾಗುತ್ತದೆ,"
ಎಂದು
ಕೈಗಾರಿಕಾ
ಸಚಿವ
ನಿರಾಣಿ
ತಿಳಿಸಿದರು.
ಕೈಗಾರಿಕಾ
ವಲಯ
ಸ್ಥಾಪನೆಗೆ
ಕೇಂದ್ರದಿಂದ
3
ಸಾವಿರ
ಕೋಟಿ
ನೆರವು
"ರಾಜ್ಯದ
ಮೂರು
ಕೈಗಾರಿಕಾ
ವಲಯ
ಸ್ಥಾಪನೆಗೆ
ಕೇಂದ್ರ
ಸರ್ಕಾರ
ಸುಮಾರು
3
ಸಾವಿರ
ಕೋಟಿ
ರೂ.
ನೆರವು
ನೀಡಿದೆ.
"ಒಂದು
ಜಿಲ್ಲೆ,
ಒಂದು
ಉತ್ಪನ್ನ'
ಇದರಡಿ
ಪ್ರತಿ
ಜಿಲ್ಲೆಯಲ್ಲೂ
ಒಂದೊಂದು
ಕೈಗಾರಿಕಾ
ವಲಯ
ಸೃಷ್ಟಿ
ಮಾಡುವುದು
ರಾಜ್ಯ
ಸರ್ಕಾರದ
ಗುರಿ."
"ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ಸಾವಿರ ಎಕರೆ ಭೂಮಿ ನೀಡಲಾಗಿದೆ. ಕಲ್ಯಾಣ ಕರ್ನಾಟ ಭಾಗದ ರಾಯಚೂರು ಜಿಲ್ಲೆಯಲ್ಲಿ ಔಷಧಿ ತಯಾರಿಕಾ ಪಾರ್ಕ್ಗಾಗಿ ಸಾವಿರ ಎಕರೆ ಭೂಮಿ ನೀಡಲಾಗಿದೆ. ಅಲ್ಲಿ ಸುಮಾರು 80 ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಕಾರವಾರದಲ್ಲೂ ಕೈಗಾರಿಕಾ ವಲಯ ಸ್ಥಾಪನೆ ಮಾಡಲು ಮುಂದಾಗಿದ್ದೇವೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಬಂಡವಾಳ ಆಕರ್ಷಣೆಯಲ್ಲಿ ದೇಶಕ್ಕೆ ಕರ್ನಾಟಕ ನಂ.1 ಸ್ಥಾನ ಪಡೆದಿದೆ," ಎಂದು ಸಚಿವ ಮುರುಗೇಶ್ ನಿರಾಣಿ ಮಾಹಿತಿ ನೀಡಿದರು.
"ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಸುಮಾರು 9 ಸಾವಿರ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ಬಳಸುತ್ತಿದ್ದೇವೆ. ಕೇವಲ ಮೂರು ತಿಂಗಳ ಅವಧಿಯಲ್ಲಿ ಸುಮಾರು 30 ಸಾವಿರ ಎಕರೆ ಭೂಮಿಯನ್ನು ಗುರುತಿಸಿ ವಶಪಡಿಸಿಕೊಂಡು ಕೈಗಾರಿಕಾ ವಲಯ ಸ್ಥಾಪನೆಗೆ ಮುಂದಾಗಿದ್ದೇವೆ," ಎಂದು ಸಚಿವ ನಿರಾಣಿ ತಿಳಿಸಿದರು.