ಮಾಗಡಿಯಲ್ಲಿ ಕೆರೆ ಕಟ್ಟೆ ಒಡೆದು ಜಮೀನಿಗೆ ನುಗ್ಗಿದ ನೀರು
ಮಾಗಡಿ, ಆಗಸ್ಟ್ 21: ಮಂಗಳವಾರ ರಾತ್ರಿ ಬೆಂಗಳೂರು ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಜೋರು ಮಳೆಯಾಗಿದೆ. ರಾಮನಗರದಲ್ಲೂ ಭಾರೀ ಮಳೆಯಾಗಿದ್ದು, ಜಮೀನಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ನಿರಂತರ ಸುರಿದ ಮಳೆಯಿಂದಾಗಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ವೀರಸಾಗರದಲ್ಲಿ ಕೆರೆಯ ಕಟ್ಟೆ ಒಡೆದು ಅಪಾರ ಪ್ರಮಾಣದಲ್ಲಿ ನೀರು ಜಮೀನಿಗೆ ನುಗ್ಗಿದೆ.
ಅಪಾಯ ಮಟ್ಟ ಮೀರಿದ ಗಂಗಾ: ದೆಹಲಿಗೆ ರೆಡ್ ಅಲರ್ಟ್
ರಾತ್ರಿ ಜಿಲ್ಲೆಯ ಹಲವೆಡೆ ಜೋರು ಮಳೆ ಸುರಿದಿತ್ತು. ಜೋರು ಮಳೆಯಿಂದಾಗಿ ವೀರಸಾಗರ ಗ್ರಾಮದ ಕೆರೆ ಭರ್ತಿಯಾಗಿ ಕೆರೆ ಏರಿ ಒಡೆದುಹೋಗಿದೆ. ಕೆರೆಯ ಕಟ್ಟೆ ಹೊಡೆದ ಪರಿಣಾಮ ನೀರು ನುಗ್ಗಿ ಹರಿದು ಬಿತ್ತನೆ ಮಾಡಿದ ರೈತರ ಜಮೀನಿನತ್ತ ಹರಿದಿದೆ.
15 ದಿನಗಳ ಹಿಂದಷ್ಟೇ ಗ್ರಾಮದ ರೈತರೊಬ್ಬರು ಬಿತ್ತನೆ ಮಾಡಿದ್ದ ಜಮೀನು ಸಂಪೂರ್ಣವಾಗಿ ಜಲಾವೃತವಾಗಿದೆ. ಅಲ್ಲದೇ ಅಕ್ಕಪಕ್ಕದ ಜಮೀನುಗಳಿಗೂ ನೀರು ನುಗ್ಗಿ ಹಾನಿಯಾಗಿದೆ.
Comments
English summary
Due to the continuous rainfall, a lake in the Veera Sagar area of the Magadi taluk of Ramanagar district has rushed towards the farm.
Story first published: Wednesday, August 21, 2019, 12:06 [IST]