ನಿತ್ಯಾನಂದ ಸ್ವಾಮಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ
ರಾಮನಗರ ಆಗಸ್ಟ 20: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಬಹಳ ದಿನಗಳಿಂದ ಕಾಣೆಯಾಗಿದ್ದಾರೆ. ಇದೀಗ ರಾಮನಗರದ ಸ್ಥಳೀಯ ನ್ಯಾಯಾಲಯವು 2010 ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಿತ್ಯಾನಂದ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಈ ವಾರಂಟ್ ಹೊರಡಿಸಿದೆ. ಈ ಹಿಂದೆಯೂ ನಿತ್ಯಾನಂದನ ವಿರುದ್ಧ ವಾರೆಂಟ್ ಜಾರಿಯಾಗಿದ್ದರೂ ಆತನನ್ನು ಬಂಧಿಸಲು ಅಥವಾ ಆತ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಈ ಪ್ರಕರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಚಾರಣೆ ನಡೆಸಲಾಗಿದ್ದು, ಮೂವರು ಸಾಕ್ಷಿಗಳ ವಿಚಾರಣೆಯನ್ನೂ ನಡೆಸಲಾಗಿದೆ. ಆದರೆ, ಪ್ರಮುಖ ಆರೋಪಿ ನಿತ್ಯಾನಂದ ಕೋರ್ಟ್ ಮುಂದೆ ಗೈರುಹಾಜರಾದ ಕಾರಣ ಕಳೆದ ಮೂರು ವರ್ಷಗಳಿಂದ ವಿಚಾರಣೆ ಬಾಕಿ ಉಳಿದಿತ್ತು. 2019 ರಿಂದಲೂ ನಿತ್ಯಾನಂದನಿಗೆ ಹಲವು ಬಾರಿ ಸಮನ್ಸ್ಗಳನ್ನು ನೀಡಲಾಗಿದೆ. ಆದರೆ, ಅವರು ಒಂದೇ ಒಂದು ಸಮನ್ಸ್ಗೆ ಪ್ರತಿಕ್ರಿಯಿಸಿಲ್ಲ. ಇದೀಗ ನ್ಯಾಯಾಲಯ ಹೊರಡಿಸಿರುವ ವಾರಂಟ್ ಸೆ.23ರವರೆಗೆ ಚಾಲ್ತಿಯಲ್ಲಿದೆ. ಅಂದರೆ ಸೆ.23ರೊಳಗೆ ಪೊಲೀಸರು ನಿತ್ಯಾನಂದನನ್ನು ಬಂಧಿಸಿ ಹಾಜರುಪಡಿಸಬೇಕು.
Recommended Video
ಜಾಮೀನು
ರದ್ದು
2010ರಲ್ಲಿ
ನಿತ್ಯಾನಂದನ
ಚಾಲಕ
ಲೆನಿನ್
ವಿರುದ್ಧ
ಅತ್ಯಾಚಾರ
ಪ್ರಕರಣ
ದಾಖಲಿಸಲಾಗಿತ್ತು.
ಇದೇ
ಪ್ರಕರಣದಲ್ಲಿ
ನಿತ್ಯಾನಂದನನ್ನು
ಬಂಧಿಸಿ
ನಂತರ
ಜಾಮೀನಿನ
ಮೇಲೆ
ಬಿಡುಗಡೆ
ಮಾಡಲಾಗಿತ್ತು.
2020
ರ,
ನಿತ್ಯಾನಂದ
ದೇಶದಿಂದ
ಪರಾರಿಯಾಗಿದ್ದಾನೆ
ಎಂದು
ಲೆನಿನ್
ನ್ಯಾಯಾಲಯಕ್ಕೆ
ಅರ್ಜಿ
ಸಲ್ಲಿಸಿದರು.
ಈ
ಅರ್ಜಿಯ
ಆಧಾರದ
ಮೇಲೆ
ನಿತ್ಯಾನಂದನ
ಜಾಮೀನು
ರದ್ದುಗೊಳಿಸಲಾಗಿದೆ.
ನಿತ್ಯಾನಂದ ದೇಶ ಬಿಟ್ಟು ಓಡಿ ಹೋಗಿ ಕೈಲಾಸ ಎಂಬ ಹೆಸರಿನ ದ್ವೀಪದಲ್ಲಿ ಆಶ್ರಮ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಆತ ಎಲ್ಲಿದ್ದಾನೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಅತ್ಯಾಚಾರ ಪ್ರಕರಣದಲ್ಲಿ, ರಾಮನಗರ ಸೆಷನ್ಸ್ ನ್ಯಾಯಾಲಯವು ಹಲವಾರು ಸಮನ್ಸ್ ಜಾರಿಗೊಳಿಸಿತು. ಆದರೆ, 2019 ರಿಂದ ನಿತ್ಯಾನಂದ ಯಾವುದೇ ಸಮನ್ಸ್ಗೆ ಉತ್ತರಿಸಲಿಲ್ಲ ಅಥವಾ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಈ ಹಿನ್ನೆಲೆಯಲ್ಲಿ ಇದೀಗ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.