ರಾಮನಗರದಲ್ಲಿ ನಾಪತ್ತೆಯಾಗಿದ್ದ 18ರ ಯುವತಿ ಶವವಾಗಿ ಪತ್ತೆ
ರಾಮನಗರ,
ಅಕ್ಟೋಬರ್.10:
ಕಳೆದ
ಮೂರು
ದಿನಗಳ
ಹಿಂದೆ
ಮನೆಯಿಂದ
ಕಾಣೆಯಾಗಿದ್ದ
ಯುವತಿ
ಶನಿವಾರ
ಶವವಾಗಿ
ಪತ್ತೆಯಾದ
ಘಟನೆ
ರಾಮನಗರ
ಜಿಲ್ಲೆ
ಬೆಟ್ಟಹಳ್ಳಿ
ಗ್ರಾಮದಲ್ಲಿ
ಬೆಳಕಿಗೆ
ಬಂದಿದೆ.
ಪ್ರಿಯಕರನೇ
ಕೊಲೆ
ಮಾಡಿರುವ
ಬಗ್ಗೆ
ಮೃತ
ಹೇಮಲತಾ
ಪೋಷಕರು
ಆರೋಪಿಸುತ್ತಿದ್ದಾರೆ.
ರಾಮನಗರ
ತಾಲೂಕಿನ
ಕುದೂರು
ಹೋಬಳಿ
ಬೆಟ್ಟಹಳ್ಳಿ
ಗ್ರಾಮದ
ಕೃಷ್ಣಪ್ಪ
ಎಂಬುವವರ
ಪುತ್ರಿ
ಹೇಮಲತಾ(18)
ಅಕ್ಟೋಬರ್.08ರಂದು
ಮನೆಯಿಂದ
ನಾಪತ್ತೆಯಾಗಿದ್ದರು.
ಹೇಮಲತಾ
ಕಾಣೆಯಾಗಿರುವ
ಬಗ್ಗೆ
ಕುದೂರು
ಪೊಲೀಸ್
ಠಾಣೆಯಲ್ಲಿ
ಪೋಷಕರು
ದೂರು
ಸಲ್ಲಿಸಿದ್ದರು.
ಮರ್ಯಾದಾ
ಹತ್ಯೆ:
ರಾಮನಗರದಲ್ಲಿ
ಮಗಳ
ಪ್ರೇಮಿಯನ್ನು
ಕೊಂದ
ತಂದೆ
ಪೋಷಕರು
ನೀಡಿದ
ದೂರು
ದಾಖಲಿಸಿಕೊಂಡ
ಕುದೂರು
ಪೊಲೀಸರು
ತನಿಖೆ
ಕೈಗೊಂಡ
ಬೆನ್ನಲ್ಲೇ
ಕಾಣೆಯಾಗಿದ್ದ
ಹೇಮಲತಾ
ಗ್ರಾಮದ
ಬಳಿಯ
ತಮ್ಮ
ಸಂಬಂಧಿ
ರವೀಂದ್ರ
ಕುಮಾರ್
ಎಂಬುವರ
ತೋಟದಲ್ಲಿ
ಶವವಾಗಿ
ಪತ್ತೆಯಾಗಿದ್ದಾರೆ.
ಅಡಿಕೆ
ಸಸಿ
ನೆಡವುದಕ್ಕಾಗಿ
ಗುಂಡಿ
ತೋಡುವ
ಸಂದರ್ಭದಲ್ಲಿ
ಹೇಮಲತಾ
ಕಳೆಬರವು
ಪತ್ತೆಯಾಗಿದೆ.
ಪ್ರಿಯಕರನ
ಮೇಲೆ
ಪೋಷಕರ
ಅನುಮಾನ:
ಕುದೂರು
ಕಾಲೇಜಿನಲ್ಲಿ
ಪ್ರಥಮ
ಬಿಕಾಂ
ವ್ಯಾಸಂಗ
ಮಾಡುತ್ತಿದ್ದ
ಹೇಮಲತಾ
ಅದೇ
ಗ್ರಾಮದ
ಪುನೀತ್
ಎಂಬಾತನನ್ನು
ಮೂರು
ವರ್ಷಗಳಿಂದ
ಪ್ರೀತಿಸುತ್ತಿದ್ದರು
ಎನ್ನಲಾಗಿದೆ.
ಹೇಮಲತಾ
ಕಾಣೆಯಾದ
ಅಕ್ಟೋಬರ್.8ರಂದೇ
ತಮ್ಮ
ಸಂಭಂದಿಕರ
ಜಮೀನಿನ
ಬಳಿ
ಕಾಪಾಡಿ
ಎಂದು
ಕಿರುಚಾಟದ
ಶಬ್ದ
ಕೇಳಿದ
ಎಂದು
ಊರಿನವರು
ಹೇಳುತ್ತಿದ್ದಾರೆ.
ಅದೇ
ಶಬ್ಧವನ್ನು
ಕೇಳಿದ
ಸಂಬಂಧಿಕರು
ರಾತ್ರಿಯಿಡೀ
ಹುಡುಕಾಟ
ನಡೆಸಿದ್ದಾರೆ.
ಅಕ್ಟೋಬರ್.09ರಂದು
ಹುಡುಗಿ
ಪ್ರಿಯಕರ
ಪುನೀತ್,
ಹೇಮಲತಾ
ಪೋಷಕರಿಗೆ
ಕರೆ
ಮಾಡಿ
ನಿಮ್ಮ
ಹುಡುಗಿ
ಜೋಪಾನವಾಗಿದ್ದಾಳೆ.
ಆಕೆಗಾಗಿ
ಹುಡುಕಾಟ
ಬೇಡ
ಎಂದು
ಪೋಷಕರಿಗೆ
ಹೇಳಿದ್ದೂ
ಅಲ್ಲದೇ
ನಿಮ್ಮ
ಜೊತೆ
ಗೌಪ್ಯವಾಗಿ
ಮಾತನಾಡಬೇಕು
ಎಂದು
ಕರೆದಿರುವ
ಬಗ್ಗೆ
ಪೋಷಕರು
ಆರೋಪಿಸುತ್ತಿದ್ದಾರೆ.
Recommended Video
ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ತಪಾಷಣೆ ನಡೆಸಿದ್ದಾರೆ. ರಾಮನಗರ ಉಪ ಜಿಲ್ಲಾಧಿಕಾರಿ ದ್ರಾಕ್ಷಾಯಣಿ, ಮಾಗಡಿ ತಹಸಿಲ್ದಾರ್ ಬಿ.ಕೆ. ಶ್ರೀನಿವಾಸ್ಪ್ರಸಾದ್ , ರಾಮನಗರ ಎಎಸ್ ಪಿ .ರಾಮರಾಜ್ ನೇತೃತ್ವದ ಅಧಿಕಾರಿಗಳ ತಂಡವು ಹೇಮಲತಾ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೆಂಗಳೂರಿಗೆ ರವಾನಿಸಿದ್ದಾರೆ.