ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮನಗರದಲ್ಲಿ ಕೊಂಡಕ್ಕೆ ಬಿದ್ದು ಅರ್ಚಕನಿಗೆ ಗಂಭೀರ ಗಾಯ

By ರಾಮನಗರ ಪ್ರತಿನಿಧಿ
|
Google Oneindia Kannada News

ರಾಮನಗರ, ಏಪ್ರಿಲ್ 29: ಕೊಂಡ ಹಾಯುವ ವೇಳೆ ಆಯತಪ್ಪಿ ಕೊಂಡಕ್ಕೆ ಬಿದ್ದು, ಅರ್ಚಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಪುರಾಣ ಪ್ರಸಿದ್ಧ ರೇವಣಸಿದ್ದೇಶ್ವರ ಕೊಂಡ ಮಹೋತ್ಸವದಲ್ಲಿ ನಡೆದಿದೆ.

ಇಂದು ಭಾನುವಾರ ಬೆಳಗ್ಗೆ ಹಬ್ಬದ ಹಿನ್ನಲೆಯಲ್ಲಿ ಏರ್ಪಡಿಸಿದ್ದ ಕೊಂಡ ಮಹೋತ್ಸವದಲ್ಲಿ ಕೊಂಡ ತುಳಿಯುವ ವೇಳೆ ಆಯತಪ್ಪಿ ಅರ್ಚಕ ವಿಜಯ್ ಕುಮಾರ್ ಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೊಂಡದಲ್ಲಿ ಬಿದ್ದ ಅರ್ಚಕ ವಿಜಯ್ ಕುಮಾರ್ ರಕ್ಷಿಸಲು ಹೋದ ಇನ್ನಿಬ್ಬರು ಅರ್ಚಕರಾದ ರುದ್ರೇಶ್ ಮತ್ತು ಮಂಜುನಾಥ್ ಗೂ ಸಣ್ಣ ಪುಟ್ಟ ಸುಟ್ಟ ಗಾಯಗಳಾಗಿವೆ.

ರಾಮನಗರ : ಕೊಂಡ ಹಾಯುವಾಗ ಬಿದ್ದು ಅರ್ಚಕರಿಗೆ ಗಾಯ ರಾಮನಗರ : ಕೊಂಡ ಹಾಯುವಾಗ ಬಿದ್ದು ಅರ್ಚಕರಿಗೆ ಗಾಯ

ತಕ್ಷವೇ ಸ್ಥಳದಲ್ಲಿದ್ದ ಜನರು ಗಾಯಗೊಂಡ ಅರ್ಚಕ ವಿಜಯ್ ಕುಮಾರ್, ರುದ್ರೇಶ್ ಮತ್ತು ಮಂಜುನಾಥ್ ಅವರನ್ನು ರಾಮನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಗಾಯಗೊಂಡ ವಿಜಯ್ ಕುಮಾರ್ ಗೆ ಹಲವಾರು ವರ್ಷಗಳಿಂದ ಕೊಂಡ ತುಳಿದ ಅನುಭವ ಇದೆ. ರಾಮನಗರ ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Priest Vijay seriously injured after fell into Konda.

ತಿಂಗಳ ಹಿಂದೆಯಷ್ಟೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನಉಯ್ಯಂಬಳ್ಳಿ ಗ್ರಾಮದ ಮಾರಮ್ಮ ದೇವರ ಹಬ್ಬದಲ್ಲಿ ಕೊಂಡ ಹಾಯ್ಯುವಾಗ ಆಕಸ್ಮಿಕವಾಗಿ ಬಿದ್ದು ಅರ್ಚಕರು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು.

English summary
Priest Vijay seriously injured after fell into Konda. Incident occurred on April 29 early morning at avverahalli village in Ramanagara Taluk. Priests Rudresh , Manjunath are also suffering from small burns in this incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X