ವಿಡಿಯೋ; ಕನಕಪುರದಲ್ಲಿ ಕೊಂಡ ಹಾಯುವಾಗ ಜಾರಿಬಿದ್ದ ಅರ್ಚಕ
ಕನಕಪುರ, ಮಾರ್ಚ್ 9: ಗ್ರಾಮ ದೇವತೆಯ ಅಗ್ನಿಕೊಂಡ ಮಹೋತ್ಸವದಲ್ಲಿ ಕೊಂಡ ಹಾಯುವಾಗ ಅರ್ಚಕರು ಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕನಕಪುರದ ತುಂಗಣಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ತುಂಗಣಿ ಗ್ರಾಮದ ಗ್ರಾಮದೇವತೆ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಕೊಂಡದಲ್ಲಿ ಪಟ್ಟಲದಮ್ಮ ದೇವಿಯ ಪೂಜಾರಿ ಕರಿಯಪ್ಪ (43) ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಕೊಂಡ ಹಾಯಲು ಮುಂದಾದ ಅರ್ಚಕ ಕರಿಯಪ್ಪ ಅಗ್ನಿಕೊಂಡದ ಮಧ್ಯ ಭಾಗದಲ್ಲಿಯೇ ಬಿದ್ದು ಎದ್ದು ಓಡಿಬಂದಿದ್ದಾರೆ. ಅವರಿಗೆ ತೀವ್ರ ಸುಟ್ಟಗಾಯಗಳಾಗಿವೆ. ಪೂಜಾರಿ ಕರಿಯಪ್ಪನನ್ನು ಸ್ಥಳೀಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧದ ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ; ಕನಕಪುರದಲ್ಲಿ ಕೊಂಡ ಹಾಯುವಾಗ ಬಿದ್ದ ಅರ್ಚಕ
— Oneindia Kannada (@OneindiaKannada) March 9, 2020
ಗ್ರಾಮ ದೇವತೆಯ ಅಗ್ನಿಕೊಂಡ ಮಹೋತ್ಸವದಲ್ಲಿ ಕೊಂಡ ಹಾಯುವಾಗ ಅರ್ಚಕರು ಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕನಕಪುರದ ತುಂಗಣಿ ಗ್ರಾಮದಲ್ಲಿ ನಡೆದಿದೆ.#Kanakapura | #Tungani | #firebombcelebration pic.twitter.com/v3IaArPMQw