ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ಕನಕಪುರದಲ್ಲಿ ಕೊಂಡ ಹಾಯುವಾಗ ಜಾರಿಬಿದ್ದ ಅರ್ಚಕ

By ರಾಮನಗರ ಪ್ರತಿನಿಧಿ
|
Google Oneindia Kannada News

ಕನಕಪುರ, ಮಾರ್ಚ್ 9: ಗ್ರಾಮ ದೇವತೆಯ ಅಗ್ನಿಕೊಂಡ ಮಹೋತ್ಸವದಲ್ಲಿ ಕೊಂಡ ಹಾಯುವಾಗ ಅರ್ಚಕರು ಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕನಕಪುರದ ತುಂಗಣಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ತುಂಗಣಿ ಗ್ರಾಮದ ಗ್ರಾಮದೇವತೆ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಕೊಂಡದಲ್ಲಿ ಪಟ್ಟಲದಮ್ಮ ದೇವಿಯ ಪೂಜಾರಿ ಕರಿಯಪ್ಪ (43) ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದಾರೆ.

Video Of Priest Fell In Konda Of Kanakapura Temple Fair

ಇದೇ ಮೊದಲ ಬಾರಿಗೆ ಕೊಂಡ ಹಾಯಲು ಮುಂದಾದ ಅರ್ಚಕ ಕರಿಯಪ್ಪ ಅಗ್ನಿಕೊಂಡದ ಮಧ್ಯ ಭಾಗದಲ್ಲಿಯೇ ಬಿದ್ದು ಎದ್ದು ಓಡಿಬಂದಿದ್ದಾರೆ. ಅವರಿಗೆ ತೀವ್ರ ಸುಟ್ಟಗಾಯಗಳಾಗಿವೆ. ಪೂಜಾರಿ ಕರಿಯಪ್ಪನನ್ನು ಸ್ಥಳೀಯ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧದ ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

English summary
Priest kariyappa seriously injured after fell into fire in kanakapura. Incident occurred yesterday in tungani village of kanakapura in Ramanagara district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X