ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿಖಿಲ್ ಮದುವೆಗೆ ಕೊರೊನಾ ಭೀತಿ: ಎಚ್ಡಿಕೆ ಕನಸು ಭಗ್ನ

|
Google Oneindia Kannada News

ರಾಮನಗರ, ಮಾರ್ಚ್ 18: ರಾಮನಗರ ಮತ್ತು ಚನ್ನಪಟ್ಟಣ ಜನರ ಮಧ್ಯೆ ತಮ್ಮ ಮಗ ನಿಖಿಲ್ ಕುಮಾರಸ್ವಾಮಿಯ ಮದುವೆ ಮಾಡಲು ಆಶಯ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಕೊರೊನಾ ಭೀತಿಯಿಂದಾಗಿ ಮದುವೆ ಸ್ಥಳಾಂತರ ತಯಾರಿ ಆರಂಭವಾಗಿದೆ.

ಈಗಾಗಲೇ ಚನ್ನಪಟ್ಟಣ ಮಧ್ಯ ಭಾಗದ ಜಾನಪದ ಲೋಕದಲ್ಲಿ ಮದುವೆ ನಿಶ್ಚಯವಾಗಿತ್ತು, ಅದಕ್ಕೆ ಪೂರ್ವ ತಯಾರಿಯೂ ಜೋರಾಗಿ ನಡೆದಿತ್ತು. ಕಳೆದ ಒಂದು ತಿಂಗಳಿನಿಂದ ಮದುವೆ ಸ್ಥಳದ ಸಿದ್ದತಾ ಕಾಮಗಾರಿಗಳು ನಡೆದಿದ್ದವು.

ಮಗ ನಿಖಿಲ್ ಮದುವೆ ಬಗ್ಗೆ ಹೀಗೆ ಹೇಳಿದ್ಯಾಕೆ ತಾಯಿ ಅನಿತಾ ಕುಮಾರಸ್ವಾಮಿ?ಮಗ ನಿಖಿಲ್ ಮದುವೆ ಬಗ್ಗೆ ಹೀಗೆ ಹೇಳಿದ್ಯಾಕೆ ತಾಯಿ ಅನಿತಾ ಕುಮಾರಸ್ವಾಮಿ?

ಆದರೆ ಇದೀಗ ಮದುವೆಗೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ, ರಾಜಕೀಯ ತವರೂರಾದ ರಾಮನಗರ ಜಿಲ್ಲೆಯಲ್ಲಿ ತಮ್ಮ ಮಗನ ಮದುವೆ ಮಾಡಬೇಕೆಂದುಕೊಂಡಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಕನಸು ಭಗ್ನಗೊಂಡಿದೆ.

Nikhil Kumaraswamy Marriage Transfer From Channapattana to Bengaluru

ಇದೇ ಏಪ್ರಿಲ್ 17 ರಂದು ಮದುವೆ ನಿಶ್ಚಿಯವಾಗಿದ್ದ ನಿಖಿಲ್ ಮದುವೆಯನ್ನು ಚನ್ನಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತರಿಸಲು ಎಚ್ಡಿಕೆ ಕುಟುಂಬ ಮುಂದಾಗಿದೆ.

ನಿಖಿಲ್ ಲಗ್ನ ಪತ್ರಿಕೆಯಲ್ಲಿ ಎಚ್ಡಿಕೆ ಭಾವುಕ ಸಂದೇಶವೇನಿದೆ?ನಿಖಿಲ್ ಲಗ್ನ ಪತ್ರಿಕೆಯಲ್ಲಿ ಎಚ್ಡಿಕೆ ಭಾವುಕ ಸಂದೇಶವೇನಿದೆ?

ನಿಖಿಲ್ ಕುಮಾರಸ್ವಾಮಿಯ ಮದುವೆ ಸ್ಥಳಾಂತರದ ವಿಚಾರ ಸಾಕಷ್ಟು ದಿನಗಳಿಂದ ಚರ್ಚೆಯಲ್ಲಿತ್ತು. ಇದೀಗ ಮದುವೆ ಸ್ಥಳಾಂತರ ಬಹುತೇಕ ಖಚಿತಗೊಂಡಿದೆ.

Nikhil Kumaraswamy Marriage Transfer From Channapattana to Bengaluru

ಮದುವೆ ಸಿದ್ಧತೆಗೆ ಹಾಕಿದ್ದ ಶೆಟರ್ ಗಳನ್ನು ಕೆಲಸಾಗರರು ಖಾಲಿ ಮಾಡುತ್ತಿದ್ದಾರೆ. ಬಹುತೇಕ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆ ಸಿದ್ಧತೆ ತಯಾರಿ ನಡೆದಿದೆ ಎನ್ನಲಾಗಿದೆ.

English summary
Former Chief Minister HD Kumaraswamy Son Nikhil Marriage transfer from channapattana to Bengaluru. Becuase Of Coronavirus fear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X