ರಾಮನಗರದಲ್ಲಿ ತಂದೆಗಾಗಿ ಮತ ಯಾಚಿಸಿದ ನಿಖಿಲ್ ಕುಮಾರಸ್ವಾಮಿ
Recommended Video
ರಾಮನಗರ, ಏಪ್ರಿಲ್ 28 : ರಾಮನಗರ ಕ್ಷೇತ್ರಕ್ಕೆ ಮತ್ತು ಎಚ್ ಡಿಕೆಯವರಿಗೆ ಇರುವ ಸಂಬಂಧ ತಾಯಿ-ಮಗನ ಸಂಬಂಧವಿದ್ದಂತೆ. ಆದ್ದರಿಂದ ತಂದೆಯವರು ಜಯಶೀಲರಾಗುವುದು ಖಚಿತ. ಅವರನ್ನು ಅತಿ ಹೆಚ್ಚು ಮತಗಳ ಅಂತರದಿಂದ ಜನತೆ ಗೆಲ್ಲಿಸಬೇಕು ಎಂದು ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಗ, ಚಿತ್ರನಟ ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಮನಗರ ಕ್ಷೇತ್ರದ ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ತೆರೆದ ವಾಹನದಲ್ಲಿ ರೋಡ್ಶೋ ನಡೆಸುವ ಮೂಲಕ ತಂದೆಯ ಪರ ಮತಯಾಚನೆ ಮಾಡಿದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಅಚ್ಚರಿಯ ಫಲಿತಾಂಶ ಬರಲಿದೆ: ಟಾರೋ ರೀಡಿಂಗ್
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್, ನಮ್ಮ ತಂದೆಯವರು ಮುಖ್ಯಮಂತ್ರಿಯಾಗಿದ್ದ 20 ತಿಂಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಅಭಿವೃದ್ಧಿ ಕಾರ್ಯಗಳೇ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲು ಸಹಕಾರಿ. ರಾಮನಗರದ ಅಭಿವೃದ್ಧಿಗಾಗಿ ಎಚ್ ಡಿಕೆ ಸಾಕಷ್ಟು ಶ್ರಮಿಸಿದ್ದಾರೆ ಎಂದರು.
ತಂದೆಯವರು 224 ಕ್ಷೇತ್ರಗಳಲ್ಲಿಯೂ ಪ್ರಚಾರದ ಮಾಡುತ್ತಿದ್ದು, ನಾನು ಕೂಡ ಐದಾರು ಜಿಲ್ಲೆಗಳಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೇನೆ. ಈಗಾಗಲೇ ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ತಂದೆಯವರ ಮತ್ತು ಪಕ್ಷದ ಪರವಾಗಿ ಚುನಾವಣಾ ಪ್ರಚಾರದಲ್ಲಿ ಮಗ್ನನಾಗಿದ್ದೇನೆ ಎಂದರು.
ಪ್ರತಿ ಗ್ರಾಮಗಳಿಗೆ ತೆರಳಿದ ನಿಖಿಲ್ ಗೆ ಅಭೂತಪೂರ್ವ ಸ್ವಾಗತ ಸಹ ಸಿಕ್ಕಿದ್ದು, ಅವರಿಗೆ ಆರತಿ ಎತ್ತಿ ಮಹಿಳೆಯರು ಸ್ವಾಗತ ಮಾಡಿದ್ದಾರೆ.