ರಾಮನಗರ ಉಸ್ತುವಾರಿ ಸ್ಥಾನ ದಕ್ಕಿಸಿಕೊಂಡು ಧ್ವಜಾರೋಹಣ ಮಾಡಿದ ಅಶ್ವಥ್ ನಾರಾಯಣ
ರಾಮನಗರ, ಜನವರಿ 26: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಜಿಲ್ಲಾ ಉಸ್ತುವಾರಿ ಸ್ಥಾನ ದಕ್ಕಿಸಿಕೊಳ್ಳುವ ಮೂಲಕ, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿದ್ದೀರಾ ಎಂದು ಮುಖ್ಯಮಂತ್ರಿಗಳನ್ನು ಪ್ರಶ್ನೆ ಮಾಡಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ಗೆ ಸಚಿವ ಅಶ್ವಥ್ ನಾರಾಯಣ ಪರೋಕ್ಷ ಟಾಂಗ್ ನೀಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗರಡಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ರೋಲ್ ನಿಭಾಯಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಕೊನೆಗೂ ಅಧಿಕೃತವಾಗಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಸವರಾಜ ಬೊಮ್ಮಾಯಿ, 6 ತಿಂಗಳಿನ ನಂತರ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಅಂತೆಯೇ ಕೇವಲ ರಾಷ್ಟ್ರೀಯ ಹಬ್ಬಗಳಲ್ಲಿ ಧ್ವಜಾರೋಹಣ ಮಾಡಲು ನೇಮಕವಾಗುತ್ತಿದ್ದ ಡಾ.ಸಿ.ಎನ್. ಅಶ್ವಥ್ ನಾರಾಯಣ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಧ್ವಜಾರೋಹಣ ಮಾಡಿದ್ದಾರೆ.
ಸಿಎಂ
ಪ್ರಶ್ನಿಸಿದ್ದ
ಸಂಸದ
ಡಿ.ಕೆ.
ಸುರೇಶ್
ಜ.3ರಂದು
ರಾಮನಗರ
ಜಿಲ್ಲಾಡಳಿತ
ಸಂಕೀರ್ಣ
ಮುಂದೆ
ನಿರ್ಮಾಣಗೊಂಡಿದ್ದ
ನಾಡಪ್ರಭು
ಕೆಂಪೇಗೌಡ
ಹಾಗೂ
ಸಂವಿಧಾನ
ಶಿಲ್ಪಿ
ಡಾ.ಬಿ.ಆರ್.
ಅಂಬೇಡ್ಕರ್
ಪುತ್ಥಳಿ
ಅನಾವರಣ
ಕಾರ್ಯಕ್ರಮದಲ್ಲಿ
ಮುಖ್ಯಮಂತ್ರಿ
ಬಸವರಾಜ
ಬೊಮ್ಮಾಯಿ
ಅವರನ್ನು
ನೇರವಾಗಿ
ಜಿಲ್ಲಾ
ಉಸ್ತುವಾರಿ
ಸಚಿವರನ್ನು
ನೇಮಕ
ಮಾಡಿದ್ದೀರಾ?
ಮಾಡಿದ್ದರೆ
ಗೆಜೆಟ್
ನೋಟಿಪಿಕೇಷನ್
ತೋರಿಸಿ
ಎಂದು
ಸಂಸದ
ಡಿ.ಕೆ.
ಸುರೇಶ್
ಪ್ರಶ್ನೆ
ಮಾಡಿದ್ದರು.
ಸಂಸದ ಡಿ.ಕೆ. ಸುರೇಶ್ ಪ್ರಶ್ನೆಯಿಂದ ಮುಜುಗರಕ್ಕೆ ಒಳಗಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಆಗಿದ್ದಲ್ಲಿ ಅಶ್ವಥ್ ನಾರಾಯಣರನ್ನು ರಾಮನಗರ ಜಿಲ್ಲಾ ಉಸ್ತುವಾರಿವಾಗಿ ಯಾರು ನೇಮಕ ಮಾಡಿದ್ದರು? ಎಂದು ಡಿ.ಕೆ. ಸುರೇಶ್ ಆಕ್ಷೇಪ ವ್ಯಕ್ತಪಡಿಸಿದ್ದರು.
ವೇದಿಕೆಯಲ್ಲಿದ್ದ ಡಾ.ಸಿ.ಎನ್. ಅಶ್ವಥ್ ನಾರಾಯಣ, ನಾನು ಎಲ್ಲೂ ಉಸ್ತುವಾರಿ ಸಚಿವ ಎಂದು ಹೇಳಿಕೊಂಡಿಲ್ಲ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಕ್ಕೆ ಸಮಾಜಾಯಿಸಿ ನೀಡಿದ್ದರು. ನಂತರದಲ್ಲಿ ಪಟ್ಟುಬಿಡದೆ ಪ್ರಸ್ತುತ ರಾಮನಗರ ಜಿಲ್ಲಾ ಉಸ್ತುವಾರಿ ಸ್ಥಾನ ದಕ್ಕಿಸಿಕೊಂಡು ಪರೋಕ್ಷವಾಗಿ ಡಿ.ಕೆ. ಸುರೇಶ್ ಗೆ ಸಂದೇಶ ರವಾನಿಸಿದ್ದಾರೆ ಎನ್ನಲಾಗುತ್ತಿದೆ.
ನವ
ರಾಮನಗರ
ನಿರ್ಮಾಣಕ್ಕೆ
ಬದ್ಧ
ಇನ್ನು
ರಾಮನಗರದ
ನೂತನ
ಜಿಲ್ಲಾ
ಉಸ್ತುವಾರಿ
ಸಚಿವ
ಡಾ.ಸಿ.ಎನ್.
ಅಶ್ವಥ್
ನಾರಾಯಣ
ಪ್ರತಿಕ್ರಿಯೆ
ನೀಡಿ,
ರಾಮನಗರ
ಜಿಲ್ಲೆಯ
ಅಭಿವೃದ್ಧಿಯ
ಜತೆ
ಜನತೆಗೆ
ಮೂಲ
ಸೌಕರ್ಯದ
ಕೊರತೆಯಾಗದಂತೆ
ನೋಡಿಕೊಳ್ಳುವ
ಮೂಲಕ
"ನವ
ರಾಮನಗರ'ದ
ಕನಸನ್ನು
ನನಸಾಗಿಸಲು
ಪ್ರಯತ್ನಿಸುವುದಾಗಿ
ತಿಳಿಸಿದರು.
ಮೇಕೆದಾಟು
ವಿಷಯದಲ್ಲಿ
ಕಾಂಗ್ರೆಸ್
ರಾಜಕಾರಣ
ಬುಧವಾರ
ರಾಮನಗರ
ಜಿಲ್ಲಾ
ಕ್ರೀಡಾಂಗಣದಲ್ಲಿ
ಗಣರಾಜ್ಯೋತ್ಸವ
ದಿನದ
ಅಂಗವಾಗಿ
ಧ್ವಜಾರೋಹಣ
ನೆರವೇರಿಸಿದ
ನಂತರ
ಮಾತನಾಡಿದ
ಸಚಿವ
ಅಶ್ವಥ್
ನಾರಾಯಣ,
ಮೇಕೆದಾಟು
ವಿಷಯದಲ್ಲಿ
ಕಾಂಗ್ರೆಸ್
ರಾಜಕಾರಣ
ಮಾಡುತ್ತಿದೆ.
ಯೋಜನೆಯನ್ನು
ನಮ್ಮಿಂದ(ಬಿಜೆಪಿ)
ಮಾತ್ರ
ಅನುಷ್ಠಾನಗೊಳಿಸಲು
ಸಾಧ್ಯ.
ಅದಕ್ಕೆ
ನಾವು
ಬದ್ಧ
ಎಂದು
ಜಿಲ್ಲಾ
ಉಸ್ತುವಾರಿ
ಡಾ.ಸಿ.ಎನ್.
ಅಶ್ವಥ್
ನಾರಾಯಣ
ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯವಿಲ್ಲ, ಬಿಜೆಪಿ ಮಂದಿ ಕಾಂಗ್ರೆಸ್ ಸೇರುವುದು ಗಾಳಿ ಸುದ್ದಿ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ಹೇಳಿದರು.